ಪಾವಗಡ: ಉತ್ತಮ ಶಿಕ್ಷಣ , ಎಲ್ಲರಿಗೂ , ಎಲ್ಲೆಡೆ ಸಿಗುವಂತಾಗಬೇಕು ಎನ್ನುವ ಉದ್ದೇಶದಿಂದ ಶ್ರೀ ಶಾಲಾ ಇಂಟರ್ ನ್ಯಾಷನಲ್ ಸ್ಕೂಲ್ ಆರಂಭಿಸಲಾಯಿತು ಎಂದು ಡಾ.ಜಿ.ವೆಂಕಟರಾಮಯ್ಯ ತಿಳಿಸಿದರು.
ಪಾವಗಡ ಪಟ್ಟಣದ ಪ್ರತಿಷ್ಠಿತ ಶ್ರೀಶಾಲಾ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಡಿನಾಡು ಪಾವಗಡ ತಾಲ್ಲೂಕು ಬರಪೀಡಿತ , ಹಿಂದುಳಿದ ತಾಲ್ಲೂಕು ಎಂದು ಹಣೆಪಟ್ಟಿ ಪಡೆದುಕೊಂಡಿದೆ, ಇಂತಹ ಪ್ರದೇಶದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಉತ್ತಮ ಶಿಕ್ಷಣದ ಸಲುವಾಗಿ ಬೇರೆ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ವಿದ್ಯಾಭ್ಯಾಸ ಮಾಡಿಸುತ್ತಿರುವುದು ಅವರ ಕಷ್ಟಗಳನ್ನು ಕಂಡು ನಮ್ಮ ತಾಲ್ಲೂಕಿನಲ್ಲೇ ಉತ್ತಮ ಶಿಕ್ಷಣ ಕೊಡಬೇಕು ಎಂಬ ಧ್ಯೇಯದಿಂದ ಸುಲಭ ಧರದಲ್ಲಿ ಸೌಲಭ್ಯ ಸಹಿತ ಶಿಕ್ಷಣ ಒದಗಿಸುವ ಸಲುವಾಗಿ ಈ ಶಾಲೆ ತೆರೆಯಲಾಗಿದೆ, ಇಂತಹ ಶಾಲೆಯಲ್ಲಿ ತಮ್ಮ ಮಕ್ಕಳನ್ನು ದಾಖಲು ಮಾಡುವಂತೆ ತಿಳಿಸಿದರು.
ಶ್ರೀಶಾಲ ಇಂಟರ್ ನ್ಯಾಷನಲ್ ಸ್ಕೂಲ್ ನ ಸಂಸ್ಥಾಪನಾ ಮುಖ್ಯಸ್ಥರಾದ ರಾಮಾಂನೇಯಲು ಮಾತನಾಡಿ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೆ ಉತ್ತಮ ಶಿಕ್ಷಣ ಕೊಡಿಸಿದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಹಾಗೂ ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಲು ನೆರವಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಶಾಲೆಯ ಮಕ್ಕಳಿಂದ ಭರತನಾಟ್ಯ, ಗೀತಾ ಗಾಯನ, ನಾಟಕ, ನೃತ್ಯ ರೂಪಕ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದವು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಲಕ್ಷ್ಮೀವೆಂಕಟರಾಮಯ್ಯ, ಶಶಿಕಿರಣ್, ಶಾರದ ರಾಮಾಂಜನೇಯಲು, ಸಿ.ಪಿ.ಐ. ಗಿರೀಶ್, ಬಿ.ಇ.ಒ ಇಂದ್ರಣಮ್ಮ ಎಸ್.ಎಸ್.ಕೆ. ಸಂಘದ ಆನಂದರಾವ್, ಶ್ರೀನಿವಾಸ್, ಭೀಮನಕುಂಟೆ ಸತ್ಯನಾರಾಯಣ, ನಾರಯಣಪ್ಪ, ಬಿ.ಆರ್.ಸಿ ಪವನ್ ಕುಮಾರ್, ಪುರಸಭೆ ಸದಸ್ಯ ಗೋರ್ತಿ ನಾಗರಾಜ್, ಶ್ರೀನಿವಾಸ್ ರೆಡ್ಡಿ, ವಿದ್ಯಾಸಾಗರ್, ಪ್ರಿನ್ಸಿಪಲ್ ಮಂಜುಳಾ, ವ್ಯವಸ್ಥಾಪಕರಾದ ನಾಗೇಂದ್ರ ಮತ್ತಿತರರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ