ತುಮಕೂರು: ಜಿಲ್ಲಾ ಸವಿತಾ ಸಮಾಜ ಹಾಗೂ ಪಾವಗಡ ಸವಿತಾ ಸಮಾಜ ಸಹಯೋಗದೊಂದಿಗೆ ತುಮಕೂರು ಜಿಲ್ಲಾ ಸವಿತಾ ಸಮಾಜ ಯುವ ಪಡೆ ವತಿಯಿಂದ ಪಾವಗಡ ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ಪಾವಗಡ ಸವಿತಾ ಸಮಾಜದ ಸಲೂನ್ ಗಳಿಗೆ ಉಚಿತ ಸಲೂನ್ ಕಿಟ್ ನೀಡಲಾಯಿತು.
ಈ ವೇಳೆ ಮಾತನಾಡಿದ ಕಟ್ ವೆಲ್ ರಂಗನಾಥ್, ಯುವಕರು ಸಮುದಾಯ ಸಂಘಟನೆಗೆ ಮುಂದೆ ಬರಬೇಕು, ಹೋಬಳಿ ಮಟ್ಟದಲ್ಲಿ ಸಂಘಟನೆ ಆಗಬೇಕು. ವೃತ್ತಿಯನ್ನ ಆಧುನಿಕತೆಗೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಪಾವಗಡ ಸವಿತಾ ಸಮಾಜ ಯುವ ಪಡೆ ಅಧ್ಯಕ್ಷರಾಗಿ ಲಿಂಗದಹಳ್ಳಿ ನೀಲಕಂಠ ರವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾರ್ಥಸಾರಥಿ, ಪಾವಗಡ ಅಧ್ಯಕ್ಷರಾದ ರಾಮು, ಪ್ರತಿನಿದಿಯಾದ ದೇವರಾಜು, ಯುವ ಪಡೆ ಜಿಲ್ಲಾ ಪ್ರಮುಖರಾದ ಕಟ್ ವೆಲ್ ರಂಗನಾಥ್, ಲಿಂಗದಹಳ್ಳಿ ಸವಿತಾ ಸಮಾಜದ ಅಧ್ಯಕ್ಷರಾದ ರವಿ ಎನ್., ನೀಡಗಲ್ಲು ಸವಿತಾ ಸಮಾಜ ಅಧ್ಯಕ್ಷರಾದ ಕಣಮರಾಜು, ಅಣ್ಣಪ್ಪ, ನಾಗರಾಜು, ಮೋಹನ್, ಅರಸೀಕೆರೆ ನಾರಾಯಣಪ್ಪ, ಬಡವನಹಳ್ಳಿ ಪ್ರದೀಪ್, ಮುತ್ಯುಂಜಯ, ಶ್ರೀಕೃಷ್ಣ,ಗಣೇಶ, ಪಾವಗಡ ಶೇಖರ್, ವಿನೋದ್, ಗುರು ಮೂರ್ತಿ, ಬಾಬು, ತುಮಕೂರು ಜಿಲ್ಲೆಯ ಯುವ ಪಡೆಯ ಪದಾಧಿಕಾರಿಗಳು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz