nammatumakuru

    Subscribe to Updates

    Get the latest creative news from FooBar about art, design and business.

    What's Hot

    ಟೈಯರ್ ಸ್ಫೋಟಗೊಂಡು ಮನೆಗೆ ನುಗ್ಗಿದ ಬಸ್: 10 ಕ್ಕೂ ಅಧಿಕ ಮಂದಿಗೆ ಗಾಯ

    June 29, 2025

    ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಬರ್ಬರ ಹತ್ಯೆ: ಪ್ರಿಯಕರನ ಜೊತೆ ಸೇರಿ ಪತ್ನಿಯಿಂದಲೇ ಕೃತ್ಯ

    June 29, 2025

    88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್‌ ಆಯ್ಕೆ

    June 29, 2025
    Facebook Twitter Instagram
    ಟ್ರೆಂಡಿಂಗ್
    • ಟೈಯರ್ ಸ್ಫೋಟಗೊಂಡು ಮನೆಗೆ ನುಗ್ಗಿದ ಬಸ್: 10 ಕ್ಕೂ ಅಧಿಕ ಮಂದಿಗೆ ಗಾಯ
    • ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಬರ್ಬರ ಹತ್ಯೆ: ಪ್ರಿಯಕರನ ಜೊತೆ ಸೇರಿ ಪತ್ನಿಯಿಂದಲೇ ಕೃತ್ಯ
    • 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್‌ ಆಯ್ಕೆ
    • ಶಿಕ್ಷಣದ ಮಹತ್ವ, ಗುರುವಿನ ಶ್ರೇಷ್ಠತೆಯನ್ನು ತಿಳಿಸುತ್ತವೆ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸೋಮಣ್ಣ ಅಭಿಪ್ರಾಯ
    • ಕಾನೂನು ಬಾಹಿರ ಚಟುವಟಿಕೆ ಗಮನಕ್ಕೆ ಬಂದ್ರೆ ಗಮನಕ್ಕೆ ತನ್ನಿ: ಪತ್ರಕರ್ತರಿಗೆ ವೃತ ನಿರೀಕ್ಷಕ ಪ್ರಸನ್ನ ಕುಮಾರ್ ಮನವಿ
    • ತುರ್ತು ಪರಿಸ್ಥಿತಿಗಿಂತ ಕೆಟ್ಟ ಪರಿಸ್ಥಿತಿಯಲ್ಲಿ ಇವತ್ತು ದೇಶವಿದೆ: ಸಚಿವ ಸಂತೋಷ್ ಲಾಡ್
    • ಕೊಳೆತು ನಾರುತ್ತಿದ್ದ ನಾಯಿಯ ಜೊತೆಗೆ ಮಹಿಳೆ ವಾಸ:  ಪ್ಲಾಟ್ ನೊಳಗೆ ಹೋದ ಪೊಲೀಸರಿಗೆ ಶಾಕ್
    • ಪತ್ರಕರ್ತನ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆ ಮೆರೆದ ಶಾಸಕ ಸಿ.ಬಿ.ಸುರೇಶ ಬಾಬು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊರಟಗೆರೆಯಲ್ಲಿ ಮಲ ಪದ್ದತಿ ಇನ್ನೂ ಜೀವಂತ: ದಲಿತ ಬಾಲಕನಿಂದ ಮಲಸ್ವಚ್ಚತೆ |  ನಿಯಂತ್ರಕ ಸೇರಿ 4 ಜನರ ವಿರುದ್ದ ಪ್ರಕರಣ
    ಕೊರಟಗೆರೆ November 10, 2024

    ಕೊರಟಗೆರೆಯಲ್ಲಿ ಮಲ ಪದ್ದತಿ ಇನ್ನೂ ಜೀವಂತ: ದಲಿತ ಬಾಲಕನಿಂದ ಮಲಸ್ವಚ್ಚತೆ |  ನಿಯಂತ್ರಕ ಸೇರಿ 4 ಜನರ ವಿರುದ್ದ ಪ್ರಕರಣ

    By adminNovember 10, 2024No Comments2 Mins Read
    koratagere

    ವರದಿ : ಮಂಜುಸ್ವಾಮಿ ಎಂ ಎನ್ ಕೊರಟಗೆರೆ

    ಕೊರಟಗೆರೆ : ಶೌಚಗುಂಡಿ ತುಂಬಿಹರಿದು ಶೇಖರಣೆಯಾಗಿದ್ದ ಕೊಳಚೆಯುಕ್ತ ಮಲದ ನೀರನ್ನು 14 ವರ್ಷದ ದಲಿತ ಬಾಲಕ ಮತ್ತು ದಲಿತ ವ್ಯಕ್ತಿಯಿಂದ ಸ್ವಚ್ಚಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ(ಏಜೆನ್ಸಿ) ಮತ್ತು ಸಂಚಾರ ನಿಯಂತ್ರಕ ಸೇರಿ 4 ಜನರ ಮೇಲೆ ತಹಶೀಲ್ದಾರ್ ಮಂಜುನಾಥ್ ನೀಡಿದ ದೂರಿನ ಅನ್ವಯ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.


    Provided by

    ಕೊರಟಗೆರೆ ಪಟ್ಟಣದ ಸರಕಾರಿ ಬಸ್‍ ನಿಲ್ದಾಣದ ಆವರಣದಲ್ಲಿನ ಹಳೆಯ ಶೌಚಗುಂಡಿಯ ಸಮೀಪ ದುರ್ಘಟನೆ ಜರುಗಿದೆ. ಸರಕಾರಿ ಬಸ್ ನಿಲ್ದಾಣದ ಆವರಣದಲ್ಲಿ ಮೈಮೇಲೆ ಬಟ್ಟೆ ಮತ್ತು ಕೈಗಳಿಗೆ ಕೈಚೀಲ ಹಾಕದೇ ದಲಿತ ಸಮುದಾಯದ ಇಬ್ಬರು ಶೌಚಮಿಶ್ರಿತ ಕಲುಷಿತ ಕೊಳಚೆ ನೀರು ಮತ್ತು ಮಣ್ಣು ಸ್ವಚ್ಚ ಮಾಡುತ್ತಿರುವ ಬಗ್ಗೆ ಮಾಧ್ಯಮ ವರದಿ ಮಾಡಿತ್ತು.

    ಶೌಚದ ಘಟನೆಯ ಹಿನ್ನಲೆ ಏನು..?

    2024ರ ನ.6ನೇ ಬುಧವಾರ 12ಗಂಟೆ ವೇಳೆ ಪರಿಶಿಷ್ಟ ಜಾತಿಗೆ ಸೇರಿದ ಬಾಲಕ ಮತ್ತು ವ್ಯಕ್ತಿಯೊರ್ವ ಕೊರಟಗೆರೆಯ ಸರಕಾರಿ ಬಸ್‍ ನಿಲ್ದಾಣದ ಶೌಚಗುಂಡಿಯ ಸಮೀಪ ಬರೀಗೈಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಾಧ್ಯಮದವ್ರು ಪ್ರಶ್ನಿಸಿದಾಗ ಘಟನೆಯು ಬೆಳಕಿಗೆ ಬಂದಿದೆ.  ನಂತರ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಸುದ್ದಿಯಸತ್ಯತೆ ಬಯಲಾಗಿದೆ.

    ಬಾಲಕನ ಮೇಲೆ ಮಾನಸಿಕ ಅಸ್ವಸ್ಥನ ಪಟ್ಟ:

    ಕೆ ಎಸ್ ಆರ್ ಟಿ ಸಿ ನಿಗಮ ವ್ಯಾಪ್ತಿಯ ಶೌಚದ ಸ್ವಚ್ಚತಾ ಕಾರ್ಯವನ್ನು ಅಧಿಕೃತ ಟೆಂಡರ್‍ ಗಳ ಮೂಲಕ ಗುತ್ತಿಗೆದಾರನ ನೇಮಕ ಮಾಡಲಾಗಿದೆ. ಅದರಂತೆ ಶ್ರೀಲಕ್ಷ್ಮೀ ಎಂಟರ್ ಪ್ರೈಸಸ್ ವತಿಯಿಂದ ಸ್ವಚ್ಚತೆ ಕಾರ್ಯ ನಡೆದಿದೆ. ವ್ಯಕ್ತಿಯ ಮೂಲಕ ಸ್ವಚ್ಚತೆ ಮಾಡಲು ಅವಕಾಶವಿಲ್ಲ. ವಿಡಿಯೊದಲ್ಲಿ ಕಂಡು ಬಂದ ಬಾಲಕ ಮಾನಸಿಕ ಅಸ್ವಸ್ತ ಇರುವಂತೆ ಕಂಡು ಬರುತ್ತದೆ ಎಂದು ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಪತ್ರದ ಮೂಲಕವೇ ಮಾಧ್ಯಮಕ್ಕೆ ಸ್ಪಷ್ಟಿಕರಿಸಿದ್ದಾರೆ. ಈ ಮೂಲಕ ಬಾಲಕನಿಗೆ ಮಾಸಿಕ ಅಸ್ವಸ್ಥನ ಪಟ್ಟ ಕಟ್ಟಲಾಗಿದೆ.

    ನೊಟೀಸ್‍ಗೆ ಕ್ಯಾರೇ ಎನ್ನದ ಅಧಿಕಾರಿ:

    ಶೌಚಾಲಯ ಮತ್ತು ಹೊಟೇಲ್‍ ನ ಕಲುಷಿತ ನೀರನ್ನು ಚರಂಡಿಗೆ ಬೀಡದಂತೆ ಪಪಂಯಿಂದ ಕೆಎಸ್‍ ಆರ್ ಟಿ ಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ 2023 ಮತ್ತು 2024ರಲ್ಲಿ 3 ಬಾರಿ ನೊಟೀಸ್ ಜಾರಿಯಾಗಿದೆ. ಹೊಟೇಲ್‍ ನ ಗಲೀಜು ನೀರು ಮತ್ತು ಶೌಚಾಲಯ ಫಿಟ್‍ ನ ಮಲದ ನೀರನ್ನು ನೇರವಾಗಿ ಚರಂಡಿಗೆ ಸಂಪರ್ಕ ನೀಡಿದ ಪರಿಣಾಮ ರಸ್ತೆಯಲ್ಲಿ ದುರ್ವಾಸನೆ ಹೆಚ್ಚಾಗಿದೆ ಎಂದು ಮನವಿ ಮಾಡಿದ್ರು ಅಧಿಕಾರಿವರ್ಗ ಕ್ಯಾರೇ ಎಂದಿಲ್ಲ.

    ಶೌಚಗುಂಡಿ ತುಂಬಿ ನೀರು ದುರ್ವಾಸನೆ:

    ಸರಕಾರಿ ಬಸ್‍ ನಿಲ್ದಾಣದ ಹಳೆಯ ಶೌಚಗುಂಡಿ ತುಂಬಿ 3 ವರ್ಷ ಕಳೆದ್ರು ಸ್ವಚ್ಚತೆ ಮಾಡಿಲ್ಲ. ಶೌಚ ಗುಂಡಿಯಿಂದ ಕೊಳಚೆಯುಕ್ತ ಮಲಿನವಾದ ನೀರು ಪ್ರತಿನಿತ್ಯವು ಹೊರಗಡೆ ಬಂದು ದುರ್ವಾಸನೆ ಬೀರುತ್ತಿದೆ. ಕೆಎಸ್‍ ಆರ್ ಟಿ ಸಿ ಅಧಿಕಾರಿ ವರ್ಗ ಅಥವಾ ಗುತ್ತಿಗೆದಾರನ ದಿವ್ಯ ನಿರ್ಲಕ್ಷದಿಂದ ಪ್ರಯಾಣಿಕರಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

    4 ಜನರ ಮೇಲೆ ಪ್ರಕರಣ ದಾಖಲು:

    ಕೊರಟಗೆರೆಯ ಸಾರಿಗೆ ಸಂಚಾರ ನಿಯಂತ್ರಕ, ಮಂಡ್ಯದ ಗುತ್ತಿಗೆದಾರ ಶ್ರೀನಿಮಿಷಾಂಬ ಎಂಟರ್ ಪ್ರೈಸಸ್, ತುಮಕೂರಿನ ನಿತೀಶ್ ಮತ್ತು ಕುಮಾರ್ ಎಂಬಾತನ ಮೇಲೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ತಹಶೀಲ್ದಾರ್ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ.

     

    ಕಂದಾಯ, ಪೊಲೀಸ್, ಪಪಂ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಜಂಟಿಯಾಗಿ ಶೌಚಗುಂಡಿಯ ಸ್ಥಳ ಪರಿಶೀಲನೆ ನಡೆದಿದೆ. ಬಸ್ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಿಂದ ಇನ್ನಷ್ಟು ಮಾಹಿತಿ ಪಡೆಯುತ್ತೇವೆ. ಹಳೆಯ ಶೌಚಗುಂಡಿ ತುಂಬಿ ದುರ್ವಾಸನೆ ಬೀರುತ್ತಿದೆ. ಕೆಎಸ್‍ಆರ್‍ಟಿಸಿ ಸಿಬ್ಬಂದಿ ಮತ್ತು ಏಜೆಸ್ಸಿಯ ವಿರುದ್ದ ದೂರು ದಾಖಲಿಸಲು ಸೂಚಿಸಲಾಗಿದೆ.

    –ಕೃಷ್ಣಪ್ಪ, ಜಂಟಿ ನಿರ್ದೇಶಕ. ಸಮಾಜ ಕಲ್ಯಾಣ ಇಲಾಖೆ. ತುಮಕೂರು


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    30 ಲಕ್ಷ ವೆಚ್ಚದ ಡಯಾಲಿಸಿಸ್ ಯಂತ್ರ ಲೋಕಾರ್ಪಣೆಗೊಳಿಸಿದ ಜಪಾನಂದ ಸ್ವಾಮೀಜಿ

    June 28, 2025

    ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ಜಾಗೃತರಾಗಿರಬೇಕು: ತಹಶೀಲ್ದಾರ್ ಮಂಜುನಾಥ್ ಕೆ.

    June 27, 2025

    ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಇದು ಕಾರ್ಯಕರ್ತರ ಪಕ್ಷ: ನಿಖಿಲ್ ಕುಮಾರಸ್ವಾಮಿ

    June 19, 2025
    Our Picks

    ಇಸ್ರೇಲ್ ಪರ ಬೇಹುಗಾರಿಕೆ: ಮೂವರನ್ನು ಗಲ್ಲಿಗೇರಿಸಿದ ಇರಾನ್

    June 25, 2025

    ಕೆಲವರಿಗೆ ಮೋದಿಯೇ ಮೊದಲು: ಶಶಿ ತರೂರ್ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಟೀಕೆ

    June 25, 2025

    ಏಳು ಪ್ರಮುಖ ಮಸೂದೆಗಳಿಗೆ ಅನುಮೋದನೆ ನೀಡಲು ರಾಷ್ಟ್ರಪತಿಗೆ ಸಿಎಂ ಸಿದ್ದರಾಮಯ್ಯ ಮನವಿ

    June 24, 2025

    24 ಬಾಲಕಿಯರಿಗೆ ಲೈಂಗಿಕ ಕಿರುಕುಳ: ಶಿಕ್ಷಕನ ಬಂಧನ

    June 24, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಟೈಯರ್ ಸ್ಫೋಟಗೊಂಡು ಮನೆಗೆ ನುಗ್ಗಿದ ಬಸ್: 10 ಕ್ಕೂ ಅಧಿಕ ಮಂದಿಗೆ ಗಾಯ

    June 29, 2025

    ತುಮಕೂರು :  ಟೈಯರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿದ ಕೆ ಎಸ್ ಆರ್ ಟಿ ಸಿ ಬಸ್ ರಸ್ತೆ ಪಕ್ಕದ…

    ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಬರ್ಬರ ಹತ್ಯೆ: ಪ್ರಿಯಕರನ ಜೊತೆ ಸೇರಿ ಪತ್ನಿಯಿಂದಲೇ ಕೃತ್ಯ

    June 29, 2025

    88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್‌ ಆಯ್ಕೆ

    June 29, 2025

    ಶಿಕ್ಷಣದ ಮಹತ್ವ, ಗುರುವಿನ ಶ್ರೇಷ್ಠತೆಯನ್ನು ತಿಳಿಸುತ್ತವೆ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸೋಮಣ್ಣ ಅಭಿಪ್ರಾಯ

    June 29, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.