ಮಧುಗಿರಿ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ರಾಜ್ಯದಲ್ಲಿ ಮುಖ್ಯ ಮಂತ್ರಿ ಆಗಿದ್ದಾಗ ಮಾಡಿದ ಅಭಿವೃದ್ಧಿ ಹಾಗೂ ಪ್ರಸ್ತುತ ರಾಜ್ಯದ ಸಮಗ್ರ ಅಭಿವೃದ್ಧಿಗೆ ಮತ್ತು ಜನತೆಯ ಅನುಕೂಲಕ್ಕಾಗಿ ರೂಪಿಸಿರುವ ಪಂಚರತ್ನ ಯೋಜನೆಯೇ ಜೆ.ಡಿ.ಎಸ್.ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆಯೆಂದು ಮಧುಗಿರಿ ವಿಧಾನ ಸಭಾಕ್ಷೇತ್ರದ ಜೆ.ಡಿ.ಎಸ್.ಅಭ್ಯರ್ಥಿ ಎಂ.ವಿ.ವೀರಭದ್ರಯ್ಯ ಹೇಳಿದರು.
ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, 2018ರಲ್ಲಿ ಪ್ರಕೃತಿ ಕೈ ಕೊಡ್ತು, ಭೀಕರವಾದ ಬರಗಾಲ ಕುಡಿಯೋ ನೀರಿಗೂ ಹಾಹಾಕಾರ , ದನ ಕರುಗಳ ಮೇವಿಗೂ ಸಹ ಹಾಹಾಕಾರ ಸೃಷ್ಟಿಯಾದ ಸಂದರ್ಭದಲ್ಲಿ ಕುಮಾರಸ್ವಾಮಿಯವರು 6 ಕೋಟಿ 80 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿಸಿ, ಆಂಧ್ರಪ್ರದೇಶದಿಂದ ದನ ಕರುಗಳಿಗೆ ಮೇವುತರಿಸಿದ್ದರು ಎಂದರು.
ಯಾವುದಾದರೂ ಕ್ಷೇತ್ರದಲ್ಲಿ ನಾಲ್ಕು ತಿಂಗಳ ಅವಧಿಯಲ್ಲಿ 300 ಬೋರ್ವೆಲ್ ಕೊರೆಸಿ ನೀರಿಗೆ ಅನುಕೂಲ ಮಾಡಿದ್ದು, ಅಂದರೆ ಅದು ಮಧುಗಿರಿ ಕ್ಷೇತ್ರ. ಇದು ಒಂದು ಇತಿಹಾಸ ಎಂದು ಹೇಳಬಹುದು. ಈಗಿರುವ ಬಿಜೆಪಿ ಸರ್ಕಾರ, ಕ್ಷೇತ್ರಕ್ಕೆ ಅನುದಾನ ಕೊಡಲು ತಾರತಮ್ಯ ಮಾಡಿತು. ಆದರೂ ನಾನು ಕ್ಷೇತ್ರಕ್ಕೆ 1,147 ಕೋಟಿ ಅನುದಾನವನ್ನು ತಂದು ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ತುಮುಲ್ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಕೊಂಡವಾಡಿ ಚಂದ್ರಶೇಖರ್, ಪುರಸಭಾ ಅಧ್ಯಕ್ಷರಾದ ತಿಮ್ಮರಾಜು, ಸದಸ್ಯರಾದ ಎಮ್.ಆರ್.ಜಗನ್ನಾಥ್, ಗಂಗರಾಜು, ನಾಣಿ, ಮಾಜಿ ಸದಸ್ಯರಾದ ಶಫೀಕ್, ಸಲೀಂ ಉನ್ನಿಸಾ, ಆಸಿಯ ಶಾಜು, ಮುಖಂಡರಾದ ಸುಮು ಚಂದ್ರಶೇಖರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಸ್.ಡಿ.ಕೃಷ್ಣಪ್ಪ, ವೆಂಕಟೇಶ್ ಕೃಷ್ಣಪ್ಪ, ಹಿರಿಯ ಅಲ್ಪಸಂಖ್ಯಾತರ ಮುಖಂಡರಾದ ಅಲ್ಲೂ ಮಾಮು, ಸಲ್ಮಾನ್ ಬೈಗ್, ಗೋವಿಂದರಾಜು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಇದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA