ಮಧುಗಿರಿ ರಾಗಿ ಖರೀದಿ ಕೇಂದ್ರದಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲ ಅನ್ನೋ ಸ್ಥಿತಿ ನಿರ್ಮಾಣವಾಗಿದ್ದು ರೈತರು ತಮ್ಮ ಊರಿನಿಂದ ರಾಗಿಗಳನ್ನು ತಂದು ಬೀದಿಯಲ್ಲಿ ಪರದಾಡುವಂತಾಗಿದೆ.
ಮಧುಗಿರಿ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಬೇಕಾದರೆ ರೈತರು ಎರಡು ಮೂರು ದಿನಗಳ ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಗಿ ಬೆಳೆಯಲು ಕೂಡ ರೈತರು ಇಷ್ಟೊಂದು ಕಷ್ಟಪಟ್ಟಿರಲಿಕ್ಕಿಲ್ಲ. ಆದರೆ, ಇದೀಗ ರಾಗಿ ಮಾರಾಟ ಮಾಡಲು ನಿದ್ದೆ ಬಿಟ್ಟು ಬೀದಿ ಬದಿ ಕಾಯುವಂತಾಗಿದೆ.
ರಾಗಿ ತಂದು ಎರಡು ದಿನ ಕಾದರು ಕೆಲ ರೈತರಿಗೆ ಅಧಿಕಾರಿಗಳು ದೂಳು ಮಣ್ಣಿನ ಅಂಶ ಇದೆ ಎಂದು ಸಬೂಬು ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ರಾಗಿ ತಂದು ಎರಡು ಮೂರು ದಿನಗಳಿಂದ ರೈತರು ರಸ್ತೆಯಲ್ಲಿ ಕಾಯುವಂತಾಗಿದೆ. ಇದರಿಂದಾಗಿ ರೈತರ ಖರ್ಚು ದುಪ್ಪಟ್ಟಾಗುತ್ತಿದೆ.
ರೈತರು ಬಾಡಿಗೆ ವಾಹನದಲ್ಲಿ ರಾಗಿ ತೆಗೆದುಕೊಂಡು ಬಂದಿದ್ದಾರೆ. ಆದರೆ ವಾಹನ ಮಾಲಿಕರು ನಾವು ಕಾಯಲು ಆಗುವುದಿಲ್ಲ ನಮಗೆ ಇನ್ನೂ ಒಂದು ದಿನದ ಬಾಡಿಗೆ ನೀಡಿದರೆ ಇಲ್ಲೆ ಇರುತ್ತವೆ ಎನ್ನುತ್ತಿದ್ದಾರೆ. ಇದರಿಂದಾಗಿ ರೈತರು ತಮ್ಮ ಬೆಳೆಯನ್ನು ಮಾರಾಟ ಮಾಡಲು ಇನ್ನಷ್ಟು ಪರದಾಡುವಂತಾಗಿದೆ.
ಇನ್ನೊಂದು ದಿನದ ಬಾಡಿಗೆ ವಾಹನ ಸವಾರರು ಊಟ ತಿಂಡಿ ಹಾಗೂ ಇವರ ಖರ್ಚು ಸೇರಿದಂತೆ ಎರಡು ಮೂರು ದಿನಗಳ ಕಾಲ ಬಿಸಿಲು, ಚಳಿ,ಗಾಳಿ ಹಾಗೂ ಸೊಳ್ಳೆ ಕಾಟದಿಂದ ನೊಂದಿತ ರೈತರು ರೈತರು ಹಗಲು ರಾತ್ರಿ ಎನ್ನದೆ ಕಾಯುವಂತಾಗಿದೆ.
ಇಷ್ಟಕ್ಕೆ ಮುಗಿಯದ ರೈತರ ಕಷ್ಟ, ಇಲ್ಲಿನ ಮ್ಯಾನೇಜರ್ ನಿಮ್ಮ ರಾಗಿ ಕಪ್ಪು ಇದೆ,ಹಾಗೂ ಧೂಳಿನಿಂದ ಕೂಡಿದ ರಾಗಿ ಖರೀದಿಸೋಕೆ ಆಗಲ್ಲ ಮರಳಿ ಮನೆಗೆ ತೆಗೆದುಕೊಂಡು ಹೋಗಿ ಎಂದು ಉಡಾಫೆ ಉತ್ತರ ನೀಡ್ತಾರೆ.
ಹಾಗಾಗಿ ರೈತರು ಇವರಿಗೆ ಲಂಚ ನೀಡಿದರೆ ಮಾತ್ರ ರಾಗಿ ಖರೀದಿ ಇಲ್ಲವಾದರೆ ಮರಳಿ ಮನೆಗೆ ತೆಗೆದುಕೊಂಡು ಹೋಗಬೇಕು ಎನ್ನುತ್ತಾರೆ ರೈತರು.
ವರದಿ: ಆಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA