ಪಾವಗಡ: ಕರ್ನಾಟಕ ಯಾದವ ಯುವ ವೇದಿಕೆಯ ರಾಜ್ಯ ಘಟಕದಿಂದ ಪಾವಗಡ ತಾಲ್ಲೂಕು ಘಟಕ ರಚಿಸಲಾಯಿತು.
ಪಾವಗಡ ತಾಲ್ಲೂಕಿನ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಕೋಟಗುಡ್ಡ ಪಾಂಡುರಂಗ ಯಾದವ್ ಅವರನ್ನು ನೇಮಿಸಲಾಯಿತು.
ರಾಜ್ಯಾಧ್ಯಕ್ಷರಾದ ಸುಧಾಕರ್ ಯಾದವ್, ಸಂಸ್ಥಾಪಕ ಅಧ್ಯಕ್ಷರಾದ ಹರಿಕೃಷ್ಣಯಾದವ್, ಪ್ರಧಾನ ಕಾರ್ಯದರ್ಶಿ ಸುನಿಲ್ ಯಾದವ್, ಕಾರ್ಮಿಕ ಘಟಕದ ವೇಣು ಯಾದವ್, ಗೌರವ ಅಧ್ಯಕ್ಷರಾದ ಕೆಂಚಮ್ಮನಹಳ್ಳಿ ಗೋಪಾಲ್, ರಾಜ್ಯ ಉಪಾಧ್ಯಕ್ಷರಾದ ಅನಿಲ್ ಕುಮಾರ್ ಯಾದವ್, ರಾಜ್ಯ ಕಾರ್ಯದರ್ಶಿಯಾಗಿ ದಿವ್ಯ ತೇಜ ಯಾದವ್, ಮಹಿಳಾ ಘಟಕದ ಪದಾಧಿಕಾರಿಗಳುˌಹಾಗೂ ಯಾದವ ಮುಖಂಡರಾದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿಗಳಾದ ಮೈಲಾರರೆಡ್ಡಿ ಮತ್ತು ಪುರಸಭೆ ಸದಸ್ಯರಾದ ಕೋಳಿ ಬಾಲಾಜಿ, ಆರ್ಲಹಳ್ಳಿ ರಘುವೀರ್ ರೆಡ್ಡಿ, ˌತಾಲ್ಲೂಕು ಯಾದವ ಹಿರಿಯ ಮುಖಂಡರು ಹಾಗೂ ಯುವ ಮುಖಂಡರುಗಳು ಉಪಸ್ಥಿತರಿದ್ದರು.
ವರದಿ: ನಾಗರಾಜ ದೇವರಹಟ್ಟಿ, (ಕಸಬಾ ಹೋಬಳಿ )ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB