ಕೊರಟಗೆರೆ : ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಅರಸ ಶ್ರೀ ಕೃಷ್ಣದೇವರಾಯರ ಆದರ್ಶ ಮತ್ತು ವ್ಯಕ್ತಿತ್ವ ಕೇವಲ ಬಲಿಜ ಸಮುದಾಯಕ್ಕೆ ಸೀಮಿತವಲ್ಲ ದೇಶದ ಎಲ್ಲಾ ಹಿಂದೂ ಸಮಾಜಕ್ಕೆ ಆದರ್ಶಪ್ರಾಯ ಎಂದು ಕೊರಟಗೆರೆ ತಾಲೂಕು ಬಲಿಜ ಸಂಘದ ಆಧ್ಯಕ್ಷ ಎನ್,ಪದ್ಮನಾಭ್ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದ ಕಾಮಧೇನು ಹೋಟೆಲ್ ಸಭಾಂಗಣದಲ್ಲಿ ತಾಲೂಕು ಬಲಿಜ ಸಂಘ, ಮಹಿಳಾ ಬಜಿಜ ಸಂಘ ಹಾಗೂ ಯುವ ಬಜಿಜ ಸಂಘ ಏರ್ಪಡಿಸಿದ್ದ ಶ್ರೀ ಕೃಷ್ಣದೇವರಾಯರ 552ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಮಾತನಾಡಿ ಕರ್ನಾಟಕ ಸಮೃದ್ದ ಇತಿಹಾಸದಲ್ಲಿ ತನ್ನದೇ ಛಾಪನ್ನು ಮೂಡಿಸಿದ ವಿಜಯನಗರ ಸಾಮ್ರಾಜ್ಯದ ಅರಸ ಕನ್ನಡ ರಾಜ್ಯರತ್ನ ಸಿಂಹಾಸನಾಧೀಶ್ವರ ಶ್ರೀ ಕೃಷ್ಣದೇವರಾಯರೊಬ್ಬರು ದೂರದೃಷ್ಠಿಯ ಮಹಾನ್ ವ್ಯಕ್ತಿಯಾಗಿದ್ದಲ್ಲದೇ ಹಿಂದೂ ಧರ್ಮದ ಪರಮ ಸಹಿಷ್ಣುವಾಗಿದ್ದರು, ಅವರು ಕೇವಲ ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಚಕ್ರವರ್ತಿಯಲ್ಲದೇ ಈ ಜಗತ್ತು ಕಂಡ ಮಹಾನ್ ಚಕ್ರವರ್ತಿಗಳಲ್ಲಿ ಒಬ್ಬರಾಗಿದ್ದರು.
ಇಂತಹ ಮಹಾನ್ ವ್ಯಕ್ತಿ ನಮ್ಮ ಬಲಿಜ ಸಮುದಾಯದ ವ್ಯಕ್ತಿಯಾಗಿರುವುದು ಬಲಿಜ ಕುಲಕ್ಕೆ ಕಳಸ ಪ್ರಾಯ ಎಂದು ತಿಳಿಸಿದರು.ತಾಲೂಕು ಬಲಿಜ ಸಂಘದ ಪತ್ರಿಕಾ ಕಾರ್ಯದರ್ಶಿ ಹಾಗೂ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್ ಮಾತನಾಡಿ ಶ್ರೀ ಕೃಷ್ಣದೇವರಾಯರು ತಮ್ಮ ಆಗಾಧವಾದ ಶಕ್ತಿ ಸಾಮರ್ಥದೊಂದಿಗೆ ಬಹುಮುಖ ಪ್ರತಿಭೆ ಸಮರ್ಥ ಆಡಳಿತಗಾರ ಮತ್ತು ಕಲೆ ಮತ್ತು ಸಾಹಿತ್ಯದ ಉದಾರವಾದಿ ಪೋಷಕರಾಗಿ ದಕ್ಷಿಣ ಭಾರತದಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯ ಛಾಪು ಮೂಡಿಸಿದಾರೆ, ಕರ್ನಾಟಕದ ವಿಜಯನಗರದ ರಾಜನಾಗಿದ್ದರೂ ಆಂದ್ರಪ್ರದೇಶದ ನೈಋತ್ಯ ಭಾಗದಲ್ಲಿರುವ ಐದು ಜಿಲ್ಲೆಗಳಲ್ಲಿ ಸಾಮ್ರಾಜ್ಯ ಸ್ಥಾಪಿಸಿದ್ದು ಇಂದಿಗೂ ರಾಯಲಸೀಮಾ ಭಾಗವನ್ನು ಶ್ರೀಕೃಷ್ಠದೇವರಾಯನ ಭೂಮಿ ಎಂದೇ ಕರೆಯಲಾಗುತ್ತದೆ.
ಕೃಷ್ಣದೇವರಾಯರು ಹಿಂದೂ ಧರ್ಮದ ಅಭಿವೃದ್ದಿಗೆ ಶ್ರಮಿಸಿದ್ದ ಮಾಹಾನ್ ವ್ಯಕ್ತಿಯಾಗಿದ್ದು ಇದರ ಕುರುಹಾಗಿ ಹಜಾರರಾಮ ದೇವಸ್ಥಾನ ಅಲ್ಲದೇ ಹಂಪೆಯ ವಿಠಲಸ್ವಾಮಿಯ ದೇವಸ್ಥಾನ ನಿರ್ಮಾಣದ ಸಂಪೂರ್ಣ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.
ಪಾಳು ಬಿದ್ದ ಹಿಂದೂ ದೇವಾಲಯಗಳ ಜೀರ್ಣೋದ್ದಾರ ಮಾಡಿಸಿದ್ದಲ್ಲದೇ ಲಕ್ಷಾಂತರ ದೇವಾಲಯಗಳಲ್ಲಿ ನಿತ್ಯ ಪೂಜೆ ಪುನಸ್ಕಾರಗಳು ಯಥಾವತ್ತಾಗಿ ನಡೆಯುವಂತೆ ಧಾರ್ಮಿಕ ದತ್ತಿ ಮತ್ತು ಉಂಬಳಿಗಳನ್ನು ನೀಡಿದ್ದಾರೆ, ದೇಶದಲ್ಲೇ ಪ್ರಸಿದ್ದಯಾಗಿರುವ ತಿರುಪತಿ ತಿರುಮಲ ದೇವಾಲಯದ ಅಭಿವೃಧ್ದಿ ಶ್ರೀಕೃಷ್ಣದೇವರಾಯರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ತಾಲೂಕು ಮಹಿಳಾ ಬಲಿಜ ಸಂಘದ ಅಧ್ಯಕ್ಷೆ ಗೀರಿಜಾಕೃಷ್ಣಪ್ಪ ಮಾತನಾಡಿ ದಕ್ಷಿಣ ಭಾರತದಲ್ಲಿ ಹಿಂದೂ ಸಾಮ್ರಾಜ್ಯದವನ್ನು ಸ್ಥಾಪಿಸಿ ಸುಮಾರು 330 ವರ್ಷಗಳ ಕಾಲ ಅತ್ಯಂತ ವೈಭವೋಪೇತವಾಗಿ ಆಳ್ವಿಕೆ ನಡೆಸಿದ ವಿಜಯನಗರ ಸಾಮ್ರಾಜ್ಯದ ಅರಸಾಗಿದ್ದ ಕೃಷ್ಣದೇವರಾಯರು ತಮ್ಮ ಅವದಿಯಲ್ಲಿ ದುಸ್ತಿತಿಯಲ್ಲಿದ್ದ ರಾಜಕೀಯ ಆಡಳಿತವನ್ನು ಉತ್ತಮಮಟ್ಟಕ್ಕೆ ತಂದ ಅವರು ಇಂದಿನ ಸರ್ಕಾರಕ್ಕೂ ಆದರ್ಶವಾಗಿದ್ದಾರೆ ಎಂದು ತಿಳಿಸಿದರು.
ಬಲಿಜ ಮಹಿಳಾ ಸಂಘದ ಮಂಜುಳಾ ಮಯೂರ ಗೋವಿಂದರಾಜು ಮಾತನಾಡಿ 1471 ವಕೃತಿ ನಾಮ ಸಂವತ್ಸರ ಪುಪ್ಯಮಾಸ ಬಹುದ್ವಾದಶಿ ಶುಕ್ರವಾರ ಜ್ಯೇಷ್ಠ ನಕ್ಷತ್ರದಲ್ಲಿ ಜನಿಸಿದ ನಮ್ಮ ಬಲಿಜ ಸಮುದಾಯದ ಕುಲತಿಲಕ ಶ್ರೀಕೃಷ್ಣದೇವರಾಯರ ಸಾಮ್ರಾಜ್ಯದಲ್ಲಿ ರಸ್ತೆಯಲ್ಲಿ ಮುತ್ತು ರತ್ನ ವ್ಯಾಪಾರ ಮಾಡುವ ಮೂಲಕ ಭವ್ಯ ಭಾರತ ಸರ್ಕಾರಕ್ಕೆ ಆಡಳಿತದಲ್ಲಿ ಆದರ್ಶವಾಗಿದ್ದಾರೆ ಇಂತಹ ಬಲಿಜ ಸಮುದಾಯಕ್ಕೆ ಅನ್ಯಾಯಮಾಡುತ್ತಿರುವುದು ಶೊಚನೀಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಲಿಜ ಕುಲಗುರು ಕೈವಾರ ಯೋಗಿನಾರಾಯಣ. ಬಲಿಜ ಸಮುದಾಯದಲ್ಲಿ ಹುಟ್ಟ ಸಮಾಜ ಸೇವೆಯಮೂಲಕ ಆದರ್ಶ ಪ್ರಾಯರಾದ ಅಕ್ಷರ ದೇವತೆ ಸಾವಿತ್ರಿ ಬಾಯಿಪುಲ್ಲೆ ಹಾಗೂ ಪೇರಿಯಾರ್ ರಾಮಸ್ವಾಮಿ ರವರ ಬಾವಚಿತ್ರಕ್ಕೂ ಪುಪ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಸಂಘದ ಉಪಾಧ್ಯಕ್ಷ ವೆಂಕಟೇಗೌಡ, ಕಾರ್ಯದಶಿ ನವೀನ್ ಕುಮಾರ್, ಖಜಾಂಚಿ ವೆಂಕಟೇಶ್, ಯುವ ಬಲಿಜ ಅಧ್ಯಕ್ಷ ಸಂಜಯ್, ಪಧಾದಿಕಾರಿಗಳಾದ ಕೆ.ವಿ.ಶ್ರೀನಿವಾಸ್,ಪ್ರೇಂಡ್ಸ್ ಗ್ರೂಪ್ ರವಿಕುಮಾರ್,ಕೆ.ಬಿ.ಲೋಕೇಶ್, ಬೆನಕಾ ವೆಂಕಟೇಶ್,ಕೊಡ್ಲಹಳ್ಳಿ ಜಗದೀಶ್,ವೆಂಕಟಾಚಲಿ, ಶಿವಕುಮಾರ್,ರೋಹಿತ್, ಕೇಶವಮೂರ್ತಿ,ಜಯರಾಮ್, ಆರ್.ಜಿ.ಎಸ್.ಅನಿಲ್ಕುಮಾರ್, ದಯಾನಂದ್, ನಯನ್, ರಮೇಶ್ಬಾಬು ಮಹಿಳಾ ಸಂಘದ ಮಂಜುಳಾ ಮಯೂರ ಗೋವಿಂದರಾಜು,ಗೀತಾ,ಸುಚಿತ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೊರಟಗೆರೆ ಪಟ್ಟಣದ ಕಾಮಧೇನು ಹೋಟೆಲ್ ಸಭಾಂಗಣದಲ್ಲಿ ತಾಲೂಕು ಬಲಿಜ ಸಂಘ ಏರ್ಪಡಿಸಿದ್ದ ಶ್ರೀಕೃಷ್ಣದೇವರಾಯ ಜಯಂತಿ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಇದ್ದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy