ಸರಗೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ 12 ವಾರ್ಡ್ನ ನಾಮಧಾರಿ ಸಮುದಾಯದ ಭವನದ ರಸ್ತೆಯ ಬಳಿ ಚರಂಡಿಯಲ್ಲಿ ಕೊಳಚೆ ನೀರು ತುಂಬಿಕೊಂಡು ಹಾಗೂ ಸ್ವಚ್ಛತೆಯಿಲ್ಲದೆ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ.
ಚರಂಡಿಯಲ್ಲಿ ಕೊಳಚೆ ನೀರು ನಿಂತು ಸೊಳ್ಳೆಯ ಉತ್ಪಾದನೆ ಕೇಂದ್ರವಾಗಿ ವಾರ್ಡಿನ ಜನರಿಗೆ ಅನಾರೋಗ್ಯಕ್ಕೆ ತುತ್ತುವಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದರು. 12 ನೇ ವಾರ್ಡ್ ನಾಮಧಾರಿ ಸಮುದಾಯದಲ್ಲಿ ಮದುವೆ ಸಮಾರಂಭ ಮಾಡುವುದರಿಂದ ವಸ್ತುಗಳನ್ನು ಬಿಸಾಕಿ ಹಿಂಬದಿಯ ರಸ್ತೆ ಬದಿಯಲ್ಲಿ ಸಮರ್ಪಕ ಚರಂಡಿಯಿಲ್ಲ ಅಲ್ಲೆ ನೀರು ನಿಂತು ಕೊಂಡುತಿರುಗಾಡಲು ವಾಗುತ್ತಿಲ್ಲ. ಕುಡಿಯುವ ನೀರಿನ ಕೊಳಾಯಿ ಬಳಿ ಬೋಲ್ ವೆಲ್ ಇದ್ದು ಅಲ್ಲಿ ಕೊಳಚೆ ನೀರು ಚರಂಡಿಯಲ್ಲಿ ಸದಾ ನಿಂತಿರುತ್ತದೆ ಎಂದು ಇಲ್ಲಿನ ನಿವಾಸಿಗಳ ಆರೋಪವಾಗಿದೆ.
ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಕೊರತೆ ಎದ್ದು ಕಾಣುತ್ತಿದ್ದು, ಚರಂಡಿಗಳ ಅಭಿವೃದ್ಧಿಯಾಗಿಲ್ಲ ಎಂದು ಅಲ್ಲಿನ ಜನರ ಪಟ್ಟಣ ಪಂಚಾಯಿತಿ ಆಡಳಿತದ ಸುಮಾರು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಆಡಳಿತ ವಿರುದ್ಧ ಆರೋಪಿಸಿದ್ದಾರೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ವಾರ್ಡಿನ ಜನಪ್ರತಿನಿಧಿ ಸಮಸ್ಯೆಗಳ ಬಗ್ಗೆ ಗಮನಹರಿಸುವಂತೆ ಮನವಿ ಸಲ್ಲಿಸಿದರು ಎಂದು ವಾರ್ಡ್ನ ಜನ ಕಿಡಿಕಾರಿದ್ದಾರೆ.
ಮುಚ್ಚಿಹೋದ ಚರಂಡಿಗಳು:
ವಾರ್ಡ್ನಲ್ಲಿ 700 ಮಂದಿ ವಾಸವಿದ್ದು, 600 ಮಂದಿ ಮತದಾರರಿದ್ದಾರೆ. ವಿಸ್ತೀರ್ಣ ಚಿಕ್ಕದು, ಆದರೆ ಬೀದಿಗಳು ಸ್ವಚ್ಛತೆ ಇಲ್ಲದಂತಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಸಮುದಾಯ ಈ ವಾರ್ಡ್ನಲ್ಲಿ ವಾಸವಿದ್ದು, ಸಣ್ಣ ಗಲ್ಲಿಗಳು ವಾರ್ಡಿನಲ್ಲಿದ್ದು ಚರಂಡಿಗಳು ಚಿಕ್ಕದಾಗಿವೆ. ನಾಮಧಾರಿ ಸಮುದಾಯದ ಭವನದ ಹಿಂಬದಿಯ ರಸ್ತೆಯಲ್ಲಿ ಒಂದು ಬದಿಯ ಚರಂಡಿ ಸಂಪೂರ್ಣವಾಗಿ ಮುಚ್ಚಿಹೋಗಿದ್ದು ಇನ್ನೊಂದು ಕಡೆ ಅಲ್ಲಲ್ಲಿ ಹೂಳು ತುಂಬಿಕೊಂಡು ನೀರು ಮುಂದಕ್ಕೆ ಹರಿಯಲಾಗದೆ ಅಲ್ಲೇ ನಿಂತಿದ್ದರಿಂದ ಗಬ್ಬುನಾತ ಬರುತ್ತಿದೆ.
ಮನೆಗೆ ನುಗ್ಗುವ ಕೊಳಚೆ:
ಕೆಲವೆಡೆ ಸಮುದಾಯದ ಭವನದಿಂದ ಬರುವ ಕೊಳಚೆ ನೀರು ಹಾಗೂ ವಸ್ತುಗಳು ಡಾಂಬರೀಕರಣ ರಸ್ತೆ ಚರಂಡಿಗಳನ್ನು ನಿರ್ಮಾಣ ಮಾಡಲಾಗಿದೆ, ಅದರೆ ಮೇಲೆ ಕೊಳಚೆ ನೀರು ತುಂಬಿಕೊಂಡು ರಸ್ತೆಯಲ್ಲ ನೀರು ಬರುವುದರಿಂದ ತಿರುಗಾಡಲು ವಾಗುತ್ತಿಲ್ಲ.ಅದರ ಜೊತೆಯಲ್ಲಿ ರಸ್ತೆ ಬದಿಯಲ್ಲಿ ಕೊಳಚೆ ವಸ್ತುಗಳನ್ನು ಹಾಕುವುದರಿಂದ ನಾಯಿಗಳು ಕಚ್ಚಿಕೊಂಡು ಬಿಸಾಡಿ ಹೋಗುತ್ತವೆ.ಇದರಿಂದ ಸಣ್ಣ ಪುಟ್ಟ ಮಕ್ಕಳು ತಿರುಗಾಡಲು ಭಯಭೀತರಾಗಿದ್ದಾರೆ.
ಕೆಲವು ಬೀದಿಗಳಲ್ಲಿ ಇರುವ ಚರಂಡಿಗಳ ಮೇಲೆ ಕಲ್ಲುಹಾಸು ಹಾಕಲಾಗಿದೆ. ಇನ್ನು ಕೆಲವೆಡೆ ಹಾಗೆಯೇ ತೆರೆದ ಚರಂಡಿಗಳಿವೆ. ದೇವಸ್ಥಾನ ಹಿಂಭಾಗ ಬೀದಿ ಬೀದಿಯಲ್ಲಿ ಸಮರ್ಪಕ ಚರಂಡಿ ಇಲ್ಲದೆ ಮಳೆಗಾಲದಲ್ಲಿ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದ್ದು, ಸಂಬಂಧಪಟ್ಟವರಿಗೆ ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಇಲ್ಲಿ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅಲ್ಲಿನ ಜನ ತಮ್ಮ ನೋವು ತೋಡಿಕೊಂಡಿದ್ದಾರೆ. ಚರಂಡಿ ಅವಶ್ಯಕತೆ ಇದೆ. ಕೆಲವಡೆ ಕಸ ತುಂಬಿದ್ದು ಚರಂಡಿಯ ಕೊಳಚೆ ನೀರು ರಸ್ತೆಗೆ ಹರಿದು ಬರಲಿದೆ.
ವಾರ್ಡ್ನಲ್ಲಿ ಸಮುದಾಯದ ಭವನದಲ್ಲಿ ರಸ್ತೆ ಬದಿಯಲ್ಲಿ ಕೊಳಚೆ ನೀರು ತುಂಬಿಕೊಂಡಿರುವ ಬಗ್ಗೆ ಮುಖಂಡರು ವಾರ್ಡಿನ ಸಮಸ್ಯೆ ನನ್ನ ಗಮನಕ್ಕೆ ಬಂದ ಕೂಡಲೇ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಗಮನಕ್ಕೆ ತಂದು ನಾಮಧಾರಿ ಸಮುದಾಯದ ವ್ಯವಸ್ಥಾಪಕರು ಹಾಗೂ ಅಡಳಿತ ಮಂಡಳಿಗೆ ಸುಮಾರು ಬಾರಿ ನೋಟಿಸ್ ನೀಡಲಾಗಿದೆ. ಅದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ.ಇದರ ನಿರ್ಲಕ್ಷಿಸಿದರೆ. ಎನ್ ಇಟಿ ಕಾಯ್ದೆ ಪ್ರಕಾರ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಜರುಗಿಸಲು ಜಿಲ್ಲಾಡಳಿತವರಿಗೆ ಮನವಿ ಮಾಡಲಾಗಿದೆ.
ಪಟ್ಟಣದ ನಮ್ಮ ವಾರ್ಡಿನ ರಸ್ತೆಯಲ್ಲಿ ನಾಮಧಾರಿ ಸಮುದಾಯದ ಭವನ ಇದೆ ವ್ಯವಸ್ಥಾಪಕರು ಕಸದ ತೊಟ್ಟಿ ಮಾಡಿಕೊಂಡು, ಗಬ್ಬು ವಾಸನೆಯಿಂದ ಕೂಡಿದೆ. ಶಾಲೆ ಕಾಲೇಜಿಗೆ ಹೋಗುವ ಮಕ್ಕಳು ಮೂಗು ಹಿಡಿದು ಹೋಗುವಂತಾಗಿದೆ. ಎದುರಿನ ಚರಂಡಿಗೆ ಪ್ಲಾಸ್ಟಿಕ್ ವಸ್ತು ಮತ್ತು ಕಸ ಚರಂಡಿಗೆ ಹಾಕುತ್ತಿದ್ದು, ನೀರು ಹೋಗದೆ ಅಲ್ಲೇ ನಿಂತು ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ. ಸಮರ್ಪಕ ಡ್ರೈನೇಜ್ ಇಲ್ಲ. ಇರುವ ಹಳೆ ಚರಂಡಿ ತೀರ ಹಳೆದಾಗಿ ಶಿಥಿಲಗೊಂಡಿದೆ, ಚರಂಡಿ ನೀರು ಹೆಚ್ಚಾದಾಗ ರಸ್ತೆಗೆ ಹರಿದು ಬರಲಿದೆ.ವಾರ್ಡಿನ ಜನರ ಸಮಸ್ಯೆಗಳಿಗೆ ಸ್ಪಂದಿಸಿ ವಾರ್ಡ್ ಅಭಿವೃದ್ಧಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಹರಿಸಲಿ ಎಂದು ಒತ್ತಾಯಿಸಿದ್ದಾರೆ ಗಿರೀಶ್ ವಾರ್ಡಿನ ನಿವಾಸಿ ಸರಗೂರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————