nammatumakuru

    Subscribe to Updates

    Get the latest creative news from FooBar about art, design and business.

    What's Hot

    ಗುಬ್ಬಿ: ಹೋಟೆಲ್‌ ಗೆ ಊಟಕ್ಕೆ ತೆರಳಿದ್ದ ದಲಿತ ಯುವಕನ ಮೇಲೆ ಹಲ್ಲೆ: ಪ್ರಕರಣ ದಾಖಲು

    December 18, 2025

    ಮಧುಗಿರಿ: ಕಿತ್ತಾಡುತ್ತಿದ್ದ ಜಾನುವಾರುಗಳನ್ನು ಬಿಡಿಸಲು ಹೋಗಿ ರೈತ ಸಾವು

    December 18, 2025

    ಕರ್ನಾಟಕ ದ್ವೇಷ ಅಪರಾಧಗಳ ತಡೆ ವಿಧೇಯಕ–2025ಕ್ಕೆ ಅನುಮೋದನೆ: ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎಂದ ಬಿಜೆಪಿ

    December 18, 2025
    Facebook Twitter Instagram
    ಟ್ರೆಂಡಿಂಗ್
    • ಗುಬ್ಬಿ: ಹೋಟೆಲ್‌ ಗೆ ಊಟಕ್ಕೆ ತೆರಳಿದ್ದ ದಲಿತ ಯುವಕನ ಮೇಲೆ ಹಲ್ಲೆ: ಪ್ರಕರಣ ದಾಖಲು
    • ಮಧುಗಿರಿ: ಕಿತ್ತಾಡುತ್ತಿದ್ದ ಜಾನುವಾರುಗಳನ್ನು ಬಿಡಿಸಲು ಹೋಗಿ ರೈತ ಸಾವು
    • ಕರ್ನಾಟಕ ದ್ವೇಷ ಅಪರಾಧಗಳ ತಡೆ ವಿಧೇಯಕ–2025ಕ್ಕೆ ಅನುಮೋದನೆ: ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎಂದ ಬಿಜೆಪಿ
    • ಬೀದರ್ | ತಾಯಿ, ಮಗು ನಾಪತ್ತೆ: ಪತ್ತೆಗಾಗಿ ಮನವಿ
    • ಸ್ವರ ಸಿಂಚನ ಸಂಗೀತ ಶಾಲೆ ವಿಟ್ಲ ದಶ ಸಂಭ್ರಮ: ಛಲ ಇದ್ದರೆ ಏನನ್ನೂ ಸಾಧಿಸಬಹುದು: ಕುಮಾರ್ ಪೆರ್ನಾಜೆ
    • ತುರುವೇಕೆರೆ  | ಗಂಧದ ಮರ ಕಳ್ಳತನ: ಮಾಲು ಸಹಿತ ಕಳ್ಳರ ಬಂಧನ
    • ತುಮಕೂರು | ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ
    • ಎಸಿ ಕೋರ್ಟ್ ಗಳಲ್ಲಿ ಬಾಕಿಯಿದ್ದ ಶೇ.80ರಷ್ಟು ಪ್ರಕರಣ ವಿಲೇವಾರಿ: ಸಚಿವ ಕೃಷ್ಣ ಬೈರೇಗೌಡ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶಾಸಕಿ ಪೂರ್ಣಿಮಾ ಶ್ರೀನಿವಾಸ್  ಮತ್ತು ಪತಿ ಡಿ .ಟಿ.ಶ್ರೀನಿವಾಸ್  ವಿರುದ್ದ ಕಾಡುಗೊಲ್ಲರ ಗುಡುಗು
    ಜಿಲ್ಲಾ ಸುದ್ದಿ January 21, 2022

    ಶಾಸಕಿ ಪೂರ್ಣಿಮಾ ಶ್ರೀನಿವಾಸ್  ಮತ್ತು ಪತಿ ಡಿ .ಟಿ.ಶ್ರೀನಿವಾಸ್  ವಿರುದ್ದ ಕಾಡುಗೊಲ್ಲರ ಗುಡುಗು

    By adminJanuary 21, 2022No Comments2 Mins Read
    kadugolla

    ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ  ಕಾಡುಗೊಲ್ಲರ ನಿಗಮದ ವಿಚಾರವಾಗಿ  ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮತ್ತು ಅವರ ಪತಿ ಡಿ.ಟಿ.ಶ್ರೀನಿವಾಸ್ ಆಂತರಿಕ ವಿರೋಧದ  ಧೋರಣೆಯನ್ನು ಹೊಂದಿದ್ದಾರೆಂದು ಬಿ ಜೆ ಪಿ ಪಕ್ಷದ ತಾಲ್ಲೂಕಿನ ಅಧ್ಯಕ್ಷರಾದ ವಿಶ್ವನಾಥ್ ಯಾದವ್  ಅಭಿಪ್ರಾಯಪಟ್ಟರು.

    ಹಿರಿಯೂರು ನಗರದ  ಹೊರವಲಯದಲ್ಲಿರುವ ಕೋಳಿ ಪ್ರಭುಯಾದವ್ , ರವರ  ತೋಟದ  ಮನೆಯಲ್ಲಿ ಆಯೋಜಿಸಿದ್ದ ಕಾಡುಗೊಲ್ಲರ ಚಿಂತನ-ಮಂಥನ ಸಭೆಯಲ್ಲಿ ಮಾತನಾಡಿದ  ಅವರು, ಶಾಸಕರು, ಮತ್ತು ಅವರ ಪತಿ ಸೇರಿ ಅಧಿಕಾರ ಪಡೆಯಲು ನಮ್ಮನ್ನ ಬಳಸಿಕೊಂಡು ಸಿಕ್ಕಅಧಿಕಾರದ ಅಮಲಿನಲ್ಲಿ ಕಾಡುಗೊಲ್ಲರಿಗೆ ದ್ರೋಹ ಬಗೆಯುವುದರಲ್ಲಿ ನಿರಂತರವಾಗಿದ್ದಾರೆ ಎಂದು ಆರೋಪಿಸಿದರು.


    Provided by
    Provided by

    ಬುಡಕಟ್ಟು ಪರಂಪರೆಯನ್ನು ಹೊಂದಿರುವ ಕಾಡುಗೊಲ್ಲ ಸಮಾಜ ಸರ್ಕಾರದ ಹಲವಾರು ಸಲತ್ತುಗಳಿಂದ ವಂಚಿತವಾಗಿದೆ. ಸಮಾಜದಲ್ಲಿನ ಪಟ್ಟಭದ್ರರು ಸಮಾಜವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಆದರೆ ಶಾಸಕಿ ಪೂರ್ಣಿಮಾ  ಅವರು ಕುಲಶಾಸ್ತ್ರ ಅಧ್ಯಯನವನ್ನು ಮರುಪರಿಶೀಲಿಸುವಂತೆ  ಸರ್ಕಾರಕ್ಕೆ ಪತ್ರ ಬರೆದಿದ್ದಾರೆ . ಕಾಡುಗೊಲ್ಲ ಅಭಿವೃದ್ದಿ ನಿಗಮದ ಘೋಷಣೆಗೆ ತಡೆಯೊಡ್ಡಿ ವಿಳಂಭ ಧೋರಣೆಗಳೊಂದಿಗೆ  ದಿನಗಳನ್ನು ಮಾಡುತ್ತಿದ್ದಾರೆ  ಎಂಬುದಾಗಿ  ಜಿಲ್ಲಾ ಪಂಚಾಯತಿ  ಮಾಜಿ ಅಧ್ಯಕ್ಷ ಕಾಡುಗೊಲ್ಲ ಸಮಾಜದ ಜಿಲ್ಲಾಧ್ಯಕ್ಷರಾದ ಮೀಸೆ ಮಹಲಿಂಗಪ್ಪ ನವರು ತಿಳಿಸಿದರು.

    ಹಿರಿಯೂರು ತಾಲ್ಲೂಕಿನ ನಗರಸಭೆ  ಸ್ಥಾಯಿ ಸಮಿತಿ ಅಧ್ಯಕ್ಷರಾದ  ಚಿತ್ರಜಿತ್ ಯಾದವ್ ಅವರು ಮಾತನಾಡಿ, ಕಾಡುಗೊಲ್ಲ ಸಮಾಜವನ್ನು ಎಸ್ ಟಿ ಪಟ್ಟಿಗೆ ಸೇರಿಸಲು ಹೋರಾಟವನ್ನು  ಚುರುಕುಗೊಳಿಸಬೇಕು . ಶೀಘ್ರ ನಿಗಮ ಸ್ಥಾಪಿಸಲು ಸರ್ಕಾರಕ್ಕೆ ಒತ್ತಾಯಿಸಬೇಕು ಎಂದರು.

    ತಾಲ್ಲೂಕು ಬಿ ಜೆ ಪಿ ಅಧ್ಯಕ್ಷರಾದ ವಿಶ್ವನಾಥ್  ಮಾತನಾಡಿ, ನಾವೇ  ನೆಲೆ ಕೊಟ್ಟಂತ ಜನ ಇಂದು ನಮ್ಮನ್ನೆ ತುಳಿಯಲು ಹೊರಟಾಗ ನಾವೇಕೆ ಗಂಡಸರಾಗಬಾರದು , ಸಮಾಜದಲ್ಲಿ ಅವರಿಗೆ  ಬೆಲೆ ಬಂದಿದ್ದು, ಈ ಕಾಡುಗೊಲ್ಲ ಸಮಾಜದಿಂದ ಸರ್ಕಾರಕ್ಕೆ ತಲೆನೋವು ತರುವಂತಹ ರಾಜಕೀಯ ಧೋರಣೆಗಳಿಂದ  ಇಂದು ನಾವೆಲ್ಲಾ  ಅಸ್ತಿತ್ವಕ್ಕಾಗಿ ಹೋರಾಟ  ಮಾಡಬೇಕಾದ ಸಂದರ್ಭ ಇದೀಗ ಬಂದಿದೆ. ಇವರಿಂದ ಕಾಡುಗೊಲ್ಲರಿಗೆ  ನೆಲೆ  ಇಲ್ಲದಂತಾಗಿದೆ ಎಂದು ಶಾಸಕಿ ಪೂರ್ಣಿಮಾ ಮತ್ತು ಪತಿ ಶ್ರೀನಿವಾಸ್ ಹೆಸರು ಬಳಸದೇ ತಾಲ್ಲೂಕು ಬಿಜೆಪಿ ಅಧ್ಯಕ್ಷ ವಿಶ್ವನಾಥ್ ಕಿಡಿಕಾರಿದ್ದಾರೆ.

    ನಾವೆಲ್ಲಾ ಸೇರಿ ಒಗ್ಗಟ್ಟಾಗಿ ಧೈರ್ಯದಿಂದ  ಇಂತಹವರನ್ನು ಎದುರಿಸಬೇಕು , ಮುಂದೆ ಬರುವ ಯಾವುದೇ ಹುದ್ದೆ  ಸವಲತ್ತುಗಳು ಕಾಡುಗೊಲ್ಲ ಸಮಾಜಕ್ಕೆ ಸೇರಬೇಕು. ನಮ್ಮ ನಿರಂತರ ಹೋರಾಟದಿಂದ ಕಾಡುಗೊಲ್ಲ ನಿಗಮ ಆಗಿಯೇ ಆಗುತ್ತದೆ, ಯಾವುದೇ ಚಿಂತೆ ಮಾಡಬೇಕಾಗಿಲ್ಲ ಹಾಗೂ ಕಾಡುಗೊಲ್ಲ ಸಮಾಜ ಎಸ್ಟಿ ಸೇರ್ಪಡೆಗೆ ನಮ್ಮ ಹೋರಾಟ  ನಿರಂತರವಾಗಿರಬೇಕು , ತಾಲ್ಲೂಕು , ಜಿಲ್ಲಾ ಹಾಗೂ  ರಾಜ್ಯ ಮಟ್ಟದಲ್ಲಿ ದೊಡ್ಡ  ಆಂದೋಲನ ಮಾಡಲು ನಾವೆಲ್ಲರೂ ಸಹ ಸಿದ್ದರಾಗಬೇಕು ಎಂಬುದಾಗಿ ಹೇಳಿದರು .

    ಕಾಡುಗೊಲ್ಲ ಕ್ಷೇಮಾಭಿವೃದ್ದಿ ಸಮಿತಿಯ  ಅಧ್ಯಕ್ಷರಾದ ಶಿವು ಯಾದವ್ ರವರು ಮಾತನಾಡಿ, ಜನಾಂಗದ ಸಮಸ್ಯೆಗಳಿಗೆ ಧ್ವನಿಯಾಗಿ ಸ್ಪಂದಿಸುವ ಬದಲು ಪರಸ್ಪರ  ಕಚ್ಚಾಡುವಂತೆ ಮಾಡಿ ಸಮಾಜದಲ್ಲಿ  ಪರಸ್ಪರರಿಗೆ ದ್ವೇಷದ ಕಿಡಿಗಳನ್ನು ಹಚ್ಚುವುದೇ ಡಿ.ಟಿ.ಶ್ರೀನಿವಾಸ್ ರವರ ಬಹುದೊಡ್ಡ ಸಾಧನೆಯಾಗಿದೆ . ಸಮಾಜದ ಯುವಕರನ್ನು ದಾರಿತಪ್ಪಿಸಿ  ಸ್ವಾರ್ಥ ಕಾರ್ಯಗಳಿಗೆ ಸಾಧಿಸಿಕೊಳ್ಳುವುದೇ ಇವರಿಬ್ಬರ ಕಾಯಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ  ಕಾಡುಗೊಲ್ಲ ಮುಖಂಡರಾದ ಗೋಪಿಯಾದವ್ , ಡಾ.ಡಿ ದೊಡ್ಡಮಲ್ಲಯ್ಯ , ಚಳ್ಳಕೆರೆ ವೀರಭದ್ರಬಾಬು, ತಾಲ್ಲೂಕು ಬಿ ಜೆ ಪಿ ಅಧ್ಯಕ್ಷ ವಿಶ್ವನಾಥ್ , ಮ್ಯಾಕ್ಲೂರಹಳ್ಳಿ ಎಸ್ ತಿಮ್ಮಯ್ಯ , ಪ್ರಭುಯಾದವ್ , ಕೆ.ಟಿ. ತಿಪ್ಪೇಸ್ವಾಮಿ,    ಬಸವರಾಜ್   ಚಂದ್ರ,  ಆಸೆ  ಸಣ್ಣಪ್ಪ, ವಕೀಲರು  ಪಾಪಣ್ಣ, ಜಿಲ್ಲಾಪಂಚಾಯಿತಿ ಸದಸ್ಯರು  ಎಸ್ ಆರ್ ಟಿ ತಿಪ್ಪೇಸ್ವಾಮಿ , ಪ್ರಭು ಯಾದವ್ , ವಿಶ್ವನಾಥ್ , ರಂಗಯ್ಯ , ಹಾಲು ಮಾರ್ ಹಟ್ಟಿ   ವಿಜೇಂದ್ರ , ಮಾಗಡಿ ಜಯರಾಮಣ್ಣ , ಶಿವು ಯಾದವ್, ವಕೀಲ ಸಂಘ ಅಧ್ಯಕ್ಷರು ಸಿದ್ದೇಶ್ ಯಾದವ್, ಕೃಷ್ಣ ಪೂಜಾರಿ ,ಬ್ಯಾಡರಹಳ್ಳಿ  ಮಂಜುನಾಥ್,  ಪಿ ಆರ್ ದಾಸ್ , ವಕೀಲರು ಹರೀಶ್ ಕುಮಾರ್ ಬಿ ಆರ್  , ಆದಿವಾಲ ಈರಣ್ಣ , ನಾಗರಾಜ್ ಯಲ್ಲದಕೆರೆ , ದೊಡ್ಡ ಬೊಮ್ಮಣ್ಣ ಮೊಳಕಾಲ್ಮೂರು ,ಇನ್ನು ಇತರರು ಅಧಿಕ ಹೆಚ್ಚಿನ ರೀತಿಯಲ್ಲಿ ಕಾಡುಗೊಲ್ಲ ಮುಖಂಡರು ಭಾಗವಹಿಸಿದ್ದರು.

    ವರದಿ: ಮುರುಳಿಧರನ್ ಆರ್,  ಹಿರಿಯೂರು ( ಚಿತ್ರದುರ್ಗ )

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಬೀದರ್ | ತಾಯಿ, ಮಗು ನಾಪತ್ತೆ: ಪತ್ತೆಗಾಗಿ ಮನವಿ

    December 18, 2025

    ಸ್ವರ ಸಿಂಚನ ಸಂಗೀತ ಶಾಲೆ ವಿಟ್ಲ ದಶ ಸಂಭ್ರಮ: ಛಲ ಇದ್ದರೆ ಏನನ್ನೂ ಸಾಧಿಸಬಹುದು: ಕುಮಾರ್ ಪೆರ್ನಾಜೆ

    December 18, 2025

    ವಿಕಲಚೇತನ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ: ಹಂಚೀಪುರ ಮಠ ತೋಂಟದಾರ್ಯ ಸ್ವಾಮೀಜಿ ಕರೆ

    December 16, 2025

    Leave A Reply Cancel Reply

    Our Picks

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಗುಬ್ಬಿ

    ಗುಬ್ಬಿ: ಹೋಟೆಲ್‌ ಗೆ ಊಟಕ್ಕೆ ತೆರಳಿದ್ದ ದಲಿತ ಯುವಕನ ಮೇಲೆ ಹಲ್ಲೆ: ಪ್ರಕರಣ ದಾಖಲು

    December 18, 2025

    ಗುಬ್ಬಿ: ತಾಲ್ಲೂಕಿನ ಎಂ.ಎಚ್. ಪಟ್ಟಣ ಗೇಟ್ ಬಳಿ ಇರುವ ಹೋಟೆಲ್‌ ವೊಂದರಲ್ಲಿ ಪರಿಶಿಷ್ಟ ಜಾತಿಯ ಯುವಕನ ಮೇಲೆ ಹಲ್ಲೆ ನಡೆಸಿರುವ…

    ಮಧುಗಿರಿ: ಕಿತ್ತಾಡುತ್ತಿದ್ದ ಜಾನುವಾರುಗಳನ್ನು ಬಿಡಿಸಲು ಹೋಗಿ ರೈತ ಸಾವು

    December 18, 2025

    ಕರ್ನಾಟಕ ದ್ವೇಷ ಅಪರಾಧಗಳ ತಡೆ ವಿಧೇಯಕ–2025ಕ್ಕೆ ಅನುಮೋದನೆ: ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎಂದ ಬಿಜೆಪಿ

    December 18, 2025

    ಬೀದರ್ | ತಾಯಿ, ಮಗು ನಾಪತ್ತೆ: ಪತ್ತೆಗಾಗಿ ಮನವಿ

    December 18, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.