ಕೊರಟಗೆರೆ : ನಮ್ಮ ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಅವರ ಮೇಲೆ ಮಾಡಿರುವ 1300 ಕೋಟಿ ಹಗರಣದ ಆರೋಪ ಸತ್ಯಕ್ಕೆ ದೂರವಾಗಿದ್ದು ಎಂದು ದಲಿತ ಮುಖಂಡ ದಾಡಿ ವೆಂಕಟೇಶ್ ತಿಳಿಸಿದರು.
ಪಟ್ಟಣದ ಪಾಂಚಜನ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಪಕ್ಷದ ದಲಿತ ಮುಖಂಡರು ಏರ್ಪಡಿಸಲಾಗಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಆಭ್ಯರ್ಥಿ ಡಾ,ಜಿ,ಪರಮೇಶ್ವರ್ ಅವರ ಆಡಳಿತ ವಿರೋಧ ಇರುವುದರಿಂದ ಕಾಂಗ್ರೆಸ್ ಪಕ್ಷದ ಮುಖಂಡರು ಈ ಭಾರಿ ಚುನಾವಣೆಯಲ್ಲಿ ಸೋಲುವ ಭಯದಿಂದ ನಮ್ಮ ಬಿಜೆಪಿ ಪಕ್ಷದ ಆಭ್ಯರ್ಥಿಯಾದ ಅನಿಲ್ಕುಮಾರ್ ಅವರು ಬೆಂಗಳೂರಿನ ಬಿಬಿಎಂಪಿಯಲ್ಲಿ ಕರ್ತವ್ಯ ನಿರ್ವಹಿಸುದ್ದ ಸಂದರ್ಭದಲ್ಲಿ 1300 ಕೋಟಿ ಹಗರಣ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದವರು ಮಾಡಿರುವ ಆರೋಪ ಸುಳ್ಳಾಗಿದ್ದು, ಅವರು 35 ವರ್ಷದ ಸೇವಾಧಿಯಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಅನಿಲ್ಕುಮಾರ್ ಅವರ ಮೇಲೆ ಮಾಡಿರುವ ಆರೋಪ ಸಾಭೀತು ಆಗಿಲ್ಲ. ಇದರ ಜೊತೆಗೆ ಅವರ ಮೇಲೆ ಯಾವುದೇ ಮಾನನಷ್ಟ ವರದಿಯನ್ನ ಮಾಡದಂತೆ ಈಗಾಗಲೇ ಕೋಟ್ನಿಂದ ನಿರ್ದೇಶನ ನೀಡಲಾಗಿದೆ. ಇದೆ ರೀತಿ ಮುಂದುವರೆದರೆ ಮಾನನಷ್ಟ ಮೊಕದ್ದಮೆ ಹೊಡುವ ಬಗ್ಗೆ ಚೆರ್ಚೆಸಲಾಗುವುದು, ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಮಾದಿಗ ಸಮುದಾಯ ಶೇ.100 ರಷ್ಟು ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ ಎಂದು ಹೇಳುತ್ತಿರುವುದು ಸುಳ್ಳು, ಈ ಬಾರಿ ಮಾದಿಗ ಸಮುದಾಯದ ಐಎಎಸ್ ಅಧಿಕಾರಿಯಾಗಿ ಕತ್ರ್ಯವ್ಯ ನಿರ್ವಹಿಸಿದ ಬಿ,ಹೆಚ್.
ಅನಿಲ್ಕುಮಾರ್ ಪರವಾಗಿ ಬೆಂಬಲ ಸೂಚಿಸಿದ್ದಾರೆ ಎಂದರು.
ಇಷ್ಟು ವರ್ಷ ಕಾಂಗ್ರೆಸ್ ಪಕ್ಷ ಒಳಮೀಸಲಾತಿ ಮಾಡದೆ ಕಾಲಹರಣ ಮಾಡಿಕೊಂಡು ಬಂದಿತ್ತು. ಈ ಬಿಜೆಪಿ ಪಕ್ಷ ಒಳಮೀಸಲಾತಿಯನ್ನ ಕೇಂದ್ರಕ್ಕೆ ಶಿಫಾರಸ್ ಮಾಡಿದ ಮೇಲೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಮೇಲೆ ಮತ್ತೆ ಶಿಫಾರಸ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಕೊರಟಗೆರೆ ಶಾಸಕರಾದ ಡಾ.ಜಿ.ಪರಮೇಶ್ವರ್ ಅವರು ಬಹುಸಂಖ್ಯೆಯ ಮಾದಿಗ ಸಮುದಾಯದವರನ್ನ ಒಂದು ಉನ್ನತ ಸ್ಥಾನ ನೀಡುವಲ್ಲಿ ವಿಫಲರಾಗಿದ್ದು, ಅವರು ನಮ್ಮ ಮಾದಿಗ ಸಮುದಾಯ ಉದ್ದಾರ ಮಾಡುತ್ತಾರಾ ಹೇಳಿ. ಎಂದು ತಿಳಿಸಿದರು.
ದಲಿತ ಮುಖಂಡ ದಲಿತ ಅನಂದ್ ಮಾತನಾಡಿ ಪರಮೇಶ್ವರ್ ಅವರು ಎಡಗೈ ಸಮುದಾಯ ಪರವಾಗಿದ್ದಾರೆ ಎನ್ನವುದು ಅಪ್ಪಟ್ಟ ಸುಳ್ಳು, ಕೊರಟಗೆರೆ ಪಟ್ಟಣದಲ್ಲಿ ಒಂದು ಅಂಬೇಡ್ಕರ್ ಭವನ, ಬಾಬು ಜಗಜೀವನ್ ಭವನ ನಿರ್ಮಾಣ ಮಾಡಲು ಗುದ್ದಲ್ಲಿ ಪೂಜೆಗೆ ಮಾತ್ರ ಸೀಮಿತವಾಯಿತ್ತು. ಡಾ.ಜಿ.ಪರಮೇಶ್ವರ್ ಅವರು ಒಳಮೀಸಲಾತಿಯ ವಿರೋಧಿಗಳು ಇಷ್ಟು ವರ್ಷ ಮಾದಿಗ ಸಮುದಾಯದ ಮತ ಪಡೆದ ಶಾಸಕರು ಸದನದಲ್ಲಿ ಒಳಮೀಸಲಾತಿಯ ಬಗ್ಗೆ ಒಂದು ಮಾತು ಹಾಡಿಲ್ಲ ಇಂತಹವರ ಪರವಾಗಿ ಮಾದಿಗರು ನಿಲ್ಲಬೇಕಾ ಈ ಭಾರಿ ಕೊರಟಗೆರೆ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಬಿಜೆಪಿ ಪಕ್ಷದ ಆಭ್ಯರ್ಥಿ ಅನಿಲ್ಕುಮಾರ್ ಪರವಾಗಿ ನಿಲ್ಲುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಎಸ್ಸಿ ಮೋರ್ಚಾ ಅಧ್ಯಕ್ಷ ಬ್ಯಾಲ್ಯ ಮೂರ್ತಿ, ಚೆನ್ನರಾಯನದುರ್ಗಾ ರಮೇಶ್, ಬೈಲರಾಜು, ತೊಗರಿಘಟ್ಟ ಗೋವಿಂದರಾಜು ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy