ತುಮಕೂರು: ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿರುವ ಸಮಾಜಕಲ್ಯಾಣ ಇಲಾಖೆಯ ಬಾಲಕಿಯರ ಪ್ರೀ ಮೆಟ್ರಿಕ್ ವಸತಿ ನಿಲಯದಲ್ಲಿ, ಕಳೆದ ನಾಲ್ಕೂವರೆ ವರ್ಷಗಳಿಂದ ,ಅಡುಗೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಾಕಲಕ್ಷ್ಮಮ್ಮ ಅವರನ್ನು ಸಮಾಜ ಕಲ್ಯಾಣ ಇಲಾಖೆಯು, ಅಡುಗೆ ಸಹಾಯಕಿ ,ಹುದ್ದೆಯನ್ನು ಪದೋನ್ನತಿಗೊಳಿಸಿ ,ವರ್ಗಾವಣೆಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ತುರುವೇಕೆರೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ,ಸಹಾಯಕ ನಿರ್ದೇಶಕರಾದ ಕುಮಾರಿ ತ್ರಿವೇಣಿ ಹಾಗೂ ಇಲಾಖೆಯ ಸಿಬ್ಬಂದಿ , ಸಹಾಯಕ, ನಿರ್ದೇಶಕರ ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿದ್ದರು.
ಪದೋನ್ನತಿ ಹೊಂದಿದ ಸಾಕ ಲಕ್ಷ್ಮಮ್ಮ ರವರಿಗೆ ಸಕಲ ಗೌರವ, ಅಭಿನಂದನೆಯೊಂದಿಗೆ ಬೀಳ್ಕೊಡುಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಿ ತ್ರಿವೇಣಿ, ಸಾಕ ಲಕ್ಷ್ಮಮ್ಮ ನವರು ಪದೋನ್ನತಿ ಹೊಂದಿ, ಬೇರೆಡೆಗೆ ವರ್ಗಾವಣೆಗೊಂಡು ಹೋಗುತ್ತಿದ್ದಾರೆ. ಅವರು ಇನ್ನೂ ಉನ್ನತ ಹುದ್ದೆಗೆ ಹೋಗಲಿ, ಸರ್ಕಾರಿ ಸೇವೆಯನ್ನು ಉತ್ತಮವಾಗಿ ನಿರ್ವಹಿಸಲಿ ,. ಅವರಿಗೆ ಆರೋಗ್ಯ , ಆಯಸ್ಸು ವೃದ್ಧಿಯಾಗಲಿ ಎಂದು ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ವಾರ್ಡನ್ , ದೇವರಾಜ್, ದ್ವಿತೀಯ ದರ್ಜೆ ಸಹಾಯಕರದ ಮಧುಸೂದನ್, ಕಚೇರಿ, ಸಹಾಯಕ ,ಕಿರಣ್ ನಾಯಕ್, ಕಂಪ್ಯೂಟರ್ ಆಪರೇಟರ್ ಧನಂಜಯ, ಮುಖ್ಯ ಅಡುಗೆ ತಯಾರಕ ದೇವರಾಜು , ಹನುಮಯ್ಯ , ಮಂಜಮ್ಮ ಮುಂತಾದವರು ಹಾಜರಿದ್ದರು
ವರದಿ: ಸುರೇಶ್ ಬಾಬು ಎಂ., ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5