ಮಧುಗಿರಿ : ತಾಲ್ಲೂಕು ವ್ಯಾಪ್ತಿಯ ಕಂಬತ್ತನಹಳ್ಳಿ ಬೈಪಾಸ್ ಹೊರ ವಲಯದ ಹೆದ್ದಾರಿ ಪಕ್ಕದ ಸರ್ಕಾರಿ ಜಾಗದಲ್ಲಿ ಸುಮಾರು ಮೂರ್ನಾಲ್ಕು ಲಾರಿ ಲೋಡ್ ಗಳಷ್ಟು ಅಕ್ರಮ ಮರಳು ಶೇಖರಣೆ ಮಾಡಿರುವ ಸ್ಥಳ ನೆನ್ನೆ ಕಂಡುಬಂದಿದೆ.
ಮಧುಗಿರಿ ಉಪ ವಿಭಾಗದ ಮರಳು ಸಮಿತಿ ಸದಸ್ಯರ ಗಮನಕ್ಕೆ ಸ್ಥಳೀಯರು ಈ ವಿಚಾರವನ್ನು ತಿಳಿಸಿದಾಗ, ಖುದ್ದು ಸ್ಥಳಕ್ಕೆ ಸಾಮಾಜಿಕ ಹೋರಾಟಗಾರ ಹಾಗೂ ಮಧುಗಿರಿ ಉಪ ವಿಭಾಗದ ಮರಳು ಸಮಿತಿ ಸದಸ್ಯರಾದ ಹಂದ್ರಾಳ ನಾಗಭೂಷಣ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ.
ಇದೇ ವೇಳೆ ಸ್ಥಳದಿಂದಲೇ ತಹಶೀಲ್ದಾರ್ ಮತ್ತು ಉಪ ವಿಭಾಗ ಅಧಿಕಾರಿಗಳ, ಅಪಾರ ಜಿಲ್ಲಾಧಿಕಾರಿಗಳ,ಡಿವೈಎಸ್ಪಿ, ಗಮನಕ್ಕೆ ವಿಷಯವನ್ನು ನಾಗಭೂಷಣ್ ತಿಳಿಸಿದ್ದಾರೆ. ನಂತರ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇವರೆಲ್ಲರೂ ಜಂಟಿ ಸಮೀಕ್ಷೆ ನಡೆಸಿದ್ದಾರೆ.
ಪೊಲೀಸ್ ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರಿಂದ ಅಕ್ರಮ ಮರಳು ದಾಸ್ತಾನು ಮಾಡಿರುವವರನ್ನು ಪತ್ತೆ ಹಚ್ಚಿಸಿ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ಸದರಿ ಮರಳನ್ನು ನಿಯಮಾನುಸಾರ ಸೂಕ್ತ ವಿಲೇವಾರಿ ಮಾಡಿಸಿ ಕ್ರಮ ಕೈಗೊಳ್ಳಬೇಕೆಂದು ಮಧುಗಿರಿ ಉಪ ವಿಭಾಗದ ಮರಳು ಸಮಿತಿಯ ಸದಸ್ಯ ಹಾಗೂ ಸಾಮಾಜಿಕ ಹೋರಾಟಗಾರ ಹಂದ್ರಾಳ್ ನಾಗಭೂಷಣ್ ಆಗ್ರಹಿಸಿದರು.
ವರದಿ: ಮಂಜುಸ್ವಾಮಿ ಎಂ. ಎನ್.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy