ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಕಳೆದ 20ವರ್ಷಗಳಿಂದ ಶನೇಶ್ವರ ಸ್ವಾಮಿ ಸೇವಾಸಮಿತಿ ಮಹಾಶಿವರಾತ್ರಿ ಹಬ್ಬದ ಮರುದಿವಸ ಪ್ರತಿ ವರ್ಷವು ಸಹ ಮಹಾ ದಾಸೋಹ ನಡೆಸುವ ಮೂಲಕ ದೇವಾಲಯವು ಹೆಸರುಗಳಿಸಿದೆ.
ಪ್ರತಿ ಬಾರಿಯೂ ಸಹ ಭಕ್ತರ ಸಹಕಾರ ದಿಂದ ದಾಸೋಹ ಸೇವೆಗಳು ನೆಡೆದುಕೊಂಡು ಬರುತ್ತಿದೆ. ಕಲ್ಲೂರು ಗ್ರಾಮಕ್ಕೆ ಸೇರಿರುವ ಸಾಕಷ್ಟು ಹಳ್ಳಿ ಗಳಿಂದ ಶ್ರೀ ಶನೇಶ್ವರ ಸ್ವಾಮಿ ದೇವಾಲಯದ ಪೂಜಾ ಕಾರ್ಯಕ್ರಮ ದಲ್ಲಿ ಭಾಗವಹಿಸುವ ಸಹಾಸ್ರರು ಭಕ್ತರು ಮಹಾಶಿವರಾತ್ರಿ ಹಬ್ಬದ ಮರುದಿವಸ ದಾಸೋಹ ವ್ಯವಸ್ಥೆಯನ್ನು ದವಸ ಧಾನ್ಯಗಳನ್ನು ನೀಡುವ ಮೂಲಕ ಭಕ್ತರು ತಮ್ಮ ಸೇವೆಯನ್ನು ನೀಡುತ್ತಿದ್ದಾರೆ.
ಇತಿಹಾಸ ಪ್ರಸಿದ್ಧ ವಾದ ಈ ಶನೇಶ್ವರ ಸ್ವಾಮಿ ದೇವಾಲಯವು ಈ ಭಾಗದ ಜನತೆಯ ಆರಾಧ್ಯದೈವವಾಗಿದೆ. ಮಹಾಶಿವರಾತ್ರಿ ಹಬ್ಬದ ದಿನದಲ್ಲಿ ಶನೇಶ್ವರ ಸ್ವಾಮಿ ಗೆ ವಿಶೇಷ ಅಲಂಕಾರ. ಪೂಜಾ ಕಾರ್ಯಕ್ರಮ ನೆಡೆಯಲಿದ್ದು ದೂರದ ಜಿಲ್ಲೆ. ತಾಲೂಕು ಕೇಂದ್ರಗಳಿಂದ ಕ್ಷೇತ್ರ ಕ್ಕೆ ಭಕ್ತರು ಆಗಮಿಸುತ್ತಾರೆ. ಎಂದು ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಕಲ್ಲೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ರವಿಕುಮಾರ್ ಪ್ರತಿಕ್ರಿಯಿಸಿ ಮಹಾಶಿವರಾತ್ರಿಯ ಹಬ್ಬದ ಪ್ರಯುಕ್ತವಾಗಿ ಶ್ರೀ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸಮಿತಿಯೂ ಕಳೆದ ಇಪ್ಪತ್ತು ವರ್ಷಗಳಿಂದ ಸತತವಾಗಿ ಧಾರ್ಮಿಕ ಸೇವೆ.ದಾಸೋಹ ಸೇವೆ ನೆಡೆಸಿಕೊಂಡು ಬರುತ್ತಿರುವುದು ಬಹಳ ಸಂತಸದ ಸಂಗತಿ ಎಂದು ದೇವಾಲಯ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶನೇಶ್ವರ ಸ್ವಾಮಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಕೆ.ವಿ.ನಾರಾಯಣ ಮಾತನಾಡಿ ಭಕ್ತರ ಸಹಕಾರ ದಿಂದ ಪ್ರತಿ ವರ್ಷ ವು ಸಹ ಅದ್ದೂರಿಯಾಗಿ ಧಾರ್ಮಿಕ ಸೇವೆ ನೆಡೆಸಿಕೊಂಡು ಬರುತ್ತಿದ್ದು ದೇವಾಲಯದ ಆವರಣದಲ್ಲಿ ನೂತನವಾಗಿ ದೇವಾಸ್ಥಾನ ಕಟ್ಟಡ ನಿರ್ಮಾಣ ಕ್ಕೆ ಸಮಿತಿ ಮುಂದಾಗಿದ್ದು ಭಕ್ತರ ಸಹಕಾರ ನೀಡಬೇಕಿದೆ ಎಂದು ಮನವಿ ಮಾಡಿದರು.
ವರದಿ: ಡಿ.ಮಂಜುನಾಥ್. ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB