ತುಮಕೂರು: ಗೋಕುಲ ಗೋಶಾಲೆಯ ರಾಸುಗಳ ಬಗ್ಗೆ ನಮ್ಮತುಮಕೂರು ವರದಿಗೆ ಸ್ಪಂದಿಸಿದ ಕಂದಾಯ ಮತ್ತು ಪಶು ಇಲಾಖೆ, ತಕ್ಷಣದಲ್ಲೇ ಕ್ರಮಕೈಗೊಂಡಿದೆ.
ಗೋಕುಲ ಗೋಶಾಲೆಯ ರಾಸುಗಳ ಸಾವಿನ ಬಗ್ಗೆ ನಮ್ಮ ತುಮಕೂರು ವಾಹಿನಿ ಸವಿವರವಾದ ವರದಿ ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ಗೋಮುಖ ಗೋಶಾಲೆಯಿಂದ ಮಧುಗಿರಿ ತಾಲೂಕಿನ ಸುರಭಿ ಗೋಶಾಲೆಗೆ ಗೋವುಗಳನ್ನು ರವಾನಿಸಲಾಗಿದೆ.
ಪಶು ಇಲಾಖೆಯ ಉಪ ನಿರ್ದೇಶಕ, ಕೊರಟಗೆರೆ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.
ಕೊರಟಗೆರೆ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ನೇತೃತ್ವದ ತಂಡ, ಉಪ ನಿರ್ದೇಶಕ ಪಶು ಪಾಲನ ಮತ್ತು ಪಶು ವೈದ್ಯಕೀಯ ಇಲಾಖೆ ತುಮಕೂರು ಇವರ ಆದೇಶದ ಮೇರೆಗೆ ರಾಸುಗಳು ಸುರಭಿ ಗೋಶಾಲೆಗೆ ರವಾನೆ ಮಾಡಲಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EAp8zUqF6y43cTFbQE5jEU