ಮಧುಗಿರಿ: ನಗರದ ಮೊದಲನೇ ವಾರ್ಡ್ ಆಶೂಖಾನ ಸಮೀಪದಲ್ಲಿರುವ ನೀರಿನ ಟ್ಯಾಂಕ್ ನ ನಲ್ಲಿಗಳು ಒಡೆದು ಹೋಗಿದ್ದು, ಕಳೆದ ಎರಡು ತಿಂಗಳಿಂದ ನೀರು ಪೋಲಾಗುತ್ತಿದೆ, ನಿತ್ಯ ವಾರ್ಡಿನ ಹಲವಾರು ಮನೆಗಳಿಗೆ ನೀರು ಪೂರೈಸುವ ಈ ನೀರಿನ ಟ್ಯಾಂಕ್ ದುರಸ್ತಿ ಭಾಗ್ಯ ಕಾಣದೆ ನೀರು ಅವ್ಯಾಹತವಾಗಿ ಪೋಲಾಗುತ್ತಿದ್ದು, ಪುರಸಭೆ ಅಧಿಕಾರಿಗಳು ಹಾಗೂ ವಾರ್ಡ ಸದಸ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ದಿನೇ ದಿನೇ ಬಿಸಿಲಿನ ತಾಪ ಜಾಸ್ತಿಯಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಉಷ್ಣಾಂಶದ ಪ್ರಮಾಣ ಏರುತ್ತಿದೆ. ಚಳಿಗಾಲ ಮುಗಿದು ಬೇಸಿಗೆ ಪ್ರಾರಂಭದ ದಿನಗಳಲ್ಲಿಯೇ ನೀರಿನ ಹಾಹಾಕಾರ ಎಲ್ಲೆಡೆ ಶುರುವಾಗಿದೆ. ಇಂತಹ ಸನ್ನಿವೇಶದಲ್ಲಿ ನೀರಿನ ಟ್ಯಾಂಕ್ ನಲ್ಲಿಗಳಿಂದ ದಿನವಿಡೀ ನಿರಂತರವಾಗಿ ನೀರು ಚರಂಡಿಗೆ ಸೇರುತ್ತಿದೆ,ಈ ಟ್ಯಾಂಕ್ ತುಂಬಾ ತೀರಾ ಹಳೆದಾಗಿದ್ದು, ಮೊದಲೇ ಪುರಸಭೆಯಿಂದ ಸರಿಯಾಗಿ ನಿರ್ವಹಣೆ ಸಹ ಇಲ್ಲ, ಟ್ಯಾಂಕಿನ ಮೇಲ್ಚಾವಣಿ ಸಹ ಕುಸಿದಿದ್ದು ಗಾಳಿಯಲ್ಲಿ ಬರುವ ಧೂಳಿನಿಂದ ಟ್ಯಾಂಕ್ ನೀರು ಕಲುಶ್ಚಿತಗೊಳ್ಳುತ್ತದೆ. ಇದರ ಬಗ್ಗೆ ಪುರಸಭೆ ಆರೋಗ್ಯ ಅಧಿಕಾರಿಗಳು ಗಮನಹರಿಸಿ ಎಚ್ಚೆತ್ತುಕೊಳ್ಳಬೇಕು.
ಆದರೆ, ಈ ಬಗ್ಗೆ ಈ ಹಿಂದೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ, ಈಗಲಾದರೂ ಈ ಸಮಸ್ಯೆಯನ್ನು ಬಗೆಹರಿಸಿ ಕೊಡಿ ಇಲ್ಲವಾದಲ್ಲಿ ಪುರಸಭೆ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಮಾಧ್ಯಮ ಮೂಲಕ ಎಚ್ಚರಿಸಿದರು.
ಕಳೆದ ಒಂದು ತಿಂಗಳ ಹಿಂದೆ ಪುರಸಭೆ ಮುಖ್ಯ ಅಧಿಕಾರಿಗಳು ಈ ವಾರ್ಡ್ ಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ವಾರ್ಡಿನ ಜನಸಾಮಾನ್ಯರು ಈ ವಿಷಯದ ಬಗ್ಗೆ ಪ್ರಸ್ತಾಪಿಸಿದರು ಸಹ ಕಾಣದ ದುರಸ್ತಿ ಭಾಗ್ಯ ಕೇವಲ ಆಶ್ವಾಸನೆಯಾಗಿ ಉಳಿದಿದೆ.
ವರದಿ: ಅಬಿದ್, ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA