ತುಮಕೂರು: ರಾಜ್ಯದಲ್ಲಿನ ಪ್ರಸ್ತುತ ವಿದ್ಯಮಾನಗಳು ಹಾಗೂ ಜನರು ಅನುಭವಿಸುತ್ತಿರುವ ಕಷ್ಟಗಳ ಕುರಿತಾಗಿ ಲೋಕ್ ಶಕ್ತಿ ಪಾರ್ಟಿ ವತಿಯಿಂದ ಇಂದು ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.
ಲೋಕ್ ಶಕ್ತಿ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗನಾಥ್ ಆರ್.ಎಸ್. ಮಾತನಾಡುತ್ತಾ, ಪ್ರಸ್ತುತ ರಾಜಕಾರಣ ಎಂಬುದು ತುಘಲಕ್ ದರ್ಬಾರ್ ರೀತಿ ಆಗಿದೆ. ರಾಜ್ಯ ಸರ್ಕಾರ ಉಚಿತ ಭಾಗ್ಯಗಳನ್ನು (5 ಗ್ಯಾರಂಟಿಗಳನ್ನು) ನೀಡಿ ರಾಜ್ಯದ ಅಭಿವೃದ್ಧಿಯನ್ನೇ ಮರೆತು ಬಿಟ್ಟಿದೆ. ಬೇಸಿಗೆ ಕಾಲ ಬರುವ ಮುಂಚಿತವಾಗಿಯೇ ಕುಡಿಯುವ ನೀರಿಗೆ ಹಾಹಾಕಾರ ಪ್ರಾರಂಭವಾಗಿದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ, ಜೊತೆಗೆ ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಗಳಿಂದ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ, ಇದ್ಯಾವುದರ ಬಗ್ಗೆ ಚಕಾರ ಎತ್ತದೇ ರಾಜ್ಯಸರ್ಕಾರ ಮಾತ್ರ ಮೌನ ವಹಿಸಿದೆ ಎಂದು ಆರೋಪಿಸಿದರು.
ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ, ರಾಜ್ಯ ಹೆದ್ದಾರಿ ಜಿಲ್ಲಾ ಹೆದ್ದಾರಿಗಳು ಸಂಪೂರ್ಣ ಹಾಳಾಗಿವೆ ಯಾವುದೇ ಅಭಿವೃದ್ಧಿ ಕೆಲಸ ಕಾಮಗಾರಿಗಳಿಗೆ ಹಣ ನೀಡುವ ಸ್ಥಿತಿಯಲ್ಲಿ ಇಲ್ಲ. ಈ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ತನಗೆತಾನೇ ನಿರ್ಮಿಸಿಕೊಂಡಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಬೇಕು. ರಾಜ್ಯದಲ್ಲಿ ಆಡಳಿತ ನಡೆಸುವ ಪಕ್ಷದಲ್ಲೂ ಭಿನ್ನಮತ, ಅದೇ ರೀತಿ ವಿರೋಧ ಪಕ್ಷದಲ್ಲೂ ಭಿನ್ನಮತ, ವಿರೋಧ ಪಕ್ಷ ಸರ್ಕಾರವನ್ನು ಕಿವಿ ಹಿಂಡುವ ಕೆಲಸ ಮಾಡುವ ಬದಲು ಮಂಡಿಯೂರಿ ಕುಳಿತಿದೆ. ಇವರಿಬ್ಬರೂ, ಒಬ್ಬರ ಮೇಲೆ ಮತ್ತೊಬ್ಬರು ಟೀಕೆ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ರೈತರ ಬಗ್ಗೆ, ಕೂಲಿ ಕಾರ್ಮಿಕರ ಬಗ್ಗೆ ಬಡವರ ಬಗ್ಗೆ ಇವರ್ಯಾರಿಗೂ ಕಾಳಜಿ ಇಲ್ಲ. ಬರೀ ಕುರ್ಚಿಗಾಗಿ ಕಾಳಗ ನಡೆಯುತ್ತಿದೆ ಎಂದು ಖಂಡಿಸಿದರು.
ಇದೇ ಸಂದರ್ಭದಲ್ಲಿರಾಜ್ಯ ಮಹಾಪ್ರಧಾನ ಕಾರ್ಯದರ್ಶಿಯಾದ ಬಸವರಾಜಪ್ಪ ನೀರ್ಥ ಡಿ ಮಾತನಾಡುತ್ತಾ, ಕೇಂದ್ರ ಸರ್ಕಾರವು ಸಹ ನಮ್ಮ ರಾಜ್ಯದ ಬಗ್ಗೆ ಮಲತಾಯಿಧೋರಣೆ ತಳೆದಿದೆ, ನಮ್ಮ ರಾಜ್ಯ ಸರ್ಕಾರದ ತೆರಿಗೆ ಹಣವನ್ನು ಸಂಗ್ರಹಿಸಿ, ನಮಗೆ ಸರಿಯಾದ ಅನುಪಾತದಲ್ಲಿಅನುದಾನವನ್ನು ಕೊಡುತ್ತಿಲ್ಲ. ಮುಖ್ಯವಾಗಿ ತುಮಕೂರು ದಾವಣಗೆರೆ ನೇರ ರೈಲ್ವೆ ಮಾರ್ಗದ ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿದೆ.
ಸದರಿ ಮಾರ್ಗವು ಎಕಮುಖ ಸಂಚಾರ ರೈಲ್ವೆ ಮಾರ್ಗ ಮಾಡುತ್ತಿದ್ದು, ಇದರ ಬದಲುಜೋಡಿ ಮಾರ್ಗ ಮಾಡಬೇಕು ಎಂದು ಈ ಮೂಲಕ ಕೇಂದ್ರ ಸರ್ಕಾರಕ್ಕೆ ಆಗ್ರಪಡಿಸುತ್ತೇವೆ ಎಂದರು.
ಜೋಡಿ ಮಾರ್ಗಕ್ಕೆ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು ಜೋಡಿಮಾರ್ಗ ಮಾಡಿದರೆ ಸರ್ಕಾರಕ್ಕೆ ಹಣ ಕಡಿಮೆಯಾಗುತ್ತದೆ ಅದು ಬಿಟ್ಟು ಈಗ ಏಕ ಮುಖ ಮಾರ್ಗ ಮಾಡಿ, ಮುಂದೆ ಮತ್ತೆ ರೈತರಿಂದ ಜಮೀನು ಸ್ವಾಧೀನ ಮಾಡಿಕೊಳ್ಳಬೇಕಾದರೆ, ಅದರ ಹಣದುಪ್ಪಟ್ಟುಆಗುತ್ತದೆ. ಆದ್ದರಿಂದ, ಜೋಡಿ ಮಾರ್ಗಕ್ಕೆ, ಬೇಕಾದ ಜಮೀನನ್ನು ಸ್ವಾಧೀನ ಪಡಿಸಿಕೊಂಡು, ಜೋಡಿ ಮಾರ್ಗ ಮಾಡಬೇಕು ಎಂದರು.
ನಮ್ಮದು ಒಂದು ರಾಜಕೀಯ ಪಕ್ಷವಾಗಿದ್ದು, ತುಮಕೂರುಜಿಲ್ಲಾಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕ ಮಾಡಿದ್ದು, ನೇಮಕಾತಿ ಪಟ್ಟಿ ಕೆಳಕಂಡಂತೆ ಇರುತ್ತದೆ. ನಮ್ಮ ಪಕ್ಷವು, ಮುಂದಿನ ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಹಾಕುತ್ತೇವೆ. ಸರ್ಕಾರ ಮೊಂಡುತನ ಬಿಟ್ಟು ಶೀಘ್ರವೇ ಚುನಾವಣೆ ನಡೆಸಬೇಕು, ಚುನಾವಣೆಗೆ ನಾವು ಸಿದ್ದರಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ವಿವಿಧ ಪದಾಧಿಕಾರಿಗಳನ್ನು ನೇಮಿಸಿಕೊಂಡು ಅವರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಚಿತ್ರದಲ್ಲಿ ಲೋಕ್ ಶಕ್ತಿ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗನಾಥ್ ಆರ್.ಎಸ್., ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಬಸವರಾಜಪ್ಪ ನೀರ್ಥ ಡಿ, ತುಮಕೂರುಜಿಲ್ಲಾಧ್ಯಕ್ಷರಂಗನಾಥ ಟಿ., ಪುಷ್ಪಾಂತ, ಶಿವರಾಜ್, ಕಿರಣ್ ಕುಮಾರ್ ಡಿ.ಆರ್. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx