ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಯುವಕರ ಮತ್ತು ಸಾರ್ವಜನಿಕರ ಶಾಂತಿ ಸಭೆಯನ್ನು ಪೊಲೀಸ್ ಇಲಾಖೆಯಿಂದ ಗುರುವಾರ ಕರೆಯಲಾಗಿತ್ತು.
ಗಣಪತಿ ಮೂರ್ತಿ ವಿಸರ್ಜನೆ ಸಂದರ್ಭಗಳಲ್ಲಿ ನಡೆಯಬಹುದಾದ ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶ ಸಭೆಯದಾಗಿತ್ತು.
ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಗಿರೀಶ್ ಅವರು ಮಾತನಾಡಿ ಯುವಜನತೆ ಹುಚ್ಚು ಹುಮ್ಮಸ್ಸಿನಲ್ಲಿ ಗಣಪತಿ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ನೂಕಟ, ತಳ್ಳಾಟ ಹಾಗೂ ಇನ್ನಿತರೆ ಕಠಿಣವುಗಳಲ್ಲಿ ತೊಡೆದುಕೊಳ್ಳಬಾರದು. ಸೂಕ್ಷ್ಮ ಪ್ರದೇಶಗಳಲ್ಲಿ ಕೂಗಾಡೋದು ಘೋಷಣೆಗಳನ್ನು ಕೂಗುವುದು ಉದ್ದೇಶಪೂರ್ವಕವಾಗಿ ಅಲ್ಲೇ ನಿಲ್ಲುವುದು ಇತ್ಯಾದಿ ಕೆಲಸಗಳನ್ನು ಮಾಡಿ ಗ್ರಾಮದ ಶಾಂತಿ ಕದಡಬಾರದು. ಅಂತಹ ಘಟನೆಗಳು ನಡೆದಲ್ಲಿ ಪೊಲೀಸ್ ತನ್ನ ಕೆಲಸ ಕಾರ್ಯ ಮಾಡಬೇಕಾಗಿರುತ್ತದೆ ಎಂದು ಎಚ್ಚರಿಕೆ ತಿಳಿಸಿದರು.
ಇದೇ ಸಂದರ್ಭದಲ್ಲಿ PSI ಮಾಳಪ್ಪ ನಾಯ್ಕೋಡಿ, ಪೊಲೀಸ್ ಸಿಬ್ಬಂದಿ, ಗಣಪತಿಯ ಆಯೋಜಕರು ಹಾಜರಾಗಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q