ಪಾವಗಡ: ಹಿಂದಿ ಭಾಷಾ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಾಗಾರ ವೈ ಎನ್ ಹೊಸಕೋಟೆ ಹೋಬಳಿ ಪಾವಗಡ ತಾಲ್ಲೂಕ್ ವಾಸವಿ ವಿದ್ಯಾನಿಕೇತನ ಆಂಗ್ಲ ಮಾ. ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆಯಿಂದ ಹಿಂದಿ ಭಾಷಾ ಶಿಕ್ಷಕರ ಪುನರ್ ಚೇತನ ಕಾರ್ಯಗಾರವನ್ನು ಎಚ್.ಚಿತ್ತಯ ಡಯಟ್ ಉಪನ್ಯಾಸಕರು ಉದ್ಘಾಟಿಸಿದರು.
ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿ ವಾಸವಿ ವಿದ್ಯಾನಿಕೇತನ ಶಾಲೆಯಲ್ಲಿ ಉದ್ಘಾಟನೆ ಮಾಡಿ ಮಾತನಾಡಿ, 10ನೇ ತರಗತಿಯ ಫಲಿತಾಂಶ ಅಭ್ಯುದಯಕ್ಕೆ ಶಾಲೆಯಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವುದು, ಶಾಲೆಯಲ್ಲಿ ಘಟಕದ ವಿಷಯ ಮುಗಿದ ನಂತರ ಘಟಕ ಪರೀಕ್ಷೆಯನ್ನು ಮಾಡಿ ಮಂದಗತಿಯಲ್ಲಿ ಕಲಿಯುವಂತಹ ಮಕ್ಕಳ ಕಲಿಕೆಯ ಬಗ್ಗೆ ವಿಶೇಷ ಗಮನ ಹರಿಸುವಂತೆ ತಿಳಿಸಿದರು.
ವಾಸವಿ ವಿದ್ಯಾನಿಕೇತನ ಆಡಳಿತ ಅಧಿಕಾರಿಗಳಾದ ಎನ್.ಜಿ.ಶ್ರೀನಿವಾಸ್ ಮಾತನಾಡಿ, ಈ ಶಾಲೆಯಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದು ನನಗೆ ತುಂಬಾ ಸಂತೋಷವಾಗಿದ್ದು, ಶಿಕ್ಷಕರು ನಮ್ಮ ತಾಲೂಕಿನಲ್ಲಿ ಬಡ ಮಕ್ಕಳು ಸಾಕಷ್ಟು ಇದ್ದು, ಈ ಮಕ್ಕಳು ಅನುತ್ತೀರ್ಣ ರಾಗದೆ ಎಲ್ಲಾ ಮಕ್ಕಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕೆಂಬುದೇ ನನ್ನ ಅಭಿಲಾಷೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಖಾಜಾ ಹುಸೇನ್ ಎಸ್ ಕೆ ಇ ಸಿ ಓ ಬಿಇಓ ಕಚೇರಿ, ಹನುಮಂತರಾಯಪ್ಪ ಅಧ್ಯಕ್ಷರು ತಾಲೂಕು ಹಿಂದಿ ಶಿಕ್ಷಕರ ವೇದಿಕೆ ಮತ್ತು ರಾಜು ಸಂಘಟನಾ ಕಾರ್ಯದರ್ಶಿಗಳು ಜಿಲ್ಲಾ ಘಟಕ, ಸತ್ಯನಾರಾಯಣ ರೆಡ್ಡಿ ಪ್ರಾಂಶುಪಾಲರು, ಮುಕುಂದರಾಜು ಸಂಪನ್ಮೂಲ ವ್ಯಕ್ತಿಗಳು ನಾಗ ಪುಷ್ಪ, ನಾಗೇಂದ್ರ ಹಾಗೂ ಶಿಕ್ಷಕರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q