nammatumakuru

    Subscribe to Updates

    Get the latest creative news from FooBar about art, design and business.

    What's Hot

    ’45’ ಚಿತ್ರದ ಟ್ರೇಲರ್ ಬಿಡುಗಡೆ: ಡಿಸೆಂಬರ್ 25ಕ್ಕೆ ‘ಕರುನಾಡ ಚಕ್ರವರ್ತಿ’ ಶಿವರಾಜ್​ಕುಮಾರ್, ‘ರಿಯಲ್ ಸ್ಟಾರ್’ ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಅಬ್ಬರ!

    December 16, 2025

    ಮಂಡ್ಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹುಟ್ಟುಹಬ್ಬ  ಅದ್ದೂರಿ ಆಚರಣೆ,  ಸಿಕ್ಕಿದ ಗಿಫ್ಟ್ ಏನು ಗೊತ್ತಾ?

    December 16, 2025

    ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರ ಬರಹಗಾರರಿಂದ ಪ್ರತಿಭಟನೆ

    December 16, 2025
    Facebook Twitter Instagram
    ಟ್ರೆಂಡಿಂಗ್
    • ’45’ ಚಿತ್ರದ ಟ್ರೇಲರ್ ಬಿಡುಗಡೆ: ಡಿಸೆಂಬರ್ 25ಕ್ಕೆ ‘ಕರುನಾಡ ಚಕ್ರವರ್ತಿ’ ಶಿವರಾಜ್​ಕುಮಾರ್, ‘ರಿಯಲ್ ಸ್ಟಾರ್’ ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಅಬ್ಬರ!
    • ಮಂಡ್ಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹುಟ್ಟುಹಬ್ಬ  ಅದ್ದೂರಿ ಆಚರಣೆ,  ಸಿಕ್ಕಿದ ಗಿಫ್ಟ್ ಏನು ಗೊತ್ತಾ?
    • ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರ ಬರಹಗಾರರಿಂದ ಪ್ರತಿಭಟನೆ
    • ಎತ್ತಿನಹೊಳೆ ಯೋಜನೆ: ಜನ ಎಚ್ಚೆತ್ತುಕೊಂಡು ಹೋರಾಟ ರೂಪಿಸಬೇಕಿದೆ: ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ
    • ಹುಳಿಯಾರು ಪಟ್ಟಣ ಪಂಚಾಯಿತಿ: ನೂತನ ಅಧ್ಯಕ್ಷರಾಗಿ ಪ್ರೀತಿ ರಾಘವೇಂದ್ರ ಆಯ್ಕೆ
    • ವಿಕಲಚೇತನ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ: ಹಂಚೀಪುರ ಮಠ ತೋಂಟದಾರ್ಯ ಸ್ವಾಮೀಜಿ ಕರೆ
    • ತುರುವೇಕೆರೆ | ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಆರಂಭ
    • ತುಮಕೂರು ಡಿಸಿ ಕಚೇರಿಗೆ ಬಾಂಬ್ ಬೆದರಿಕೆ: ಸಂಪೂರ್ಣ ಶೋಧ, ಸಭೆಗಳು ರದ್ದು! 
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರ ಬರಹಗಾರರಿಂದ ಪ್ರತಿಭಟನೆ
    ಕೊರಟಗೆರೆ December 16, 2025

    ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರ ಬರಹಗಾರರಿಂದ ಪ್ರತಿಭಟನೆ

    By adminDecember 16, 2025No Comments2 Mins Read
    pathra baraha

    ಕೊರಟಗೆರೆ: ತಾಲೂಕು ಪತ್ರ ಬರಹಗಾರರ ಸಂಘದ ಪದಾಧಿಕಾರಿಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಪತ್ರ ಬರಹಗಾರರಿಗೆ ಭದ್ರತೆಯನ್ನು ನೀಡುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ತಹಶೀಲ್ದಾರ್ ಕೆ. ಮಂಜುನಾಥ್ ರವರ ಮುಖೇನ ಮನವಿ ಪತ್ರ ಸಲ್ಲಿಸಿ ಪ್ರತಿಭಟಿಸಿದರು.

    ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ನಟರಾಜ್, ರಾಜ್ಯ ಸರ್ಕಾರವು ಡಿಜಿಟಲೀಕರಣದ ಹೆಸರಿನಲ್ಲಿ ಕಾವೇರಿ 0–1, ಕಾವೇರಿ 0–2 ತಂತ್ರಾಂಶಗಳನ್ನು ಜಾರಿಗೆ ತಂದಿದೆ. ಇದೀಗ ಕಾವೇರಿ 0–3 ತಂತ್ರಾಂಶವನ್ನು ಬರಬಹುದು ಮತ್ತು ಪೆನ್ ಲೆಸ್ ಹಾಗೂ ಪೇಪರ್ ಲೆಸ್ ನೋಂದಣಿಗೆ ಕಾರ್ಯಕ್ಕೆ ಸರ್ಕಾರ ಮುಂದಾಗುತ್ತಿದೆ. ನಮ್ಮ ಪತ್ರ ಬರಹಗಾರರಿಗೆ ಫೆನ್ ಲೆಸ್ ಮತ್ತು ಪೇಪರ್ ಲೆಸ್ ನೋಂದಣಿ ಕಾರ್ಯ ಪ್ರಾರಂಭವಾದಲ್ಲಿ ಪತ್ರ ಬರಹಗಾರರಿಗೆ ಯಾವುದೇ ರೀತಿಯ ಬರವಣಿಗೆ ಕಾರ್ಯ ಇಲ್ಲದಂತಾಗುತ್ತದೆ. ರಾಜ್ಯಾದ್ಯಂತ ಸುಮಾರು 12,000 ಪತ್ರ ಬರಹಗಾರರು ಮತ್ತು ಸಹಾಯಕರು ಇದೇ ವೃತ್ತಿಯನ್ನು ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಚಿಂತಿಸದೇ ಅಧಿಕಾರಿಗಳ ಸಲಹೆಯನ್ನು ಪಡೆದು ವಿದೇಶದಲ್ಲಿರುವಂತಹ ಪೆನ್ ಲೆಸ್ ಮತ್ತು ಪೇಪರ್ ಲೆಸ್ ಕಾರ್ಯಕ್ಕೆ ಮುಂದಾಗಿರುವುದು ಎಷ್ಟು ಸರಿ..? ಸರ್ಕಾರಕ್ಕೆ ಒಂದು ವರ್ಷದಿಂದಲೂ ಮನವಿಗಳನ್ನು ನೀಡುತ್ತಲೇ ಬಂದಿದ್ದೇವೆ, ಕಂದಾಯ ಸಚಿವ ಕೃಷ್ಣ ಬೈರೇಗೌಡ ರವರಿಗೆ ಮೂರು ಬಾರಿ ಖುದ್ದಾಗಿ ಮನವಿ ಸಲ್ಲಿಸಿದರು ಸಹ ನಮ್ಮ ಮನವಿಯನ್ನು ಕಡೆಗಣಿಸಿ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಮಾಡದಿರುವುದರಿಂದ ಸಾವಿರಾರು ಪತ್ರ ಬರಹಗಾರರು ಬೀದಿ ಪಾಲಾಗುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.


    Provided by
    Provided by

     ಪತ್ರ ಬರಹಗಾರರ ಮುಖ್ಯ ಬೇಡಿಕೆಗಳು

    * ಹೊರ ರಾಜ್ಯದಲ್ಲಿರುವಂತೆ ನಮ್ಮ ರಾಜ್ಯದಲ್ಲೂ ಸಹ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡಬೇಕು

    * ನೋಂದಣಿಯಾಗುವ ಎಲ್ಲಾ ದಾಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರ ಬರಹಗಾರರ ಮತ್ತು ವಕೀಲರ ಬಿಕ್ಕಲಂ ಕಡ್ಡಾಯಗೊಳಿಸುವುದು.

    * ಪತ್ರ ಬರಹಗಾರರಿಗೆ ಸರ್ಕಾರದಿಂದ ಅಧಿಕೃತ ಗುರುತಿನ ಚೀಟಿ ನೀಡುವುದು.

    ಕಾವೇರಿ 0.2 ತಂತ್ರಾಂಶದಲ್ಲಿ ಆಗುತ್ತಿರುವ ಮುಖ್ಯ ತೊಂದರೆ ಏನೆಂದರೆ ದಾಸ್ತಾವೇಜನ್ನು ಅಪ್ಲೋಡ್ ಮಾಡುವಾಗ ಆಸ್ತಿಯ ವಿವರಣೆಯಲ್ಲಿ ಬಡಾವಣೆ ಹೆಸರು, ಸರ್ವೆ ನಂಬರ್, ಸೈಟ್ ನಂಬರ್, ಡೋರ್ ನಂಬರ್, ಅಳತೆ ಇರುವುದನ್ನು ನಮೂದಿಸಿ ನೋಂದಣಿ ಮಾಡುತ್ತಿದ್ದೆವು. ಸರ್ಕಾರ ಅಪ್ಲೋಡ್ ನಲ್ಲಿ ನೇರವಾಗಿ ಆಸ್ತಿಯ ವಿವರಣೆ ದಾಖಲಾಗುವಂತೆ ಮತ್ತು ಯಾವುದೇ ತಿದ್ದುಪಡಿ ಮಾಡಲು ಬಾರದಂತೆ ಮಾಡಿದ್ದು, ಆಸ್ತಿ ವಿವರಣೆಯಲ್ಲಿ ಕೇವಲ ಈ ಸ್ವತ್ತು ಸಂಖ್ಯೆ ಮತ್ತು ಅಳತೆ ಬರುವಂತೆ ಮಾಡಿದೆ. ಈ ಸೊತ್ತಿನ ಆಧಾರದ ಮೇಲೆ ಆಸ್ತಿಯನ್ನು ಗುರುತಿಸುವುದು ಕಷ್ಟವಾಗುತ್ತಿದೆ ಸಾರ್ವಜನಿಕರಿಗೆ ಆಸ್ತಿಯ ಅಭದ್ರತೆ ಹೆಚ್ಚಾಗಿ ಕಾಡುತ್ತಿದೆ.

    —  ಟಿ.ಕೆ.ಮಂಜುನಾಥ್, ಪತ್ರ ಬರಹಗಾರರು. ಕೊರಟಗೆರೆ

     

     ಇ– ಸ್ವತ್ತಿನ ಸಂಖ್ಯೆ ಮತ್ತು ಅಳತೆ ಮಾತ್ರ ಇ ಸಿ ಯಲ್ಲಿ ಬರುವುದರಿಂದ ಕ್ರಾಯಪತ್ರ ದಾನ ಪತ್ರ, ಹಕ್ಕು ಕುಲಾಸೆ, ಪಾಲು ವಿಭಾಗ ಪತ್ರ, ಅದಲು ಬದಲಾವಣೆ ಪತ್ರ, ತಿದ್ದುಪಡಿ ಪತ್ರ, ಕ್ರಯದ ಕರಾರು ಪತ್ರ, ಅಡಮಾನ ಪತ್ರ ಇತರೆ ದಾಸ್ತವೇಜುಗಳ ಪೂರ್ಣ ವಿವರ ಬಾರದೆ ಇರುವುದು ಆಸ್ತಿಯ ಮೇಲೆ ಸಾಲ ಸೌಲಭ್ಯ ಪಡೆಯುವಾಗ ಲೀಗಲ್ ಒಪಿನಿಯನ್ ಕೊಡುವುದು ಕಷ್ಟವಾಗಿದೆ. ಈ ಕಾರಣದಿಂದ ಸಾರ್ವಜನಿಕರು ಸಾಲ ಸೌಲಭ್ಯ ಪಡೆಯಲು ವಂಚಿತರಾಗುತ್ತಿದ್ದಾರೆ.

    — ರಾಜಣ್ಣ.ಕಾರ್ಯದರ್ಶಿ, ತಾಲ್ಲೂಕು ಪತ್ರ ಬರಹಗಾರರ ಸಂಘ, ಕೊರಟಗೆರೆ

    ಈ ಸಂದರ್ಭದಲ್ಲಿ ಜಿಲ್ಲಾ ದಸ್ತಾವೇಜು ಬರಹಗಾರರಾದ ಪಾರ್ಥ ಸಾರಥಿ, ಶಿವರಾಮಯ್ಯ, ನರಸಿಂಹಮೂರ್ತಿ, ಪ್ರಕಾಶ್, ಪ್ರಭಯ್ಯಾ, ಸತೀಶ್, ಟಿ ಕೆ ಮಂಜುನಾಥ್, ಅನಂತರಾಮ್ ಸೇರಿದಂತೆ ಇತರರು ಹಾಜರಿದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    26 ಪಂಗಡಗಳ ಬೇಡಿಕೆ ಈಡೇರಿಕೆಗೆ ಐತಿಹಾಸಿಕ ಪಾದಯಾತ್ರೆ: ಶ್ರೀಪ್ರಣವಾನಂದ ಸ್ವಾಮೀಜಿ

    December 15, 2025

    ಉಚಿತ ಆರೋಗ್ಯ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಯಶಸ್ವಿ: ನೂರಾರು ಜನ ಭಾಗಿ

    December 15, 2025

    ವಾರ್ಷಿಕ ಕ್ರೀಡಾಕೂಟದ ಪ್ರಯುಕ್ತ ರಾಘಕ್ರೀಡೆ-2025:  ಶಿಕ್ಷಕರಿಂದ 4 ತಂಡ ಮಕ್ಕಳಿಗೆ 15 ಆಟ..!

    December 15, 2025

    Leave A Reply Cancel Reply

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ’45’ ಚಿತ್ರದ ಟ್ರೇಲರ್ ಬಿಡುಗಡೆ: ಡಿಸೆಂಬರ್ 25ಕ್ಕೆ ‘ಕರುನಾಡ ಚಕ್ರವರ್ತಿ’ ಶಿವರಾಜ್​ಕುಮಾರ್, ‘ರಿಯಲ್ ಸ್ಟಾರ್’ ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಅಬ್ಬರ!

    December 16, 2025

    ಕರುನಾಡ ಚಕ್ರವರ್ತಿ ಶಿವರಾಜ್ ​ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಬೇಡಿಕೆಯ ನಟ ರಾಜ್ ಬಿ.ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ…

    ಮಂಡ್ಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹುಟ್ಟುಹಬ್ಬ  ಅದ್ದೂರಿ ಆಚರಣೆ,  ಸಿಕ್ಕಿದ ಗಿಫ್ಟ್ ಏನು ಗೊತ್ತಾ?

    December 16, 2025

    ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರ ಬರಹಗಾರರಿಂದ ಪ್ರತಿಭಟನೆ

    December 16, 2025

    ಎತ್ತಿನಹೊಳೆ ಯೋಜನೆ: ಜನ ಎಚ್ಚೆತ್ತುಕೊಂಡು ಹೋರಾಟ ರೂಪಿಸಬೇಕಿದೆ: ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ

    December 16, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.