ಪಾವಗಡ: ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪಾವಗಡ ತಾಲ್ಲೂಕು ಕೋಟಗುಡ್ಡದ ಸಹನಾ ಆಂಗ್ಲ ಶಾಲೆಯಲ್ಲಿ ರಾಧಾ-ಶ್ರೀಕೃಷ್ಣ ವೇಷ ಸ್ಪರ್ಧೆ ಮತ್ತು ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಮಕ್ಕಳು ವಿವಿಧ ವೇಷಭೂಷಣಗಳಿಂದ ರಾಧಾ ಮತ್ತು ಶ್ರೀಕೃಷ್ಣವೇಷವನ್ನು ಧರಿಸಿಕೊಂಡು ಬಂದಿದ್ದರು. ಶಾಲೆಯಲ್ಲಿ ಜೋಕಾಲಿ ಆಡಿ ಮೊಸರು ಕುಡಿಕೆ ಹೊಡೆದು ಸಂಭ್ರಮಿಸಿದರು.
ಸಹನಾ ಆಡಳಿತ ಮಂಡಳಿ ಆಡಳಿತಾಧಿಕಾರಿಗಳಾದ ಶ್ರೀನಿವಾಸ್ ರವರು ಮಕ್ಕಳಿಗೆ ಬಹುಮಾನವನ್ನು ವಿತರಿಸಿ ಪೋಷಕರಿಗೆ, ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಶುಭಾಶಯಗಳನ್ನು ಕೋರಿದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q