ಪಾವಗಡ: ತಾಲೂಕಿನ ಜೆಡಿಎಸ್ ಪಕ್ಷದ ನಾಯಕರು, ಪಿ ಎಲ್ ಡಿ ಬ್ಯಾಂಕ್ ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷರು ಕರ್ನಾಟಕ ಮಾರ್ಕೆಟಿಂಗ್ ಫೆಡರೇಶನ್ ಮಾಜಿ ನಿರ್ದೇಶಕರು ಲಿಂಗದಹಳ್ಳಿ ಎಲ್.ಎಸ್.ನರಸರೆಡ್ಡಿ ಅವರು ಇಂದು ದೈವಾಧೀನರಾಗಿದ್ದಾರೆ.
75 ವರ್ಷದ ಹಿರಿಯ ಅನುಭವಿ ರಾಜಕಾರಣಿಗಳಲ್ಲಿ ಒಬ್ಬರಾದ ಇವರು, ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿದ್ದು, ಅಪಾರ ಬಂಧು–ಬಳಗ ಆತ್ಮೀಯ ಮತ್ತು ರಾಜಕೀಯ ಅಭಿಮಾನಿಗಳನ್ನು ಅಗಲಿದ್ದಾರೆ.
ಪ್ರಗತಿಪರ ರೈತರದ ಇವರ ಪಾರ್ಥಿವ ಶರೀರವು ದಿನಾಂಕ 17.10.2024ರ ಗುರುವಾರ ಬೆಳಿಗ್ಗೆ 10 ಗಂಟೆಗೆ ಲಿಂಗದಹಳ್ಳಿ ಅವರ ತೋಟದಲ್ಲಿ ಅಂತ್ಯ ಸಂಸ್ಕಾರ ಅಂತ್ಯಕ್ರಿಯೆ ನಡೆಯಲಿದೆ ತಾಲೂಕಿನ ಎಲ್ಲಾ ರಾಜಕೀಯ ಪಕ್ಷಗಳ ಅನೇಕ ಗಣ್ಯರು ಇವರ ಅಂತಿಮ ದರ್ಶನ ಪಡೆದಿದ್ದಾರೆ.
ಜಿಲ್ಲಾ ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಆರ್.ಸಿ.ಅಂಜನಪ್ಪ ರಾಜ್ಯ ಜೆಡಿಎಸ್ ಪಾರ್ಲಿಮೆಂಟರಿ ಸದಸ್ಯರಾದ ಎನ್. ತಿಮ್ಮರೆಡ್ಡಿ ಮಾಜಿ ಶಾಸಕರಾದ ಕೆ.ಎಂ. ತಿಮ್ಮರಾಯಪ್ಪ ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಎನ್.ಎ.ಈರಣ್ಣ ಮಹಾ ಪ್ರಧಾನ ಕಾರ್ಯದರ್ಶಿ ಮತ್ತು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸೊಗಡು ವೆಂಕಟೇಶ್ ಬಲರಾಮರೆಡ್ಡಿ, ಎಸ್ ಕೆ ರೆಡ್ಡಿ, ಕೋಟಗುಡ್ಡ ಅಂಜಯ್ಯ ರಾಜಶೇಖರಪ್ಪ ಗೋವಿಂದ ಬಾಬು ಇನ್ನು ಅನೇಕ ಜೆಡಿಎಸ್ ಪಕ್ಷದ ಮುಖಂಡರು ಅವರ ಅಂತಿಮ ದರ್ಶನ ಪಡೆದು ಸಂತಾಪವನ್ನು ಸೂಚಿಸಿದ್ದಾರೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q