ಕ್ರೈಂ ವಿಶೇಷ ವರದಿ : ಮಂಜುಸ್ವಾಮಿ ಎಂ ಎನ್ ಕೊರಟಗೆರೆ
ಕೊರಟಗೆರೆ: ಪಾರಿವಾಳದ ಹಣದ ವಿಚಾರಕ್ಕೆ ಜಗಳವಾಗಿ ತಲ್ವಾರ್ ಗ್ಯಾಂಗ್ ನಿಂದ ಯುವಕನ ಮೇಲೆ ಮಂಗಳವಾರ ಸಂಜೆ ಮಾರಣಾಂತಿಕ ಹಲ್ಲೆ ನಡೆದಿದೆ.
ಕೊರಟಗೆರೆ ಪಟ್ಟಣದ ಕಾಳಿದಾಸ ಬಡಾವಣೆ ಹಿಂಭಾಗ ಸಿನಿಮಾ ಶೈಲಿಯಲ್ಲಿ ಲಾಂಗ್ ಹಿಡಿದು ಗಲಾಟೆ ಮಾಡಿದ್ದ ಯುವಕರನ್ನು ಪಿಎಸೈ ಚೇತನಗೌಡ ನೇತೃತ್ವದ ಪೊಲೀಸರ ತಂಡ ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಅಜಯ್ ಎಂಬಾತನಿಂದ ಸಂಜಯ್ 2ಸಾವಿರಕ್ಕೆ ಪಾರಿವಾಳ ಖರೀದಿಸಿ 800ರೂ ಅಡ್ವಾನ್ಸ್ ನೀಡಿದ್ದಾರೆ. ಉಳಿದ ಹಣ ಕೇಳಿದಾಗ ಗಲಾಟೆ ನಡೆದಿದೆ.
ಉಳಿದ ಹಣ 1200 ರೂ ಕೊಡುವಂತೆ ಅಜಯ್ ಒತ್ತಡಕ್ಕೆ ಆಕ್ರೋಶಗೊಂಡ ಸಂಜಯ್ ಬಾಕಿ ಹಣ ಕೊಡೋದಾಗಿ ಕರೆಯಿಸಿ ಲಾಂಗ್ ತೆಗೆದು ಕೊಲೆ ಮಾಡಲು ಯತ್ನಿಸಿದ್ದಾನೆ.
ಕೊಲೆಯತ್ನದ ಆರೋಪಿ ಸಂಜಯ್, ಗಣೇಶ, ನಂದಾಕುಮಾರ್, ತೇಜಾ ಸೇರಿದಂತೆ ಅಪ್ರಾಪ್ತ ವಯಸ್ಕರಾದ 6ಜನ ಯುವಕ ಪೋಲು ಗ್ಯಾಂಗ್ ಪೊಲೀಸರ ಅತಿಥಿ ಆಗಿದ್ದಾರೆ.
ಮಕ್ಕಳ ಬಗ್ಗೆ ಪೋಷಕರ ಜಾಗೃತಿ ಅಗತ್ಯ:
ವ್ಯಾಸಂಗ ಮಾಡುತ್ತಿರುವ ಹದಿಹರಿಯದ ತಮ್ಮ ಮಕ್ಕಳ ಬಗ್ಗೆ ಪೋಷಕರು ಹೆಚ್ಚಿನ ಕಾಳಜಿ ಮತ್ತು ಜಾಗೃತಿ ವಹಿಸಬೇಕಾಗಿದೆ. ಸಂಜೆಯಾದ್ರೇ ಮಕ್ಕಳ ಮೇಲೆ ನಿಗಾ ವಹಿಸಿ ಪೋಲಿ ಹುಡುಗರ ಜೊತೆ ಹೋಗದಂತೆ ನೋಡಿಕೊಳ್ಳಬೇಕು. ಇಲ್ಲವಾದ್ರೇ ಪೋಷಕರು ಪಶ್ಚಾತ್ತಾಪ ಪಡುವುದು ಖಚಿತ ಎಂದು ಪಿಎಸೈ ಚೇತನ್ ಗೌಡ ಮನವಿ ಮಾಡಿದ್ದಾರೆ.
ಮಾದಕ ವಸ್ತು ಮಾರಾಟದ ಜಾಲದ ಅರಿವು:
ಕೊರಟಗೆರೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯ ಬಗ್ಗೆ ಮಾಹಿತಿ ಸಿಕ್ಕದ ತಕ್ಷಣವೇ ನೇರವಾಗಿ ನನಗೇ ಮಾಹಿತಿ ನೀಡಬೇಕಿದೆ. ಪೊಲೀಸರಿಗೆ ಮಾಹಿತಿ ನೀಡಿದ ವ್ಯಕ್ತಿಗಳ ಹೆಸರು ಗೌಪ್ಯತೆ ಕಾಪಾಡುತ್ತೇವೆ. ಕಾನೂನು ಸುವವ್ಯಸ್ಥೆ ರಕ್ಷಣೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಪಿಎಸೈ ಚೇತನಗೌಡ ಮನವಿ ಮಾಡಿದ್ದಾರೆ.
ಗಲಾಟೆಯಲ್ಲಿ ಅಜಯ್ ಅವರ ಬಾವ ಸಂಪತ್ ನ ಕೈಬೆರಳುಗಳಿಗೆ ಗಾಯಗಳಾಗಿವೆ. ಸ್ಥಳಕ್ಕೆ ಪಿಎಸೈ ಚೇತನ್ ಗೌಡ, ಎಎಸೈ ಯೊಗೀಶ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. 6ಜನ ಯುವಕರ ಮೇಲೆ ಪ್ರಕರಣ ದಾಖಲಾಗಿದೆ.