ಖ್ಯಾತ ಕಲಾ ಇತಿಹಾಸಕಾರ ಮತ್ತು ಬರಹಗಾರ ಬ್ರಿಜೇಂದರ್ ನಾಥ್ ಗೋಸ್ವಾಮಿ(90) ಚಂಡೀಘಡದಲ್ಲಿ ನಿಧನರಾಗಿದ್ದಾರೆ. ಕಲಾ ರಂಗದಲ್ಲಿ ಬಿಎನ್ಜಿ ಎಂದೇ ಪ್ರಸಿದ್ಧರಾಗಿದ್ದ ಅವರು, ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು.
ಗೋಸ್ವಾಮಿ ಅವರು 1933ರ ಆಗಸ್ಟ್ 15 ರಂದು ಜನಿಸಿದ್ದರು. ಪಹರಿ ಶೈಲಿಯ ಚಿತ್ರಕಲೆಗೆ ಹೆಸರುವಾಸಿಯಾಗಿದ್ದ ಇವರು, ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.
ಪಹರಿ ಪೈಂಟಿಂಗ್ ಬಗ್ಗೆ 26 ಪುಸ್ತಕಗಳನ್ನೂ ಬರೆದಿದ್ದ ಗೋಸ್ವಾಮಿ, ಕಲಾಸೇವೆಗೆಂದೇ 1958ರಲ್ಲಿ ಐಎಸ್ ತೊರೆದಿದ್ದರು.


