ಪಾವಗಡ: ತಾಲ್ಲೂಕಿನ ವಳ್ಳುರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ರಸ್ತೆ ಕಾಮಗಾರಿಗಳಿಗೆ ಶಾಸಕರಾದ ವೆಂಕಟರಮಣಪ್ಪ ಶಂಕುಸ್ಥಾಪನೆ ಮಾಡಿದರು.
ಕಾಮಗಾರಿಗಳ ಪಟ್ಟಿ ಈ ಕೆಳಕಂಡಂತೆ ಇವೆ:
1.ವೆಂಕಟಮ್ಮನಹಳ್ಳಿ ಜಿಲ್ಲಾ ಮುಖ್ಯರಸ್ತೆಯಿಂದ ಆಂತರಿಕ ರಸ್ತೆ ಅಭಿವೃದ್ಧಿ- ಅಂದಾಜು ಮೊತ್ತ-193 ಲಕ್ಷ ರೂ.ಗಳು
2.ವೆಂಕಟಮ್ಮನಹಳ್ಳಿ-ಕ್ಯಾತಗಾನಚರ್ಲು ಮಾರ್ಗ ರಸ್ತೆ ಅಭಿವೃದ್ಧಿ ಅಂದಾಜು ಮೊತ್ತ-107 ಲಕ್ಷ ರೂ. ಗಳು.
3.ಕ್ಯಾತಗಾನ ಚರ್ಲು-ಮುತ್ಯಾಲಮ್ಮನ ದೇವಸ್ಥಾನದ ರಸ್ತೆ ಅಭಿವೃದ್ಧಿ ಅಂದಾಜು ಮೊತ್ತ-194 ಲಕ್ಷ ರೂ. ಗಳು.ಗುದ್ದಲಿ ಪೂಜೆ ಮಾಡಿದರು
4.ಬಳ್ಳ ಸಮುದ್ರ ಗ್ರಾಮದಲ್ಲಿ ನೂತನ ಶಾಲಾ ಕೊಠಡಿ ನಿರ್ಮಾಣ ಅಂದಾಜು ಮೊತ್ತ-44 ಲಕ್ಷ ರೂ ಗಳು.
5.ಕ್ಯಾತಗಾನ ಚರ್ಲು ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆಗೆ ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಅಂದಾಜು ಮೊತ್ತ-174 ಲಕ್ಷ ರೂ.ಗಳು.
6.ಇಂಟುರಾಯನ ಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆಗೆ ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಅಂದಾಜು ಮೊತ್ತ-104 ಲಕ್ಷ ರೂ. ಗಳು.
7.ವೆಂಕಟಮ್ಮನಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆಗೆ ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅಂದಾಜು ಮೊತ್ತ-73 ಲಕ್ಷ ರೂ. ಗಳು.
8.ವಳ್ಳುರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅಂದಾಜು ಮೊತ್ತ-125 ಲಕ್ಷ ರೂ. ಗಳಲ್ಲಿ.
9.ವಳ್ಳುರು ಗ್ರಾಮದ ಪಾರ್ಕ್ ಪ್ರದೇಶದ ಹಿಂದುಳಿದ ವರ್ಗಗಳ ವಸತಿ ನಿಲಯಕ್ಕೆ ಕಾಂಪೌಂಡ್ ನಿರ್ಮಾಣ ಅಂದಾಜು ಮೊತ್ತ-4.ಲಕ್ಷ ರೂ ಗಳು.ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ವಿ.ವೆಂಕಟೇಶ್ , ಶಂಕರ್ ರೆಡ್ಡಿ, ಅನ್ನದಾನಪಲ್ಲಿ ಲಕ್ಷ್ಮಿ ನಾರಾಯಣಪ್ಪ. ನಾನಿ, ಚನ್ನಕೇಶವ, ಲಕ್ಷ್ಮಿ. ಮುತ್ಯಾಲಪ್ಪ. ಸೇರಿದಂತೆ ಈ ಭಾಗದ ಹಲವಾರು ಪ್ರಮುಖ ಮುಖಂಡರುಗಳು ಭಾಗಿಯಾಗಿದ್ದರು.
ವರದಿ: ರಾಮಪ್ಪ ಸಿ.ಕೆ.ಪುರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB