ತುಮಕೂರು: ಗುಬ್ಬಿ ತಾಲೂಕಿನ ಕಸಬಾ ಹೋಬಳಿಯ ಕರಿಶೆಟ್ಟಿಹಳ್ಳಿಯ ರಸ್ತೆಬದಿ ಮಂಗಳವಾರ ಬೆಳ್ಳಂಬೆಳಗ್ಗೆ ಪತ್ತೆಯಾದ ವ್ಯಕ್ತಿಯ ಮೃತದೇಹ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ವಿಚಾರಗಳು ಬಯಲಾಗಿದೆ.
ಐಯ್ಯಣ್ಣ ಎಂಬುವವರು ತನ್ನ ಪುತ್ರಿ ಸುಮಿತ್ರಾಳನ್ನು 6 ವರ್ಷದ ಹಿಂದೆ ಮೂಡ್ಲಯ್ಯಗೆ ಕೊಟ್ಟು ಮದುವೆ ಮಾಡಿದ್ದರು. ಪತ್ನಿ ಇದ್ದರೂ ಮೂಡ್ಲಯ್ಯಗೆ ಪರಸ್ತ್ರೀಯ ಚಟ ಹೊಂದಿದ್ದನು. ಈ ವಿಚಾರವಾಗಿ ಮೂಡ್ಲಯ್ಯಗೆ ಬುದ್ಧಿಮಾತು ಹೇಳಿದ್ದ ಮಾವ ಐಯ್ಯಣ್ಣ, ಮಗಳ ಜೀವನ ಬೀದಿ ಪಾಲು ಮಾಡಬೇಡ. ಪರಸ್ತ್ರೀ ಜತೆಗಿನ ಸಂಬಂಧವನ್ನು ನಿಲ್ಲಿಸುವಂತೆ ಬುದ್ದಿ ಹೇಳಿದ್ದಾರೆ.
ಆದರೆ ಮೂಡ್ಲಯ್ಯ ಅವರ ಮಾತಿಗೆ ಬೆಲೆ ಕೊಡದೆ ತನ್ನ ಕೆಟ್ಟ ಚಾಳಿ ಮುಂದುವರಿಸಿದ್ದ ಇದರಿಂದ ಬೆಸತ್ತ
ಅಪ್ಪ-ಮಗ ಇಬ್ಬರೂ ಮೂಡ್ಲಯ್ಯನ ಮುಗಿಸಲು ಸಂಚು ರೂಪಿಸಿದ್ದು, ಸೋಮವಾರ ತಡರಾತ್ರಿ ಬೈಕ್ ನಲ್ಲಿ ಬರುತ್ತಿದ್ದ ಮೂಡ್ಲಯ್ಯನನ್ನು ಕರಿಶೆಟ್ಟಿಹಳ್ಳಿ ಬಳಿ ಅಡ್ಡಗಟ್ಟಿದ ಮಾವ-ಬಾಮೈದುನ ಇಬ್ಬರೂ ಆತನ ಮರ್ಮಾಂಗಕ್ಕೆ ಒದ್ದು ಸಾಯಿಸಿದ್ದಾರೆ. ಬಳಿಕ ರಸ್ತೆಬದಿ ನಗ್ನ ಸ್ಥಿತಿಯಲ್ಲಿ ಮೃತದೇಹ ಎಸೆದು, ನಡುರಸ್ತೆಯಲ್ಲಿ ಬೈಕ್ ಬಿಸಾಡಿ ಪರಾರಿಯಾಗಿದ್ದರು.
ಮಂಗಳವಾರ ಬೆಳಗ್ಗೆ ಮ್ರತದೇಹ ಮತ್ತು ಬೈಕ್ ನೋಡಿ ಭಯಗೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆ ಪ್ರಕರಣ ಸಂಬಂಧ ಆರೋಪಿಗಳಾದ ಐಯ್ಯಣ್ಣ, ಸೋಮಶೇಖರ್ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy