ತುಮಕೂರು: ಬಿಬಿಎಂಪಿ ಸಭೆಯಲ್ಲಿ ಸುರ್ಜೇವಾಲ ಕಾಣಿಸಿಕೊಂಡ ವಿಚಾರಕ್ಕೆ ಸಂಬಂಧಪಟ್ಟಂತೆ ‘ಯಾರು ಯಾವ ದೂರು ಬೇಕಾದರೂ ಕೊಡಲಿ.ನಾನು ಸಿಟಿ ರೌಂಡ್ ನಲ್ಲಿ ಇದ್ದೆ ನನ್ನನ್ನು ಕರೆದುಕೊಂಡು ಹೋಗಲು ಅವರು ಬಂದಿದ್ದರು. ನಾನು ಸುರ್ಜೇವಾಲ ಇಬ್ಬರು ಕಾಫಿ ಕುಡಿಯಲು ಕುಳಿತುಕೊಂಡಿದ್ವಿ’ಎಂದು ಉಪಮುಖ್ಯಮಂತ್ರಿಯ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ
ತುಮಕೂರು ಜಿಲ್ಲೆಯ ಪಾವಗಡದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಂದು ಸುರ್ಜೆವಾಲ ಅವರು ಕೂಡ ಕೂಡ ಬಂದರು, ಸಿಟಿ ರೌಂಡ್ ಹೋಗ್ಬೇಕು. ನನ್ನ ಪಿಕಪ್ ಮಾಡಲು ಬಂದಿದ್ದರು. ಬಿಡಿಎಯಲ್ಲಿ ಒಂದು ಮಿಟಿಂಗ್ ಮಾಡ್ಕೊಂಡು ಹೋಗೋಣ ಅಂತ ನಿರ್ಧಾರ ಮಾಡಿದ್ವಿ.ಅದನ್ನು ಬಿಟ್ಟರೆ ಯಾವ ಆಫೀರ್ಸ್ ಗೂ ಸುರ್ಜೇವಾಲಾಗು ಸಂಬಂಧವಿಲ್ಲ. ಎಂದರು.
ನಾವುಂಟು ಸುರ್ಜೇವಾಲ ಉಂಟು, ಹೋಟ್ಲು ಉಂಟು, ಕಾಫಿ ಉಂಟು. ಯಾರು ಮಿಟಿಂಗ್ ಕರೆದಿರಲಿಲ್ಲ, ನಾವು ಮಿಟಿಂಗ್ ಮಾಡಿಲ್ಲ. ಯಾರು ಮಿಟಿಂಗ್ ಕರೆದಿಲ್ಲ, ಸಭೆ ಮಾಡಿಲ್ಲ ಎಂದರು.
ರಾಜ್ಯಪಾಲರಿಗೆ ಬೇಕಾದ ದೂರು ಕೊಡ್ಲಿ ಇನ್ಯಾರಿಗೆ ಬೇಕಾದ ದೂರು ಕೊಡ್ಲಿ ಇಂಥ ಮೀಟಿಂಗಗಳು ಬಿಜೆಪಿ ಅವರು ಎಷ್ಟು ಮಾಡಿದ್ದಾರೆ ಅನ್ನೋದು ನಮ್ಮತ್ರನು ಪಟ್ಟಿ ಇದೆ ಎಂದರು. ಪಾಪ ಜಮೀರ್ ಅಹಮದವರು ಒಂದು ಸಭೆ ಮಾಡಿದ್ದೀನಿ ಅಂತ ಹೇಳಿಕೊಂಡಿದ್ದಾರೆ ಹಾಗಾಗಿ ಫೋಟೋ ಲೀಕ್ ಆಗಿದೆ ಎಂದರು.
ಕಾಂಗ್ರೆಸ್ ಬಿಜೆಪಿ ಹೊಂದಾಣಿಕೆ ರಾಜಕಾರಣ ಪ್ರತಾಪ್ ಸಿಂಹ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಅವರ ಆಂತರಿಕ ವಿಚಾರಕ್ಕೆ ಮಧ್ಯಪ್ರವೇಶ ಮಾಡಲ್ಲ ಅವರು ಏನು ಬೇಕಾದರೂ ಮಾತಾಡಿಕೊಳ್ಳಿ ಅದು ಅವರ ಪಾರ್ಟಿಗೆ ಬಿಟ್ಟಿದ್ದು ಎಂದರು.
ನಾನು ಸಿಎಂ ಆಗೋದನ್ನು ಪಕ್ಷದವರೇ ತಪ್ಪಿಸಿದ್ರು ಎಂದು ಗೃಹ ಸಚಿವ ಪರಮೇಶ್ವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಹಳ ಸಂತೋಷ, ಅವರ ಅಭಿಪ್ರಾಯ ಏನಿದೆ ಅದನ್ನ ಅವರ ಬಳಿನೇ ಚರ್ಚೆ ಮಾಡಿ ಎಂದು ನುಣುಚಿಕೊಂಡರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA