ಪಾವಗಡ: ಜಾತ್ಯಾತೀತ ಜನತಾದಳ ಪಕ್ಷ ಅಧಿಕಾರಕ್ಕೆ ಬಂದರೆ, ಕರ್ನಾಟಕದಲ್ಲಿ ನದಿಗಳನ್ನು ಜೋಡಣೆ ಮಾಡಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಬಳಸಿಕೊಂಡು ಕರ್ನಾಟಕ ಸಮಗ್ರ ನೀರಾವರಿ ಹಾಗೂ ಕುಡಿಯುವ ನೀರಿಗೆ ರೂಪಿಸುವ ಯೋಜನೆಯೇ ಜನತಾ ಜಲಧಾರೆ ಎಂದು ಮಾಜಿ ಶಾಸಕ ಕೆ. ಎಮ್. ತಿಮ್ಮರಾಯಪ್ಪ ಹೇಳಿದರು.
ತಾಲೂಕಿನ ರಾಜವಂತಿ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಜನತಾ ಜಲಧಾರೆ ರಥಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಜೆ.ಡಿ.ಎಸ್. ಘಟಕದ ಅಧ್ಯಕ್ಷ ಆರ್. ಸಿ .ನೆನಪು ರವರು ಮಾತನಾಡಿ, ನಮ್ಮ ಪಕ್ಷದ ಜನತಾ ಜಲಧಾರೆ ರಥಯಾತ್ರೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಪಾವಗಡ ತಾಲೂಕಿನ ಮಾಜಿ ಶಾಸಕ ಕೆ .ಎಮ್. ತಿಮ್ಮರಾಯಪ್ಪ ರನ್ನು ಅತೀ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವಂತೆ ಕರೆ ನೀಡಿದರು
ರಾಜ್ಯ ಜೆಡಿಎಸ್ ಹಿರಿಯ ಉಪಾಧ್ಯಕ್ಷರಾದ ತಿಮ್ಮ ರೆಡ್ಡಿ ಮಾತನಾಡಿ, ಜಾತ್ಯಾತೀತ ಜನತಾದಳದ ದೂರದೃಷ್ಟಿಯ ಯೋಜನೆ ಇದಾಗಿದ್ದು, 2023 ಕ್ಕೆ ಜನತಾ ಸರ್ಕಾರ ಅಸ್ತಿತ್ವಕ್ಕೆ ಬಂದರೆ, ಕರ್ನಾಟಕ ರಾಜ್ಯ ಸಸ್ಯಶಾಮಲ , ಜಲ ಶಾಮಲ, ಸರ್ವಜನಾಂಗದ ಹಿತಕಾಪಾಡುವ ಸರ್ಕಾರವನ್ನು ಅಸ್ತಿತ್ವಕ್ಕೆ ತರುತ್ತೇವೆ. ಆದ್ದರಿಂದ ಪಾವಗಡ ತಾಲೂಕಿನ ಸಮಸ್ತ ಜನರು ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಕರೆ ನೀಡಿದರು
ಸಮಾಜಸೇವಕಿ ಸಾಯಿ ಸುಮನ ಹನುಮಂತರಾಯಪ್ಪ ರವರು ಮಾತನಾಡಿ , ಕರ್ನಾಟಕ ರಾಜ್ಯ ರಕ್ಷಣೆಗೆ ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಮುಂದಿನ 2023 ರ ಚುನಾವಣೆಯಲ್ಲಿ ಪಾವಗಡದಲ್ಲಿ ಕೆ.ಎಮ್. ತಿಮ್ಮರಾಯಪ್ಪ ರನ್ನು ಗೆಲ್ಲಿಸಿ, ಮಂತ್ರಿ ಮಾಡಬೇಕು. ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ನಮ್ಮ ಜೆಡಿಎಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಪ್ರತಿಜ್ಞೆ ಮಾಡಬೇಕೆಂದು ತಿಳಿಸಿದರು
ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ತಾಲೂಕ ಜೆಡಿಎಸ್ ಅಧ್ಯಕ್ಷರಾದ ಬಲರಾಮ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಗೋವಿಂದ ಬಾಬು, ಕಾರ್ಯಧ್ಯಕ್ಷ ಎನ್.ಎ.ಈರಣ್ಣ ,ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸೊಗಡು ವೆಂಕಟೇಶ್, ರಾಧಾ ರಾಜಗೋಪಾಲ್, ಮಹಿಳಾ ಘಟಕದ ಅಧ್ಯಕ್ಷೆ ಅಂಬಿಕಾ ರಮೇಶ್ , ಮಖಂಡರಾದ ಮನು ಮಹೇಶ್, ಜಿ.ಎ .ವೆಂಕಟೇಶ್ ಪಾಳೇಗಾರ್ ಲೋಕೇಶ್, ಶಿವಕುಮಾರ್, ತಿಮ್ಮರಾಜ್ ಮದಕರಿ, ಗಂಗಾಧರ ನಾಯ್ಡು, ಕವಲಗೇರಿ ರಾಮಾಂಜಿ, ಸಾವಿರಾರು ಅಭಿಮಾನಿಗಳು ಕಾರ್ಯಕರ್ತರು ಭಾಗವಹಿಸಿದ್ದರು
ವರದಿ: ರಾಮಪ್ಪ, ಸಿ. ಕೆ. ಪುರ., ಪಾವಗಡ ತಾಲ್ಲೂಕು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5