ಹೆಚ್.ಡಿ.ಕೋಟೆ: ತಾಲ್ಲೂಕಿನ ಚಕ್ಕೊಡನಹಳ್ಳಿ ಗ್ರಾಮ ಹಾಗೂ ದಟ್ಟಹಳ್ಳ ರಸ್ತೆಯ ಒಂಟಿ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು 900 ಗ್ರಾಂ ಗಾಂಜಾ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಹುಣಸೂರು ವಿಭಾಗೀಯ ಅಧಿಕಾರಿ ಮಹೇಶ್, ವೃತ್ತನಿರೀಕ್ಷಕ ಸಬೀರ್ ಹುಸೇನ್, ಉಪನಿರೀಕ್ಷಕ ರಸುಲ್ ಪಾಗವಾಲೆ, ಶೇಖರಪ್ಪ, ಸಿಬ್ಬಂದಿಗಳಾದ ಮೋಹನ್ ಕಬೀರ, ರಿತೀಶ್,ಯೋಗೇಶ್,ವಿಶೇಷಪೋಲಿಸ್ ಅಧಿಕಾರಿ ಮಹದೇವ್,ಮಹಿಳಾ ಸಹಾಯಕ ಉಪನಿರೀಕ್ಷಕಿ ಶಕೀಲವತಿ,ಹಾಗೂ ಸಿಬ್ಬಂದಿ ಹಾಜರಿದ್ದರು.
ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA