ಗುಬ್ಬಿ: ತಾಲೂಕಿನ ಕಲ್ಲೂರು ಗ್ರಾಮ ಪಂಚಾಯಿತಿ ಆಡಳಿತದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜಯಂತಿಯನ್ನು ಆಚರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಲ್.ರವಿಕುಮಾರ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು. ಹಾಗೂ ಸ್ಥಳೀಯ ಮುಖಂಡರ ಸಮ್ಮುಖದಲ್ಲೇ ಅಂಬೇಡ್ಕರ್ ಅವರ ಭಾವಚಿತ್ರ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಲ್.ರವಿಕುಮಾರ್ ಮಾತನಾಡಿ, ಬಾಬಾ ಸಾಹೇಬರು ಕೇವಲ ದಲಿತ ಸಮುದಾಯಕ್ಕೆ ಸಿಮೀತವಾದವರಲ್ಲ ಎಲ್ಲಾ ವರ್ಗದವರಿಗೆ ಮೀಸಲಾತಿ ನೀಡುವ ಮೂಲಕ ಸರ್ವರು ಸಮಾನರು ಎಂಬ ಐಕ್ಯತೆ ಭಾವನೆ ಮೂಡಿಸಿದ ಮಹನ್ ಚೇತನರಾಗಿದ್ದಾರೆ ಅವರ ಆದರ್ಶ ಗಳು ಇಂದಿಗೂ ಜೀವಂತವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಾಜಿ ತಾ.ಪಂ.ಅಧ್ಯಕ್ಷ ಬಿ.ಹೆಚ್.ಭಾರತೀ ಸುರೇಶ್ ಮಾತನಾಡಿ, ಅಂಬೇಡ್ಕರ್ ರವರು ಪ್ರತಿ ಪ್ರಜೆಗಳು ಆಡಳಿತ ನೆಡೆಸುವ ದೃಷ್ಟಿಯಿಂದ ಸಂವಿಧಾನ ರಚಿಸಿ ಎಲ್ಲಾ ವರ್ಗದವರಿಗೂ ರಾಜಕೀಯ ಪ್ರತಿನಿದ್ಯ ನೀಡುವ ಮೂಲಕ ಎಲ್ಲಾರಿಗೂ ಸಮಾನತೆ .ಶಿಕ್ಷಣ.ದೊರೆಯುವ ನಿಟ್ಟಿನಲ್ಲಿ ಸರ್ವಧರ್ಮದ ನಾಯಕರಾಗಿ ಪ್ರಖ್ಯಾತಿ ಪಡೆದಿದ್ದಾರೆ.ಬೇರೆ ರಾಷ್ಟ್ರ ಗಳಲ್ಲಿ ಚಾಲ್ತಿಇರುವ ಅಧ್ಯಕ್ಷೀಯ ಆಡಳಿತ ನಮ್ಮ ದೇಶಕ್ಕೆ ಬೇಡವೆಂಬ ದೃಷ್ಟಿಯಿಂದ ಪ್ರಜೆಗಳೇ ಪ್ರಜೆಗಳಿಗಾಗಿ ಆಡಳಿತ ನೆಡೆಸಬೇಕೆಂಬ ದೃಷ್ಟಿಯಿಂದ ಸಂವಿಧಾನ ರಚಿಸುವು ಮೂಲಕ ಇಂದು ಸಂವಿಧಾನ ಶಿಲ್ಪಿಯಾಗಿದ್ದಾರೆ ಅವರ ತತ್ವ. ಆದರ್ಶ ಗಳನ್ನೂ ನಾವು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಖುಲೇಖಾಬಿ ಯೂಸುಫ್ ಮಾತನಾಡಿ, ಇಂದು ರಾಜಕೀಯ ಪ್ರಾತಿನಿದ್ಯ ನಮಗೆ ದೊರೆತಿರುವುದಕ್ಕೆ ಮೂಲ ಕಾರಣ ಡಾ.ಬಿ.ಆರ್.ಅಂಬೇಡ್ಕರ್ ಇಂದು ನಾವೆಲ್ಲ ಬದುಕುತ್ತಿರುವುದು ಸಂವಿಧಾನ ದ ಅಡಿಯಲ್ಲಿ ಬೇರೆ ರಾಜ್ಯ ಗಳಲ್ಲಿ ಸಿಗದ ಸೌಲಭ್ಯಗಳನ್ನು ನಮ್ಮ ಭಾರತದ ಸಂವಿಧಾನ ಹೊಂದಿದೆ ಬಾಬ ಸಾಹೇಬರು ತಮ್ಮ ಜೀವನದ ಅವಧಿಯಲ್ಲಿ ಸಾಮಾಜಿಕ ನ್ಯಾಯ ಕ್ಕೆ ಹೊರಾಟ ಮಾಡಿದ ಮಹನ್ ನಾಯಕರಾಗಿದ್ದಾರೆ.
ಇಂದು ರಾಜ್ಯದ ಎಲ್ಲಾ ರಾಜಕೀಯ ನಾಯಕರು, ಅಧಿಕಾರಿಗಳು ಎಲ್ಲಾ ವರ್ಗದ ಜನತೆ ಸೌಲಭ್ಯ ಪಡೆಯುತ್ತಿರುವುದಕ್ಕೆ ಮೂಲ ಕಾರಣ ಬಾಬ ಸಾಹೇಬರು ನೀಡಿರುವ ಮೀಸಲಾತಿ. ಈ ಮೀಸಲಾತಿ ದೊರೆಯದೆ ಇದ್ದಿದ್ದರೆ ನಾನು ನಾಡಿಧ ಜನತೆ ಎಲ್ಲಾ ಸೌಲಭ್ಯ ಗಳಿಂದ ವಂಚಿತರಾಗಬೇಕಾಗಿತ್ತು. ಇದನ್ನು ಮನಗಂಡ ಅಂಬೇಡ್ಕರ್ ರವರು ಸಂವಿಧಾನ ರಚಿಸಿ ಪ್ರತಿಯೊಬ್ಬ ನಾಗರಿಕ ನಿಗೂ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಕಾನೂನು ರಚನೆ ಮಾಡಿದ್ದಾರೆ ಇಂತಹ ಮಹನ್ ನಾಯಕರ ಜಯಂತಿ ಆಚರಣೆ ಮಾಡುವುದು ನಮ್ಮ ಭಾಗ್ಯ ಎಂದರು.
ಕಾರ್ಯಕ್ರಮದಲ್ಲಿ ಇಡಗೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಇಡಗೂರು ರವಿ, ಸದಸ್ಯ ರಾದ ಸುಮಶಿವಯ್ಯ, ಸದಯ್ಯ, ಹರಿದೇವನಹಳ್ಳಿ ರಾಜು, ಪಿಡಿಒ. ಗಂಗಾಮಹದೇವಯ್ಯ, ಲೆಕ್ಕಾಧಿಕಾರಿ ಶ್ರೀ ನಿವಾಸ್, ಸಿಬ್ಬಂದಿಗಳಾದ ನಂದೀಶ್, ಕುಮಾರ್, ತಿಮ್ಮಯ್ಯ, ನರಸಿಂಹ ಮೂರ್ತಿ, ಗಿರೀಶ್. ಹರ್ಷ, ಪವನ್, ಮುನ್ನಾ, ಇತರ ಸಿಬ್ಬಂದಿ ಮುಖಂಡರಾದ ನಂಜುಂಡಪ್ಪ ಇತರರು ಉಪಸ್ಥಿತರಿದ್ದರು.
ವರದಿ: ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy