ಪಾವಗಡ: ಗೊಲ್ಲರ ಆರಾಧ್ಯದೈವನಾದ ಪಾಲೇನಹಳ್ಳಿ ಶ್ರೀಚಿತ್ರಲಿಂಗೇಶ್ವರ ಸ್ವಾಮಿಯ ದೇವಸ್ಥಾನ ನಿರ್ಮಾಣದ ಶಿಲಾಸ್ತಂಭ ರಥಯಾತ್ರೆಯನ್ನು ಸುತ್ತಮುತ್ತಲಿನ ಹಳ್ಳಿಗಳಿಂದ ಗೊಲ್ಲ ಜನಾಂಗದವರು ಸಿ.ಕೆ.ಪುರ ಮತ್ತು ದೇವರಹಟ್ಟಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು.
ಈ ಶಿಲಾಸ್ತಂಭ ರಥ ಯಾತ್ರೆಯ ನೇತೃತ್ವವನ್ನು ಮುಖ್ಯ ಇಂಜಿನಿಯರ್ ಸಣ್ಣ ಚಿತ್ತಪ್ಪ ವಹಿಸಿದರು. ಈ ದೇವಸ್ಥಾನವು ಸುಮಾರು ಐವತ್ತು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ಈ ಸಂದರ್ಭದಲ್ಲಿ ಇಂಜಿನಿಯರ್ ಸಣ್ಣಚಿತ್ತಪ್ಪ. ಮುಗ್ದಾಳಬೆಟ್ಟ ನರಸಿಂಹಪ್ಪ. ಕೆ.ಟಿ.ಹಳ್ಳಿ ಚಿಕ್ಕಣ್ಣ, ಕೋಟೆ ಪ್ರಭಾಕರ್. ಕೆಪಿಸಿಸಿ ಒಬಿಸಿ ಪ್ರಧಾನಕಾರ್ಯದರ್ಶಿಗಳಾದ ಮೈಲಾರರೆಡ್ಡಿ. ದೇವದಬೆಟ್ಟ ಚಿತ್ತಯ್ಯಪೂಜಾರ್, ಬೆಸ್ಕಾಂ ಯರ್ರಪ್ಪ, ಗುಂಡಾರ್ಲಹಳ್ಳಿ ಜಯಂತ್ ಇನ್ನು ಅನೇಕ ಯಾದವ ಮುಖಂಡರುಗಳು ಭಾಗವಹಿಸಿದ್ದರು.
ವರದಿ: ದೇವರಹಟ್ಟಿ ನಾಗರಾಜ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy