nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಾರ್ಕೋನಹಳ್ಳಿ ಜಲಾಶಯದಲ್ಲಿ ಕೊಚ್ಚಿ ಹೋಗಿದ್ದ ಇಬ್ಬರ ಶವ ಪತ್ತೆ: ಮತ್ತಿಬ್ಬರ ಶವಕ್ಕಾಗಿ ಮುಂದುವರಿದ ಶೋಧ

    October 9, 2025

    ಹೋರಾಟ ನಮ್ಮದು, ಹಕ್ಕು ಇನ್ನೊಬ್ಬರದ್ದಾ?: ಕುರುಬರನ್ನು ಎಸ್ ಟಿ ಪಟ್ಟಿಗೆ ಸೇರಿಸುವುದಕ್ಕೆ ವಿರೋಧ

    October 9, 2025

    ಮಗುವಿಗೆ ಜನ್ಮ ನೀಡಿದ 15 ವರ್ಷದ ಬಾಲಕಿ: ಆರೋಪಿಯ ಬಂಧನ

    October 8, 2025
    Facebook Twitter Instagram
    ಟ್ರೆಂಡಿಂಗ್
    • ಮಾರ್ಕೋನಹಳ್ಳಿ ಜಲಾಶಯದಲ್ಲಿ ಕೊಚ್ಚಿ ಹೋಗಿದ್ದ ಇಬ್ಬರ ಶವ ಪತ್ತೆ: ಮತ್ತಿಬ್ಬರ ಶವಕ್ಕಾಗಿ ಮುಂದುವರಿದ ಶೋಧ
    • ಹೋರಾಟ ನಮ್ಮದು, ಹಕ್ಕು ಇನ್ನೊಬ್ಬರದ್ದಾ?: ಕುರುಬರನ್ನು ಎಸ್ ಟಿ ಪಟ್ಟಿಗೆ ಸೇರಿಸುವುದಕ್ಕೆ ವಿರೋಧ
    • ಮಗುವಿಗೆ ಜನ್ಮ ನೀಡಿದ 15 ವರ್ಷದ ಬಾಲಕಿ: ಆರೋಪಿಯ ಬಂಧನ
    • ಪತ್ನಿ, ಅತ್ತೆಯಿಂದ ಕಿರುಕುಳ: ಗಂಡ ಆತ್ಮಹತ್ಯೆಗೆ ಯತ್ನ!
    • ತುಮಕೂರು | ಮುಕ್ತ ವಿಶ್ವವಿದ್ಯಾಲಯ:  ಜುಲೈ ಆವೃತ್ತಿ ಪ್ರವೇಶಾತಿಗೆ ಅಕ್ಟೋಬರ್ 15 ಕೊನೆಯ ದಿನಾಂಕ
    • ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮೇಲೆ ಶೂ ಎಸೆದ ವಕೀಲನನ್ನು ಗಲ್ಲಿಗೇರಿಸಿ: ದಸಂಸ ಒತ್ತಾಯ
    • ಸರಗೂರು | ಕ್ರೀಡಾಂಗಣಕ್ಕಾಗಿ ಜಮೀನು: ದಾಖಲೆ ನೀಡಲು ಖಾತೆದಾರರಿಗೆ ತಹಶೀಲ್ದಾರ್ ಸೂಚನೆ
    • ನಿಯಮ ಉಲ್ಲಂಘನೆ: ಬಿಗ್ ಬಾಸ್ ಮನೆಗೆ ಬೀಗ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜೈವಿಕ ಇಂಧನ ದಿನಾಚರಣೆಯ ಪ್ರಯುಕ್ತ ಗಿಡಗಳ ನಾಟಿ
    ತುಮಕೂರು August 7, 2025

    ಜೈವಿಕ ಇಂಧನ ದಿನಾಚರಣೆಯ ಪ್ರಯುಕ್ತ ಗಿಡಗಳ ನಾಟಿ

    By adminAugust 7, 2025No Comments2 Mins Read
    jaivika indhana

    ತುಮಕೂರು : ಜೈವಿಕ ಇಂಧನ ಸಂಶೋಧನೆ ಮತ್ತು ಗುಣಮಟ್ಟ ಖಾತ್ರಿ ಪ್ರಯೋಗಾಲಯ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ  ಆಯೋಜನೆ ಮಾಡಲಾಗಿತ್ತು.

    ಈ ಕಾರ್ಯಕ್ರಮದ ಪ್ರಯುಕ್ತ ಕೃಷಿ ವಿಶ್ವ ವಿದ್ಯಾನಿಲಯದಿಂದ ನೂರು ಅರಣ್ಯ ಸಸಿಗಳನ್ನು ಕೊರಟಗೆರೆ ತಾಲ್ಲೂಕಿನ ತೀತಾ ಗ್ರಾಮಕ್ಕೆ ನೀಡಲಾಗಿತ್ತು.


    Provided by
    Provided by
    Provided by

    ಈ ಕಾರ್ಯಕ್ರಮವನ್ನು ಉದ್ದೇಶಿಸಿ ಸಂತೋಷ ಮಾತನಾಡಿ ಜೈವಿಕ ಇಂಧನ ಮತ್ತು ಅರಣ್ಯ ಸಸಿಗಳ ಬಗ್ಗೆ ಕಾರ್ಯಕ್ರಮವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು  ಜೈವಿಕ ಇಂಧನಗಳನ್ನು ಸಸ್ಯ, ಪ್ರಾಣಿ ಅಥವಾ ಸೂಕ್ಷ್ಮ ಜೀವಿಗಳಿಂದ ಪಡೆಯಲಾಗುತ್ತದೆ. ಮುಖ್ಯವಾಗಿ ಬಳಕೆಯಲ್ಲಿರುವ ಜೈವಿಕ ಇಂಧನಗಳೆಂದರೆ-ಜೈವಿಕ ಡೀಸಲ್, ಜೈವಿಕ ಎಥನಾಲ್, ಬಯೋಗ್ಯಾಸ್ ಇತ್ಯಾದಿ ಇವು ಪರಿಸರ ಸ್ನೇಹಿ ನವೀಕರಿಸಲಾಗುವ ಇಂಧನ ಮೂಲಗಳು, ಇವು ಇಂಗಾಲ ತಟಸ್ಥ, ಅಂದರೆ-ಜೈವಿಕ ಇಂಧನಗಳನ್ನು ಉರಿಸಿದಾಗ ಬರುವ ಇಂಗಾಲದ ಡೈ ಆಕ್ಷಡನ್ನು ಸಸ್ಯಗಳು ಹೀರಿಕೊಂಡು ವಾತಾವರಣದಲ್ಲಿರುವ ಒಟ್ಟು ಇಂಗಾಲದ ಅಂಶವನ್ನು ಸಮಪ್ರಮಾಣದಲ್ಲಿರಿಸುತ್ತವೆ.

    ಜೈವಿಕ ಡೀಸಲ್ : ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಬೆಳೆಯುವ ಹೊಂಗೆ, ಜಮೋಘ, ಜೀವುಸಿಪ್ಪೆ ಸಿಮರೂಬ ಮತ್ತಿತರ ಅಖಾದ್ಯ ಎಣ್ಣೆ ಬೀಜಗಳು ಮತ್ತು ಪ್ರಾಣಿಜನ್ಯ ಕೊಬ್ಬಿನಿಂದ ಜೈವಿಕ ಡೀಸಲ್ ಅನ್ನು ತಯಾರಿಸಬಹುದು. ಈ ಎಣ್ಣೆಗಳಲ್ಲಿ ಜಿಡ್ಡಿನಾಂಶ ಹೆಚ್ಚಾಗಿದ್ದು ಅದನ್ನು ರಾಸಾಯನಿಕ ಕ್ರಿಯೆಯಿಂದ ಸಂಸ್ಕರಿಸಿ ಜೈವಿಕ ಡೀಸಲ್ ಉತ್ಪಾದಿಸಲಾಗುತ್ತದೆ. ಇದನ್ನು ನೇರವಾಗಿ ಅಥವಾ ಡೀಸಲ್ ಜೊತೆ ವಿವಿಧ ಪ್ರಮಾಣಗಳಲ್ಲಿ ಡೀಸಲ್ ಇಂಜಿನ್‌ಗಳಲ್ಲಿ ಬಳಸಬಹುದು.

    ಜೈವಿಕ ಎಥನಾಲ್ : ಕಬ್ಬು, ಸಿಹಿ ಜೋಳ, ಹಣ್ಣಿನ ತ್ಯಾಜ್ಯ, ಕೃಷಿ ತ್ಯಾಜ್ಯ, ಹುಲ್ಲು ಇತ್ಯಾದಿಗಳು ಶರ್ಕರ ಪಿಷ್ಪದಿಂದ ಕೂಡಿದ್ದು, ಎಥನಾಲ್ ತಯಾರಿಸಲು ಯೋಗ್ಯ ಕಚ್ಚಾವಸ್ತುಗಳಾಗಿರುತ್ತವೆ. ಈ ವಸ್ತುಗಳನ್ನು ಸೂಕ್ತ ಜೀವಿಗಳ ಸಹಾಯದಿಂದ ಹುದುಗಿಸುವಿಕೆಯ ಮೂಲಕ ಜೈವಿಕ ಎಥನಾಲನ್ನು ಉತ್ಪಾದಿಸಬಹುದು. ಇದನ್ನು ಪೆಟ್ರೋಲ್‌ನೊಂದಿಗೆ ವಿವಿಧ ಪ್ರಮಾಣಗಳಲ್ಲಿ ಬೆರೆಸಿ ಬಳಸಬಹುದು.

    ಜೈವಿಕ ಅನಿಲ : ಕೃಷಿ ತ್ಯಾಜ್ಯ, ಗೃಹ ತ್ಯಾಜ್ಯ, ಕೈಗಾರಿಕಾ ತ್ಯಾಜ್ಯಗಳಂತಹ ಜೈವಿಕ ತ್ಯಾಜ್ಯವಸ್ತುಗಳನ್ನು ಬಳಸಿ ಬಯೋಗಾನ್ ಉತ್ಪಾದಿಸಬಯದು. ಈ ಕಚ್ಚಾ ವಸ್ತುಗಳು ಸ್ಥಳೀಯವಾಗಿ ಲಭ್ಯವಿದ್ದು ಅಡುಗೆ ಅನಿಲವಾಗಿ, ವಿದ್ಯುತ್ ಉತ್ಪಾದನೆ ಮತ್ತು ವಾಹನದಲ್ಲಿ ಬಳಸಬಹುದಾಗಿದೆ.

    ಈ ಕಾರ್ಯಕ್ರಮವನ್ನು ಉದ್ದೇಶಿಸಿ ಪಿಡಿಓ ರಮೇಶ್ ಅವರು ಜೈವಿಕ ಇಂಧನದ ಮಹತ್ವ ಮತ್ತು ಪ್ರಯೋಜನವನ್ನು ಹೇಳಿದರು. ತದನಂತರ ಶಾಲೆಯ ಶಾಲೆಯ ಆವರಣದಲ್ಲಿ ಗಿಡವನ್ನು ಗ್ರಾಮಸ್ಥರು ಮತ್ತು ಪಿಡಿಒ ರಮೇಶ್ ಮತ್ತು ಮಕ್ಕಳಿಂದ ನೆಡಲಾಯಿತು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಹೋರಾಟ ನಮ್ಮದು, ಹಕ್ಕು ಇನ್ನೊಬ್ಬರದ್ದಾ?: ಕುರುಬರನ್ನು ಎಸ್ ಟಿ ಪಟ್ಟಿಗೆ ಸೇರಿಸುವುದಕ್ಕೆ ವಿರೋಧ

    October 9, 2025

    ಪತ್ನಿ, ಅತ್ತೆಯಿಂದ ಕಿರುಕುಳ: ಗಂಡ ಆತ್ಮಹತ್ಯೆಗೆ ಯತ್ನ!

    October 8, 2025

    ತುಮಕೂರು | ಮುಕ್ತ ವಿಶ್ವವಿದ್ಯಾಲಯ:  ಜುಲೈ ಆವೃತ್ತಿ ಪ್ರವೇಶಾತಿಗೆ ಅಕ್ಟೋಬರ್ 15 ಕೊನೆಯ ದಿನಾಂಕ

    October 8, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕುಣಿಗಲ್

    ಮಾರ್ಕೋನಹಳ್ಳಿ ಜಲಾಶಯದಲ್ಲಿ ಕೊಚ್ಚಿ ಹೋಗಿದ್ದ ಇಬ್ಬರ ಶವ ಪತ್ತೆ: ಮತ್ತಿಬ್ಬರ ಶವಕ್ಕಾಗಿ ಮುಂದುವರಿದ ಶೋಧ

    October 9, 2025

    ಕುಣಿಗಲ್ : ಮಾರ್ಕೋನಹಳ್ಳಿ ಜಲಾಶಯದ ನೀರಿನಲ್ಲಿ ಕೊಚ್ಚಿ ಹೋಗಿದ್ದ ನಾಲ್ವರ ಪೈಕಿ ಬುಧವಾರ ಇಬ್ಬರ ಶವ ಪತ್ತೆಯಾಗಿವೆ. ಮತ್ತಿಬ್ಬರ ಪತ್ತೆಗಾಗಿ…

    ಹೋರಾಟ ನಮ್ಮದು, ಹಕ್ಕು ಇನ್ನೊಬ್ಬರದ್ದಾ?: ಕುರುಬರನ್ನು ಎಸ್ ಟಿ ಪಟ್ಟಿಗೆ ಸೇರಿಸುವುದಕ್ಕೆ ವಿರೋಧ

    October 9, 2025

    ಮಗುವಿಗೆ ಜನ್ಮ ನೀಡಿದ 15 ವರ್ಷದ ಬಾಲಕಿ: ಆರೋಪಿಯ ಬಂಧನ

    October 8, 2025

    ಪತ್ನಿ, ಅತ್ತೆಯಿಂದ ಕಿರುಕುಳ: ಗಂಡ ಆತ್ಮಹತ್ಯೆಗೆ ಯತ್ನ!

    October 8, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.