nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹನೂರು ಶೂಟೌಟ್ ಪ್ರಕರಣ: ಸಿಬ್ಬಂದಿ ಕಾರ್ಯಾಚರಣೆಯನ್ನು ವಿಧಾನಸಭೆಯಲ್ಲಿ ಸಮರ್ಥಿಸಿಕೊಂಡ ಸಚಿವ ರಾಮಲಿಂಗಾರೆಡ್ಡಿ!

    August 17, 2026

    ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದ ಜೆಡಿಎಸ್ ನಾಯಕನ ಬಂಧನ!

    August 17, 2026

    ಚಿತ್ರದುರ್ಗ: ಬಾವಿಯಲ್ಲಿ ನವವಿವಾಹಿತೆ ಶವ ಪತ್ತೆ – ಕೊಲೆ ಆರೋಪ

    August 17, 2026
    Facebook Twitter Instagram
    ಟ್ರೆಂಡಿಂಗ್
    • ಹನೂರು ಶೂಟೌಟ್ ಪ್ರಕರಣ: ಸಿಬ್ಬಂದಿ ಕಾರ್ಯಾಚರಣೆಯನ್ನು ವಿಧಾನಸಭೆಯಲ್ಲಿ ಸಮರ್ಥಿಸಿಕೊಂಡ ಸಚಿವ ರಾಮಲಿಂಗಾರೆಡ್ಡಿ!
    • ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದ ಜೆಡಿಎಸ್ ನಾಯಕನ ಬಂಧನ!
    • ಚಿತ್ರದುರ್ಗ: ಬಾವಿಯಲ್ಲಿ ನವವಿವಾಹಿತೆ ಶವ ಪತ್ತೆ – ಕೊಲೆ ಆರೋಪ
    • ಖರ್ಗೆ ಭಾಷಣ ಮಾಡಿದ್ದ ಸ್ಥಳದಲ್ಲಿ ಶುದ್ಧೀಕರಣ ಹೋಮ: ವಿಧಾನ ಪರಿಷತ್ ನಲ್ಲಿ ಖಂಡನಾ ನಿರ್ಣಯ ಅಂಗೀಕಾರ
    • ಆರ್ ಎಸ್ ಎಸ್ ಜಾತಿವಾದ, ಕೋಮುವಾದದ ‘ಸಾವಿರ ತಲೆಯ ವಿಷಪೂರಿತ ಹಾವು’: ಸಚಿವ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ
    • ಹನೂರು ಶೂಟೌಟ್ ಪ್ರಕರಣ: ರಾಜ್ಯ ಸರ್ಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ
    • ಜೈಲಿನಲ್ಲೇ ಪ್ರಜ್ವಲ್ ರೇವಣ್ಣಗೆ ಡಿಜಿಪಿ ಅಲೋಕ್ ಕುಮಾರ್ ‘ಸ್ಪೆಷಲ್ ಕ್ಲಾಸ್’!
    • ಬೆಳಕುಣಿ ಚೌದ್ರಿ ಗ್ರಾಮದಲ್ಲಿ ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ 106ನೇ ಜಯಂತಿ ಆಚರಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶಾಸಕಿ ಪೂರ್ಣಿಮಾ ಶ್ರೀನಿವಾಸ್  ಮತ್ತು ಪತಿ ಡಿ .ಟಿ.ಶ್ರೀನಿವಾಸ್  ವಿರುದ್ದ ಕಾಡುಗೊಲ್ಲರ ಗುಡುಗು
    ಜಿಲ್ಲಾ ಸುದ್ದಿ January 21, 2022

    ಶಾಸಕಿ ಪೂರ್ಣಿಮಾ ಶ್ರೀನಿವಾಸ್  ಮತ್ತು ಪತಿ ಡಿ .ಟಿ.ಶ್ರೀನಿವಾಸ್  ವಿರುದ್ದ ಕಾಡುಗೊಲ್ಲರ ಗುಡುಗು

    By adminJanuary 21, 2022No Comments2 Mins Read
    kadugolla

    ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ  ಕಾಡುಗೊಲ್ಲರ ನಿಗಮದ ವಿಚಾರವಾಗಿ  ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮತ್ತು ಅವರ ಪತಿ ಡಿ.ಟಿ.ಶ್ರೀನಿವಾಸ್ ಆಂತರಿಕ ವಿರೋಧದ  ಧೋರಣೆಯನ್ನು ಹೊಂದಿದ್ದಾರೆಂದು ಬಿ ಜೆ ಪಿ ಪಕ್ಷದ ತಾಲ್ಲೂಕಿನ ಅಧ್ಯಕ್ಷರಾದ ವಿಶ್ವನಾಥ್ ಯಾದವ್  ಅಭಿಪ್ರಾಯಪಟ್ಟರು.

    ಹಿರಿಯೂರು ನಗರದ  ಹೊರವಲಯದಲ್ಲಿರುವ ಕೋಳಿ ಪ್ರಭುಯಾದವ್ , ರವರ  ತೋಟದ  ಮನೆಯಲ್ಲಿ ಆಯೋಜಿಸಿದ್ದ ಕಾಡುಗೊಲ್ಲರ ಚಿಂತನ-ಮಂಥನ ಸಭೆಯಲ್ಲಿ ಮಾತನಾಡಿದ  ಅವರು, ಶಾಸಕರು, ಮತ್ತು ಅವರ ಪತಿ ಸೇರಿ ಅಧಿಕಾರ ಪಡೆಯಲು ನಮ್ಮನ್ನ ಬಳಸಿಕೊಂಡು ಸಿಕ್ಕಅಧಿಕಾರದ ಅಮಲಿನಲ್ಲಿ ಕಾಡುಗೊಲ್ಲರಿಗೆ ದ್ರೋಹ ಬಗೆಯುವುದರಲ್ಲಿ ನಿರಂತರವಾಗಿದ್ದಾರೆ ಎಂದು ಆರೋಪಿಸಿದರು.

    ಬುಡಕಟ್ಟು ಪರಂಪರೆಯನ್ನು ಹೊಂದಿರುವ ಕಾಡುಗೊಲ್ಲ ಸಮಾಜ ಸರ್ಕಾರದ ಹಲವಾರು ಸಲತ್ತುಗಳಿಂದ ವಂಚಿತವಾಗಿದೆ. ಸಮಾಜದಲ್ಲಿನ ಪಟ್ಟಭದ್ರರು ಸಮಾಜವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಆದರೆ ಶಾಸಕಿ ಪೂರ್ಣಿಮಾ  ಅವರು ಕುಲಶಾಸ್ತ್ರ ಅಧ್ಯಯನವನ್ನು ಮರುಪರಿಶೀಲಿಸುವಂತೆ  ಸರ್ಕಾರಕ್ಕೆ ಪತ್ರ ಬರೆದಿದ್ದಾರೆ . ಕಾಡುಗೊಲ್ಲ ಅಭಿವೃದ್ದಿ ನಿಗಮದ ಘೋಷಣೆಗೆ ತಡೆಯೊಡ್ಡಿ ವಿಳಂಭ ಧೋರಣೆಗಳೊಂದಿಗೆ  ದಿನಗಳನ್ನು ಮಾಡುತ್ತಿದ್ದಾರೆ  ಎಂಬುದಾಗಿ  ಜಿಲ್ಲಾ ಪಂಚಾಯತಿ  ಮಾಜಿ ಅಧ್ಯಕ್ಷ ಕಾಡುಗೊಲ್ಲ ಸಮಾಜದ ಜಿಲ್ಲಾಧ್ಯಕ್ಷರಾದ ಮೀಸೆ ಮಹಲಿಂಗಪ್ಪ ನವರು ತಿಳಿಸಿದರು.

    ಹಿರಿಯೂರು ತಾಲ್ಲೂಕಿನ ನಗರಸಭೆ  ಸ್ಥಾಯಿ ಸಮಿತಿ ಅಧ್ಯಕ್ಷರಾದ  ಚಿತ್ರಜಿತ್ ಯಾದವ್ ಅವರು ಮಾತನಾಡಿ, ಕಾಡುಗೊಲ್ಲ ಸಮಾಜವನ್ನು ಎಸ್ ಟಿ ಪಟ್ಟಿಗೆ ಸೇರಿಸಲು ಹೋರಾಟವನ್ನು  ಚುರುಕುಗೊಳಿಸಬೇಕು . ಶೀಘ್ರ ನಿಗಮ ಸ್ಥಾಪಿಸಲು ಸರ್ಕಾರಕ್ಕೆ ಒತ್ತಾಯಿಸಬೇಕು ಎಂದರು.

    ತಾಲ್ಲೂಕು ಬಿ ಜೆ ಪಿ ಅಧ್ಯಕ್ಷರಾದ ವಿಶ್ವನಾಥ್  ಮಾತನಾಡಿ, ನಾವೇ  ನೆಲೆ ಕೊಟ್ಟಂತ ಜನ ಇಂದು ನಮ್ಮನ್ನೆ ತುಳಿಯಲು ಹೊರಟಾಗ ನಾವೇಕೆ ಗಂಡಸರಾಗಬಾರದು , ಸಮಾಜದಲ್ಲಿ ಅವರಿಗೆ  ಬೆಲೆ ಬಂದಿದ್ದು, ಈ ಕಾಡುಗೊಲ್ಲ ಸಮಾಜದಿಂದ ಸರ್ಕಾರಕ್ಕೆ ತಲೆನೋವು ತರುವಂತಹ ರಾಜಕೀಯ ಧೋರಣೆಗಳಿಂದ  ಇಂದು ನಾವೆಲ್ಲಾ  ಅಸ್ತಿತ್ವಕ್ಕಾಗಿ ಹೋರಾಟ  ಮಾಡಬೇಕಾದ ಸಂದರ್ಭ ಇದೀಗ ಬಂದಿದೆ. ಇವರಿಂದ ಕಾಡುಗೊಲ್ಲರಿಗೆ  ನೆಲೆ  ಇಲ್ಲದಂತಾಗಿದೆ ಎಂದು ಶಾಸಕಿ ಪೂರ್ಣಿಮಾ ಮತ್ತು ಪತಿ ಶ್ರೀನಿವಾಸ್ ಹೆಸರು ಬಳಸದೇ ತಾಲ್ಲೂಕು ಬಿಜೆಪಿ ಅಧ್ಯಕ್ಷ ವಿಶ್ವನಾಥ್ ಕಿಡಿಕಾರಿದ್ದಾರೆ.

    ನಾವೆಲ್ಲಾ ಸೇರಿ ಒಗ್ಗಟ್ಟಾಗಿ ಧೈರ್ಯದಿಂದ  ಇಂತಹವರನ್ನು ಎದುರಿಸಬೇಕು , ಮುಂದೆ ಬರುವ ಯಾವುದೇ ಹುದ್ದೆ  ಸವಲತ್ತುಗಳು ಕಾಡುಗೊಲ್ಲ ಸಮಾಜಕ್ಕೆ ಸೇರಬೇಕು. ನಮ್ಮ ನಿರಂತರ ಹೋರಾಟದಿಂದ ಕಾಡುಗೊಲ್ಲ ನಿಗಮ ಆಗಿಯೇ ಆಗುತ್ತದೆ, ಯಾವುದೇ ಚಿಂತೆ ಮಾಡಬೇಕಾಗಿಲ್ಲ ಹಾಗೂ ಕಾಡುಗೊಲ್ಲ ಸಮಾಜ ಎಸ್ಟಿ ಸೇರ್ಪಡೆಗೆ ನಮ್ಮ ಹೋರಾಟ  ನಿರಂತರವಾಗಿರಬೇಕು , ತಾಲ್ಲೂಕು , ಜಿಲ್ಲಾ ಹಾಗೂ  ರಾಜ್ಯ ಮಟ್ಟದಲ್ಲಿ ದೊಡ್ಡ  ಆಂದೋಲನ ಮಾಡಲು ನಾವೆಲ್ಲರೂ ಸಹ ಸಿದ್ದರಾಗಬೇಕು ಎಂಬುದಾಗಿ ಹೇಳಿದರು .

    ಕಾಡುಗೊಲ್ಲ ಕ್ಷೇಮಾಭಿವೃದ್ದಿ ಸಮಿತಿಯ  ಅಧ್ಯಕ್ಷರಾದ ಶಿವು ಯಾದವ್ ರವರು ಮಾತನಾಡಿ, ಜನಾಂಗದ ಸಮಸ್ಯೆಗಳಿಗೆ ಧ್ವನಿಯಾಗಿ ಸ್ಪಂದಿಸುವ ಬದಲು ಪರಸ್ಪರ  ಕಚ್ಚಾಡುವಂತೆ ಮಾಡಿ ಸಮಾಜದಲ್ಲಿ  ಪರಸ್ಪರರಿಗೆ ದ್ವೇಷದ ಕಿಡಿಗಳನ್ನು ಹಚ್ಚುವುದೇ ಡಿ.ಟಿ.ಶ್ರೀನಿವಾಸ್ ರವರ ಬಹುದೊಡ್ಡ ಸಾಧನೆಯಾಗಿದೆ . ಸಮಾಜದ ಯುವಕರನ್ನು ದಾರಿತಪ್ಪಿಸಿ  ಸ್ವಾರ್ಥ ಕಾರ್ಯಗಳಿಗೆ ಸಾಧಿಸಿಕೊಳ್ಳುವುದೇ ಇವರಿಬ್ಬರ ಕಾಯಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ  ಕಾಡುಗೊಲ್ಲ ಮುಖಂಡರಾದ ಗೋಪಿಯಾದವ್ , ಡಾ.ಡಿ ದೊಡ್ಡಮಲ್ಲಯ್ಯ , ಚಳ್ಳಕೆರೆ ವೀರಭದ್ರಬಾಬು, ತಾಲ್ಲೂಕು ಬಿ ಜೆ ಪಿ ಅಧ್ಯಕ್ಷ ವಿಶ್ವನಾಥ್ , ಮ್ಯಾಕ್ಲೂರಹಳ್ಳಿ ಎಸ್ ತಿಮ್ಮಯ್ಯ , ಪ್ರಭುಯಾದವ್ , ಕೆ.ಟಿ. ತಿಪ್ಪೇಸ್ವಾಮಿ,    ಬಸವರಾಜ್   ಚಂದ್ರ,  ಆಸೆ  ಸಣ್ಣಪ್ಪ, ವಕೀಲರು  ಪಾಪಣ್ಣ, ಜಿಲ್ಲಾಪಂಚಾಯಿತಿ ಸದಸ್ಯರು  ಎಸ್ ಆರ್ ಟಿ ತಿಪ್ಪೇಸ್ವಾಮಿ , ಪ್ರಭು ಯಾದವ್ , ವಿಶ್ವನಾಥ್ , ರಂಗಯ್ಯ , ಹಾಲು ಮಾರ್ ಹಟ್ಟಿ   ವಿಜೇಂದ್ರ , ಮಾಗಡಿ ಜಯರಾಮಣ್ಣ , ಶಿವು ಯಾದವ್, ವಕೀಲ ಸಂಘ ಅಧ್ಯಕ್ಷರು ಸಿದ್ದೇಶ್ ಯಾದವ್, ಕೃಷ್ಣ ಪೂಜಾರಿ ,ಬ್ಯಾಡರಹಳ್ಳಿ  ಮಂಜುನಾಥ್,  ಪಿ ಆರ್ ದಾಸ್ , ವಕೀಲರು ಹರೀಶ್ ಕುಮಾರ್ ಬಿ ಆರ್  , ಆದಿವಾಲ ಈರಣ್ಣ , ನಾಗರಾಜ್ ಯಲ್ಲದಕೆರೆ , ದೊಡ್ಡ ಬೊಮ್ಮಣ್ಣ ಮೊಳಕಾಲ್ಮೂರು ,ಇನ್ನು ಇತರರು ಅಧಿಕ ಹೆಚ್ಚಿನ ರೀತಿಯಲ್ಲಿ ಕಾಡುಗೊಲ್ಲ ಮುಖಂಡರು ಭಾಗವಹಿಸಿದ್ದರು.

    ವರದಿ: ಮುರುಳಿಧರನ್ ಆರ್,  ಹಿರಿಯೂರು ( ಚಿತ್ರದುರ್ಗ )

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಬೆಳಕುಣಿ ಚೌದ್ರಿ ಗ್ರಾಮದಲ್ಲಿ ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ 106ನೇ ಜಯಂತಿ ಆಚರಣೆ

    August 17, 2026

    ಸಚಿನ್ ಮನೋಲ್ಕರ್ ಕಲಾಕೃತಿಗಳಿಗೆ ಕಲಾಸಕ್ತರ ಮೆಚ್ಚುಗೆ: ಕಲಾ ಕ್ಷೇತ್ರಕ್ಕೆ ಪ್ರೋತ್ಸಾಹ ಅಗತ್ಯ ಎಂದ ದತ್ತಾತ್ರಿ ಬೆಳ್ಳೂರೆ

    August 17, 2026

    ಅಂಗನವಾಡಿ ಮೇಲ್ಛಾವಣಿಯ ಸಿಮೆಂಟ್ ಪ್ಲಾಸ್ಟರ್ ಕುಸಿತ: ನಾಲ್ವರು ಮಕ್ಕಳು, ಕಾರ್ಯಕರ್ತೆಗೆ ಗಾಯ

    August 16, 2026

    Leave A Reply Cancel Reply

    Our Picks

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಹನೂರು ಶೂಟೌಟ್ ಪ್ರಕರಣ: ಸಿಬ್ಬಂದಿ ಕಾರ್ಯಾಚರಣೆಯನ್ನು ವಿಧಾನಸಭೆಯಲ್ಲಿ ಸಮರ್ಥಿಸಿಕೊಂಡ ಸಚಿವ ರಾಮಲಿಂಗಾರೆಡ್ಡಿ!

    August 17, 2026

    ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ…

    ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದ ಜೆಡಿಎಸ್ ನಾಯಕನ ಬಂಧನ!

    August 17, 2026

    ಚಿತ್ರದುರ್ಗ: ಬಾವಿಯಲ್ಲಿ ನವವಿವಾಹಿತೆ ಶವ ಪತ್ತೆ – ಕೊಲೆ ಆರೋಪ

    August 17, 2026

    ಖರ್ಗೆ ಭಾಷಣ ಮಾಡಿದ್ದ ಸ್ಥಳದಲ್ಲಿ ಶುದ್ಧೀಕರಣ ಹೋಮ: ವಿಧಾನ ಪರಿಷತ್ ನಲ್ಲಿ ಖಂಡನಾ ನಿರ್ಣಯ ಅಂಗೀಕಾರ

    August 17, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.