ಮಾಯಸಂದ್ರ: ಮಾರ್ಚ್ 29 ರಿಂದ 31ರವರೆಗೆ ಬಿಜಾಪುರದಲ್ಲಿ ನಡೆದ ಪೈಕಾ ಕ್ರೀಡಾಕೂಟದಲ್ಲಿ ಹ್ಯಾಂಡ್ಬಾಲ್ ಪಂದ್ಯದಲ್ಲಿ ಆದಿಚುಂಚನಗಿರಿ ಮಠದ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಮಾಯಸಂದ್ರ TB ಕ್ರಾಸ್’ನಾ SBG ವಿದ್ಯಾಲಯವು ಭರ್ಜರಿ ಜಯಭೇರಿ ಬಾರಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದೆ.
ಶಾಲೆಯ ದೈಹಿಕ ತರಬೇತುದಾರಾದ CP ಉದಯ್ ಕುಮಾರ್, ಗಿರಿಧರ್ ಕೆ.ಎಸ್. ಮತ್ತು ಶಂಕರ್ ಎಂ.ಎಸ್.ರವರ ಸಾರಥ್ಯದಲ್ಲಿ ಪಳಗುತ್ತಿರುವ ವಿದ್ಯಾರ್ಥಿಗಳು , ಭಾಗವಹಿಸಿದ ಕ್ರೀಡಾಕೂಟಗಳಲೆಲ್ಲಾ ಜಯಭೇರಿ ಬಾರಿಸುತ್ತಿದ್ದಾರೆ.
SBG ಮಕ್ಕಳ ಈ ಸಾಧನೆ ಕಂಡು ಶ್ರೀ ಶ್ರೀ ಪ್ರಸನ್ನ ಸ್ವಾಮೀಜಿ ಅವರು , ಆಡಳಿತಾಧಿಕಾರಿಗಳಾದ ರಾಜಣ್ಣ, ಮುಖ್ಯ ಶಿಕ್ಷಕರಾದಂತಹ ಗಿರೀಶ್ ಮತ್ತು ಎಲ್ಲಾ ಶಿಕ್ಷಕ ಬಳಗ ಶುಭಕೋರಿದ್ದಾರೆ.
ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5