ಮಧುಗಿರಿ: ತಾಲ್ಲೂಕಿನ ಮಿಡಿಗೇಶಿ ಹೋಬಳಿ ನೀರ್ ಕಲ್ಲು ಗ್ರಾಮದಲ್ಲಿ ಸಿರಿ ಗೆಜ್ಜೆ ಗೆಳೆಯರ ಬಳಗ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಈ ಗಣಪತಿ ವಿಸರ್ಜನೆ ಕಾರ್ಯಕ್ರಮಕ್ಕೆ ಜನಮುಖಿ ಸಂಸ್ಥೆಯ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಎಲ್. ಸಿ.ನಾಗರಾಜ್ ಅವರು ಭಾಗವಹಿಸಿದ್ದರು. ಎಲ್.ಸಿ.ನಾಗರಾಜ್ ರವರನ್ನು ಊರಿನ ಯುವಕರು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಮಾಡಿ ಬರಮಾಡಿಕೊಂಡರು.
ಎಲ್.ಸಿ.ನಾಗರಾಜು ಮಾತನಾಡಿ, ನೀರ್ ಕಲ್ಲು ಬಗ್ಗೆ ದೊಡ್ಡ ಚರಿತ್ರೆ ಇದೆ, ರೈತರ ಸಂಘದಿಂದ ದೊಡ್ಡ ಹೋರಾಟ ಕಟ್ಟಿಕೊಂಡು ಬಂದ ಇತಿಹಾಸ ಈ ಊರಿಗೆ ಇದೆ, ಯಾವ ರೀತಿ ರಾಮಕೃಷ್ಣ ಎಸ್. ಜೊತೆ ನೀರು ಕಲ್ಲು ಸೇರುತ್ತೆ ಅದೇ ರೀತಿ ಮಧುಗಿರಿ ತಾಲೂಕಿನ ಸ್ಥಳೀಯನಾದ ನನ್ನ ಬಾಂಧವ್ಯ ಮಧುಗಿರಿಗೆ ಅಂಟಿಕೊಂಡಿದೆ ಎಂದರು.
ಸ್ಥಳೀಯರನ್ನು ಪ್ರತಿನಿಧಿಯನ್ನಾಗಿ ಮಾಡಿದಾಗ ತಾಲೂಕು ಬೆಳಕಾಗುತ್ತದೆ. ನಮ್ಮ ಜೀವನ ನಮ್ಮ ಹುಟ್ಟು ನಮ್ಮ ಹೋರಾಟ ನಮ್ಮ ಬದುಕು ಎಲ್ಲ ಈ ಸ್ಥಳೀಯ ಭೂಮಿಯಲ್ಲೆ, ನಾವೇನು ಹೊರಗಡೆಯಿಂದ ಇಲ್ಲಿ ವಿಹಾರಕ್ಕೆ ಬಂದಿಲ್ಲ, ಮುಂದಿನ ದಿನಗಳಲ್ಲಿ ಸ್ಥಳೀಯ ಕೈಗಾರಿಕಾ ಉದ್ಯಮ ಸ್ಥಾಪನೆ ಮಾಡುವುದು ನಮಗೆ ಗೊತ್ತಿದೆ ಇದರಿಂದ ಸ್ಥಳೀಯ ಯುವಜನರ ಕೈಗೆ ಶಕ್ತಿ ತುಂಬುವ ಕೆಲಸ ಆಗುತ್ತೆ. ಮಧುಗಿರಿ ತಾಲೂಕಿನ ಪ್ರಕೃತಿಯ ಸಂಪತ್ತನ್ನು ಯಾವ ರೀತಿ ಕಾಪಾಡಬೇಕಾಗಿದೆ ಇನ್ನು ಮುಂದೆ ಅಂತ ಹೋರಾಟವನ್ನು ಆರಂಭಿಸಿದ್ದೇವೆ ಎಂದು ಅವರು ತಿಳಿಸಿದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy