ಗುಬ್ಬಿ: ನಾನು ಶಾಸಕನಾಗಿ ಅಧಿಕಾರವಹಿಸಿಕೊಂಡ ನಂತರ ರೈತರ ಮನೆ ಬಾಗಿಲಿಗೆ ತೆರಳಿ ಅವರ ಕಷ್ಟ ಸುಖದಲ್ಲಿ ಭಾಗಿಯಾಗಿ ಜನಸೇವಕನಾಗಿ ಕೆಲಸಮಾಡಿದ್ದೇನೆ ಎಂದು ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ತಿಳಿಸಿದರು.
ಸಿ.ಎಸ್.ಪುರ ಹೋಬಳಿಯಲ್ಲಿ ಸುಮಾರು 4 ಕೋಟಿ ವೆಚ್ಚದಲ್ಲಿ ಹಲವು ಗ್ರಾಮಗಳ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಸಿ.ಎಸ್. ಪುರ ದಲ್ಲಿರುವ ನಮ್ಮ ದೇವಸ್ಥಾನದ ಆವರಣದಲ್ಲಿ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಮಾರು ವರ್ಷಗಳಿಂದ ಸಿ.ಎಸ್. ಪುರ ಕೆರೆಯು ತುಂಬದೇ ಇದ್ದು, ಈ ಬಾರಿ ಕೆರೆ ತುಂಬಿ ಹರಿದಿತ್ತು, ಈ ಕೆರೆಯ ನೀರನ್ನು ಮಿತವಾಗಿ ಬಳಸುವ ಸಲುವಾಗಿ ಸಿಎಸ್ ಪುರ ಹೋಬಳಿ ರೈತರನ್ನು ಒಂದೆಡೆ ಸೇರಿಸಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೀರನ್ನು ಬಳಕೆ ಮಾಡಿಕೊಳ್ಳುವ ಬಗ್ಗೆ ರೈತರೊಂದಿಗೆ ಚರ್ಚಿಸಲು ಈ ಸಭೆಯನ್ನು ಕರೆಯಲಾಗಿತ್ತು ಎಂದರು.
ವಿದ್ಯುಚ್ಛಕ್ತಿ ಸಮಸ್ಯೆ ಹೆಚ್ಚಾಗಲು ರಾಯಚೂರು ತರ್ಮಲ್ ಕೇಂದ್ರದಲ್ಲಿ ತೊಂದರೆಯಾಗಿದ್ದು, ಸಮಸ್ಯೆ ಈಗಾಗಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬಗೆಹರಿಸಿದ್ದು ಇನ್ನುಮುಂದೆ ಯಾವುದೇ ರೀತಿಯ ತೊಂದರೆಯಾಗದಂತೆ ಐದು ಗಂಟೆಗಳ ಕಾಲ ರೈತರಿಗೆ ವಿದ್ಯುತ್ ನೀಡುವ ಬಗ್ಗೆ ವಿಧಾನಸಭೆಯ ಚರ್ಚಿಸಲಾಗಿದೆ. ಸುಮಾರು 319 ಕೋಟಿ ರೂಗಳ ವೆಚ್ಚದಲ್ಲಿ ತಿಪಟೂರು ತುರುವೇಕೆರೆ ಚಿಕ್ಕನಾಯಕನಹಳ್ಳಿ ಮೂರು ತಾಲೂಕುಗಳನ್ನು ಪ್ರಕಾರ ವಿದ್ಯುತ್ ಪರಿವರ್ತಕ ಗಳನ್ನು ನೀಡಲಾಗುತ್ತದೆ. ಯಾವುದೇ ರೈತರು ಇನ್ನು ಮುಂದೆ ವಿದ್ಯುತ್ ಪರಿವರ್ತಕ ಸುಟ್ಟ 24 ಗಂಟೆಯ ಅವಧಿಯಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.
ಹೇಮಾವತಿ ಮುಖ್ಯ ನಾಲೆಯಿಂದ ಸಿ.ಎಸ್. ಪುರ ಕೆರೆಗೆ ನೇರವಾಗಿ ನೀರನ್ನು ಹರಿಸಲು ನಬಾರ್ಡ್ ಹಾಗೂ ರಾಜ್ಯ ಸರ್ಕಾರದಿಂದ 38 ಕೋಟಿ ಅಂದಾಜು ಪಟ್ಟಿಯನ್ನು ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗುವುದರಿಂದ ಸಿಎಸ್ ಪುರ ಹೋಬಳಿ ಮೂಲ ಕೆರೆಗಳಿಗೆ ಯಾವುದೇ ಅಡ್ಡಿ ಆತಂಕವಿಲ್ಲದೆ ನೇರವಾಗಿ ಹೇಮಾವತಿ ನೀರು ಹರಿದು ಬರುತ್ತದೆ ಎಂದು ತಿಳಿಸಿದರು.
ನನ್ನ ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ ಗಳು ಉಳಿದಿರುವುದಿಲ್ಲ ಇನ್ನು ಕೇವಲ ಶೇಕಡ ಐದರಷ್ಟು ಸಿಸಿ ರಸ್ತೆಗಳು ಬಾಕಿ ಉಳಿದಿದ್ದು ಆ ಕಾಮಗಾರಿಗಳನ್ನು ಮುಗಿಸುತ್ತೇನೆ ಎಂದು ತಿಳಿಸಿದ ಅವರು ಶಾಸಕ ನೆಂಬ ಅಂಬು ನನಗಿಲ್ಲ ಪ್ರತಿಯೊಬ್ಬ ಮತದಾರನ ಮನೆಗಳ ಕಷ್ಟ-ಸುಖಗಳಿಗೆ ಇದೇ ರೀತಿ ಸ್ಪಂದಿಸುತ್ತೇನೆ ಎಂದು ತಿಳಿಸಿದರು. ಈ ಬಾರಿಯ ಬಿಜೆಪಿ ಸರ್ಕಾರದಲ್ಲಿ ರೈತಪರ ಬಜೆಟ್ಟನ್ನು ನೀಡಲಾಗಿದು ತುಮಕೂರು ಜಿಲ್ಲೆಗೆ ವೈದ್ಯಕೀಯ ಕಾಲೇಜು ಸಹ ಮಂಜೂರಾಗಿದ್ದು ಎಲ್ಲಾ ಮೂಲಗಳಿಂದಲೂ ಜನಪದ ಬಜೆಟನ್ನು ನೀಡಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸಿ.ಎಸ್. ಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಪರಾಜು ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಭಾನು ಪ್ರಕಾಶ್ ಗ್ರಾಮ ಪಂಚಾಯಿತಿ ಸದಸ್ಯರಾದ ಯದು ಕುಮಾರ್ ಕಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ಎಲ್ ರವಿಕುಮಾರ್ ಮುಖಂಡರಾದ ಎಸ್ಎಲ್ಎನ್ ಮದುವೆಮನೆ ಬಸವರಾಜು ಸದಾಶಿವ ಚನ್ನಿಗಪ್ಪ ನಂಜುಂಡಯ್ಯ ಅಪ್ಪಣ್ಣಗೌಡ ಇತರ ಮುಖಂಡರು ಹಾಗೂ ಸಿಎಸ್ ಪುರ ಗ್ರಾಮಸ್ಥರು ಸುತ್ತಮುತ್ತ ರೈತಬಾಂಧವರು ಈ ಸಭೆಯಲ್ಲಿ ಭಾಗವಹಿಸಿದರು.
ವರದಿ: ಮಂಜುನಾಥ, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy