ಪಾವಗಡ: ಭಾರತೀಯ ಸೇನೆಯಲ್ಲಿ 20 ವರ್ಷ ಕರ್ತವ್ಯ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ರಾಜವಂತಿ ಗ್ರಾಮದ ಕೃಷ್ಣಪ್ಪ-ಗಂಗಮ್ಮ ಅವರ ಪುತ್ರ ಮೈಲಾರಲಿಂಗಪ್ಪ ಅವರಿಗೆ ರಾಜವಂತಿ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದರು.
ಮೈಲಾರಲಿಂಗಪ್ಪನವರು ಜಮ್ಮುಕಾಶ್ಮೀರದಲ್ಲಿ ಒಂದು ವರ್ಷ, ಪಂಜಾಬ್ ನಲ್ಲಿ ಎರಡು ವರ್ಷ, ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆದ ಭಾಗವಾಗಿ ಆಫ್ರಿಕಾದಲ್ಲಿ ಕಾರ್ಯನಿರ್ವಹಿಸಿ ಮತ್ತು 11ಪ್ರಸಸ್ತಿಗಳನ್ನು ಪಡೆದುಕೊಂಡು ಸತತವಾಗಿ ಕೆಲಸ ನಿರ್ವಹಿಸಿ, ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ಇವರ ದೇಶ ಸೇವೆಯನ್ನು ಗುರುತಿಸಿ ರಾಜವಂತಿ ಗ್ರಾಮಸ್ಥರು ಸನ್ಮಾನಿಸಿ, ಅಭಿನಂದನೆಗಳನ್ನು ಸಲ್ಲಿಸಿದರು.
ಯಾದವ ಅಧ್ಯಕ್ಷರಾದ ನರಸಿಂಹಪ್ಪ, R C ಅಂಜಿನಪ್ಪ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಪ್ರಧಾನಕಾರ್ಯದರ್ಶಿಗಳಾದ ಮೈಲಾರರೆಡ್ಡಿ, ಪುರಸಭೆ ಸದಸ್ಯರಾದ ಕೋಳಿ ಬಾಲಾಜಿ, ಗಿರೀಶ್, K T ಹಳ್ಳಿ ಚಿಕ್ಕಣ್ಣ, ರಾಮಾಂಜಿನಪ್ಪ, ಪಾಂಡು ಯಾದವ್, ಅನಿಲ್ ಯಾದವ್, ಭರತ್ ಯಾದವ್, ದಿವ್ಯತೇಜು ಯಾದವ್, ರಘುವೀರ್ ರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ದೇವರಹಟ್ಟಿ ನಾಗರಾಜ. (ಕಸಬಾ ಹೋಬಳಿ ) ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB