nammatumakuru

    Subscribe to Updates

    Get the latest creative news from FooBar about art, design and business.

    What's Hot

    3.15 ಕೋಟಿ ರೂ. ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ದೂರು

    August 9, 2025

    ಕೊರಟಗೆರೆ ಜನತೆ ಕಂಡು ಕೇಳರಿಯದ ಕ್ರೈಮ್: ಪೊಲೀಸರಿಗೆ ಸವಾಲಾದ ಭೀಕರ ಕೊಲೆ

    August 9, 2025

    ಜೆಡಿಎಸ್ ವತಿಯಿಂದ ಸದಸ್ಯತ್ವ ನೋಂದಣಿ ಅಭಿಯಾನ

    August 9, 2025
    Facebook Twitter Instagram
    ಟ್ರೆಂಡಿಂಗ್
    • 3.15 ಕೋಟಿ ರೂ. ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ದೂರು
    • ಕೊರಟಗೆರೆ ಜನತೆ ಕಂಡು ಕೇಳರಿಯದ ಕ್ರೈಮ್: ಪೊಲೀಸರಿಗೆ ಸವಾಲಾದ ಭೀಕರ ಕೊಲೆ
    • ಜೆಡಿಎಸ್ ವತಿಯಿಂದ ಸದಸ್ಯತ್ವ ನೋಂದಣಿ ಅಭಿಯಾನ
    • ಸರಗೂರು: ಬಸ್ ಸಂಪರ್ಕ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ
    • ಕೊರಟಗೆರೆ: ಮನೆ ಮನೆಯಲ್ಲಿಯೂ ಸುಮಂಗಲಿಯರಿಂದ  ವರಮಹಾಲಕ್ಷ್ಮಿ ಹಬ್ಬದ ವಿಶೇಷ ಪೂಜೆ
    • ನಟ ರಜತ್ ಕಿಶನ್ ಗೆ ಜೀವ ಬೆದರಿಕೆ: ಡಿಜಿಐಜಿಪಿಗೆ ದೂರು
    • ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಹೂ ಕೀಳಲು ಹೋಗಿದ್ದ ವ್ಯಕ್ತಿ ಸಾವು!
    • ಹಿಂದಿನ ದಿನ ನನೆಸಿಟ್ಟ ಮೊಳಕೆ ಕಾಳು ತಿಂದರೆ ಏನಾಗುತ್ತದೆ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸರಗೂರು: ಬಸ್ ಸಂಪರ್ಕ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ
    ಜಿಲ್ಲಾ ಸುದ್ದಿ August 9, 2025

    ಸರಗೂರು: ಬಸ್ ಸಂಪರ್ಕ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

    By adminAugust 9, 2025No Comments2 Mins Read
    bus protest

    ಸರಗೂರು:  ತಾಲೂಕಿನ ಹುಸ್ಕೂರು ಹಾಡಿಗೆ  ಬಸ್ ಸಂಪರ್ಕ ಕಲ್ಪಿಸಲು ಆಗ್ರಹಿಸಿ ಅಖಿಲ ಭಾರತ  ಜನಾಧಿಕಾರ ಸುರಕ್ಷಾ ಸಮಿತಿಯ ನೇತೃತ್ವದಲ್ಲಿ ಗುರುವಾರದಂದು ಪ್ರತಿಭಟನೆಯನ್ನು ಮಾಡಲಾಯಿತು.

    ಸಮಿತಿಯ ಸಂಚಾಲಕ ಸುನಿಲ್ ಟಿ.ಆರ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಸಂಪೂರ್ಣವಾಗಿ ಅರಣ್ಯ ಒಳಗೆ ಇರುವ ಈ ಹಾಡಿಗೆ ಕನಿಷ್ಠಪಕ್ಷ ಬೆಳಿಗ್ಗೆ 8:30ಕ್ಕೆ ಹಾಡಿಯಿಂದ ಸರಗೂರಿಗೆ ಹೊರಡುವಂತೆ ಹಾಗೂ ಸಂಜೆ 4 ಗಂಟೆಗೆ ಸರಗೂರಿನಿಂದ ಹುಸ್ಕೂರು ಹಾಡಿಗೆ ಬರುವಂತೆ  ಬಸ್ ವ್ಯವಸ್ಥೆ ಮಾಡಬೇಕು. ಈಗಾಗಲೇ ದಡದಹಳ್ಳಿ ಮಾರ್ಗವಾಗಿ  ಹೋಗುವ ಬಸ್  ಇಲ್ಲಿಗೆ ಬಂದು ಹೋಗುವಂತೆ ಮಾಡಬೇಕು. ಈ ವಿಚಾರವಾಗಿ ಐಟಿಡಿಪಿ  ಇಲಾಖೆ,ಸಾರಿಗೆ ಇಲಾಖೆಯ ನಿರ್ಲಕ್ಷ್ಯ ಕಾರಣವಾಗಿದೆ. ಇದರಿಂದ ಬಡ ಆದಿವಾಸಿ ಜನರು ಹಾಗೂ ಅವರ ಮಕ್ಕಳು ಎಲ್ಲಾ ನಾಗರಿಕ ಸೌಲಭ್ಯ ಮತ್ತು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.  ಹಾಗಾಗಿ ಈ ಕೂಡಲೇ ಸಮಸ್ಯೆಯನ್ನು ಬಗೆಹರಿಸದಿದ್ದರೆ ಮುಂದಿನ ಹಂತದಲ್ಲಿ ಹುಸ್ಕೂರು  ಹಾಡಿ ಜನರು ಸೇರಿ ಅನಿರ್ದಿಷ್ಟಾವಧಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಲಾಗುವುದು.


    Provided by
    Provided by

    ಹಾಡಿಯ ಮುಖಂಡ ತಿರುಪತಿ ಮಾತನಾಡಿ, ಪ್ರತಿದಿನ ಆನೆ ಭಯದಿಂದ ನಡೆದುಕೊಂಡು ಬರುವುದು ಕಷ್ಟವಾಗುತ್ತಿದೆ. ಪ್ರತಿದಿನ ಆಟೋಗಳಿಗೆ ರೂ. 20 ಕೊಟ್ಟು ಓಡಾಡಬೇಕು. ನಡೆದುಕೊಂಡು ಬರುವಾಗ ಅನೇಕ ಬಾರಿ ಆನೆಗಳು ಎದುರಾಗಿದ್ದು ಹೆದರಿ ಓಡಲು ಪ್ರಯತ್ನಿಸಿ ಅಪಘಾತಗಳು ಆಗಿ ಕೈಕಾಲು ಮುರಿದುಕೊಂಡಿದ್ದಾರೆ. ನಾಲ್ಕೈದು ವರ್ಷಗಳಿಂದಲೂ ಸಹ ಬಸ್ ಬರದೇ ಪ್ರತಿದಿನ ಸಂಚಾರವೇ ಕಷ್ಟವಾಗಿದ್ದು ಸಂಕಷ್ಟದಲ್ಲಿ ಬದುಕುವಂತಾಗಿದೆ ಎಂದರು.

    ಹಾಡಿಯ ಮುಖಂಡ ಬೈರ ಮಾತನಾಡಿ, ಸರಗೂರಿನ ಶಾಲೆಗೆ 18 ಮಕ್ಕಳು ಪ್ರತಿದಿನ 12 ಕಿಲೋಮೀಟರ್ ಮಕ್ಕಳು ದಿನಕ್ಕೆ 30ರೂ ನಂತೆ ತಿಂಗಳಿಗೆ 300ರಂತೆ ಪ್ರತಿವರ್ಷ 9000 ಖಾಸಗಿ ಆಟೋಗಳಿಗೆ ಹಣ ನೀಡಬೇಕು. ಪ್ರತಿದಿನ ಕೂಲಿ ಮಾಡಿದರೆ ಮಾತ್ರ ಅವರ ಜೀವನ ನಡೆಸಲು ಸಾಧ್ಯವಾಗುವಂತಹ ಪರಿಸ್ಥಿತಿ ಇರುವ ಬಡ ಆದಿವಾಸಿ ಜನರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದೇ ಹೆಚ್ಚು ಎನ್ನುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ವರ್ಷಕ್ಕೆ ಸಾವಿರಾರು ಹಣ  ಖರ್ಚು ಮಾಡಿ ಶಾಲೆಗೆ ಕಳಿಸುವುದು ನಮ್ಮಂತ ಜನಗಳಿಗೆ ಬಹಳ ಕಷ್ಟ ಇನ್ನುಳಿದ 20 ಮಕ್ಕಳು  ಹಾಡಿಯಿಂದ ಅರಣ್ಯದ ಅಂಚಿನಲ್ಲಿ ನಾಲ್ಕು ಕಿಲೋಮೀಟರ್ ದಡದಹಳ್ಳಿ ಶಾಲೆಗೆ ನಡೆದುಕೊಂಡೆ ಹೋಗಬೇಕು. ಆ ಮಕ್ಕಳು ಆಟೋ ಮಾಡಿ ಶಾಲೆಗೆ ಕಳಿಸುವ ಸಾಮರ್ಥ್ಯ ಪೋಷಕರಿಗೆಲ್ಲ ಹಾಗಾಗಿ ಪ್ರತಿ ವರ್ಷ 20 ಮಕ್ಕಳು 5ನೇ ತರಗತಿಯ ನಂತರ ವಿದ್ಯಾಭ್ಯಾಸದಿಂದ ವಂಚಿತರಾಗುವಂತಾಗಿದೆ. ಹುಸ್ಕೂರು ಹಾಡಿಯಲ್ಲಿ 5ನೇ ತರಗತಿಯವರೆಗೆ ಮಾತ್ರ ಇದೆ ಅಲ್ಲಿವರೆಗೆ ಮಾತ್ರ ಎಲ್ಲಾ ಮಕ್ಕಳನ್ನು ಓದಿಸಲು ಸಾಧ್ಯವಾಗುತ್ತಿದೆ. ಈ ಶಾಲೆಗೆ ಬರುವ ಶಿಕ್ಷಕರು ಓಡಾಡಲು ಸಹ ಸಮಸ್ಯೆ ಆಗುತ್ತಿದೆ ಎಂದರು.

    ಹಾಡಿಯ ಮುಖಂಡರಾದ ಬುಂಡಮ್ಮ ಮಾತನಾಡಿ, ರಸ್ತೆ ನಿರ್ಮಾಣ ಮಾಡುವುದಾಗಿ ಹೇಳಿ ವರ್ಷಗಳೇ ಕಳೆದರು ಇದುವರೆಗೂ ಕೆಲಸ ಪ್ರಾರಂಭ ಮಾಡಿಲ್ಲ ಇದನ್ನೇ ನೆಪ ಮಾಡಿಕೊಂಡು ಕೆಎಸ್ ಆರ್ ಟಿಸಿ ಅಧಿಕಾರಿಗಳು ಬಸ್ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಸರ್ಕಾರಿ ಕಾರ್ಯಕ್ರಮಗಳಿಗೆ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳಿಗೆ ಜನರನ್ನು ಕರೆದುಕೊಂಡು ಹೋಗಲು ಇದೇ ಕೆಎಸ್ ಆರ್ ಟಿಸಿ ಬಸ್ ಗಳು ಇದೇ ರಸ್ತೆಯಲ್ಲಿ ಬಂದು ನಿಲ್ಲುತ್ತದೆ. ಅದಲ್ಲದೆ ಶಾಲೆ, ಅಂಗನವಾಡಿಗೆ ಬರುವ ಅಕ್ಕಿ ಸಾಗಿಸುವ  ದೊಡ್ಡ ದೊಡ್ಡ ಲಾರಿಗಳೇ ಈ ರಸ್ತೆಯಲ್ಲಿ ಬಂದು ಹೋಗುತ್ತವೆ.ಆದರೂ ಸಹ ಹೆಗ್ಗಡದೇವನಕೋಟೆ ಡಿಪೋ ಅಧಿಕಾರಿಗಳು ರಸ್ತೆ ನೆಪ ಹೇಳುತ್ತಾ ಬಸ್ ಬಿಡದೆ ಸತಾಯಿಸುತ್ತಿದ್ದಾರೆ.

    ಈ ಸಂದರ್ಭದಲ್ಲಿ ಹುಸ್ಕೂರು ಹಾಡಿಯ ಮುಖಂಡರುಗಳಾದ ರತ್ನಮ್ಮ, ಬುಡಂಮ್ಮ, ನೂರಾಳಯ್ಯ, ಕುಳ್ಳಯ್ಯ,ನಿಂಗಯ್ಯ, ಚಾಮ,ಬೈರ, ಮಹೇಶ್, ಅಪ್ಪು, ನಿಂಗಯ್ಯ, ಸೋಮ, ತಿರುಪತಿ ಸೇರಿದಂತೆ ಹಾಡಿಯ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಭದ್ರಾ ಅಭಯಾರಣ್ಯದಲ್ಲಿ ಹುಲಿಯ ಮೃತದೇಹ ಪತ್ತೆ

    August 8, 2025

    ಧ್ವಜಾರೋಹಣ ಮಾಡುವ ಸಚಿವರ ಪಟ್ಟಿಯಿಂದ ಸಚಿವ ಕೆ.ಎನ್.ರಾಜಣ್ಣ ಹೊರಗೆ!

    August 8, 2025

    ಮಹಿಳೆಯ ಭೀಕರ ಹತ್ಯೆ: ಮೃತದೇಹ ತುಂಡು ತುಂಡಾಗಿಸಿ ರಸ್ತೆಗೆಸೆದ ಪಾಪಿಗಳು!

    August 8, 2025
    Our Picks

    ಟ್ರಂಪ್ ಗೆ ತಿರುಗೇಟು ನೀಡಿದ ಪ್ರಧಾನಿ ಮೋದಿ

    August 7, 2025

    ಅಪ್ರಾಪ್ತ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ: ಓರ್ವ ಅಪ್ರಾಪ್ತನ ಸಹಿತ ಮೂವರ ಬಂಧನ

    August 7, 2025

    ಖ್ಯಾತ ಹಾಸ್ಯ ನಟ ಮದನ್ ಬಾಬ್ ನಿಧನ

    August 3, 2025

    ಆಗಸ್ಟ್​ 2ರಂದು  ಪಿಎಂ- ಕಿಸಾನ್ ಯೋಜನೆಯ 20ನೇ ಕಂತು ಬಿಡುಗಡೆ

    July 30, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    3.15 ಕೋಟಿ ರೂ. ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ದೂರು

    August 9, 2025

    ಬೆಂಗಳೂರು: 3.15 ಕೋಟಿ ರೂ. ಹಣ ಪಡೆದು ವಂಚನೆ  ಮಾಡಿರುವುದಾಗಿ ನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲಾಗಿದೆ ಎಂದು…

    ಕೊರಟಗೆರೆ ಜನತೆ ಕಂಡು ಕೇಳರಿಯದ ಕ್ರೈಮ್: ಪೊಲೀಸರಿಗೆ ಸವಾಲಾದ ಭೀಕರ ಕೊಲೆ

    August 9, 2025

    ಜೆಡಿಎಸ್ ವತಿಯಿಂದ ಸದಸ್ಯತ್ವ ನೋಂದಣಿ ಅಭಿಯಾನ

    August 9, 2025

    ಸರಗೂರು: ಬಸ್ ಸಂಪರ್ಕ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

    August 9, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.