- ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ಕೊರಟಗೆರೆ: ಲೋಕಸಭಾ ಚುನಾವಣೆಗೆ ನಾನು ನಿಲ್ಲೋದಿಲ್ಲ ಅಂತಾ ಹೇಳ್ದೆ.. ಆದರೆ ಕಾಂಗ್ರೆಸ್ ಪಕ್ಷದವ್ರು ನನಗೇ ತುಮಕೂರು ಜಿಲ್ಲೆಗೆ ಕರೆತಂದು ಸೋಲಿಸಿ ಅವಮಾನ ಮಾಡಿದ್ರು.. ನನ್ನನ್ನು ಸೋಲಿಸಿ ಅವಮಾನ ಮಾಡಿದ ನೋವು ಇನ್ನೂ ಕಾಡ್ತಿದೆ.. ನಮ್ಮೆಲ್ಲರ ಆತ್ಮೀಯ ಸುಧಾಕರಲಾಲ್ ಗೆಲ್ಲಿಸಿ, ನನ್ನ ಕಣ್ಣೀರು ಒರೆಸಬೇಕಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಾರ್ಯಕರ್ತರಿಗೆ ಕರೆ ನೀಡಿದರು.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕೇಂದ್ರದ ಗ್ರಾಮದಲ್ಲಿ ಜೆಡಿಎಸ್ ಪಕ್ಷದಿಂದ ಸೋಮವಾರ ಏರ್ಪಡಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ನಾನು 1994ರಲ್ಲಿ ಸಿಎಂ ಆಗಿದ್ದಾಗ 11ಕ್ಷೇತ್ರದಲ್ಲಿ 9 ಕ್ಷೇತ್ರ ಗೆಲ್ಲಿಸಿದ ತುಮಕೂರು ಜಿಲ್ಲೆಯ ಪುಣ್ಯಾತ್ಮರು ನೀವು. ಕಾಂಗ್ರೆಸ್ ನಾಯಕರು ನನಗೇ ಅವಮಾನ ಮಾಡಿದ ನೋವು ಇನ್ನೂ ನನ್ನನ್ನು ಕಾಡ್ತಿದೆ. ಸುಧಾಕರಲಾಲ್ ಬಡಕುಟುಂಬದ ಓಬ್ಬ ಸಾಮಾನ್ಯ ಜೆಡಿಎಸ್ ಕಾರ್ಯಕರ್ತ. 25 ವರ್ಷದಿಂದ ಕೊರಟಗೆರೆ ಕ್ಷೇತ್ರದಲ್ಲಿ ಬಡಜನರ ಸೇವೆ ಮಾಡ್ತಿದ್ದಾನೆ. ನೀವು ಸಾಮಾನ್ಯ ಕಾರ್ಯಕರ್ತನನ್ನ ಬೆಳೆಸಿದ್ದಿರಾ, 2023ಕ್ಕೆ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿ. ಕುಮಾರಸ್ವಾಮಿ ಸರಕಾರ ಸುಧಾಕರಲಾಲ್ ಗೆ ವಿಶೇಷ ಸ್ಥಾನಮಾನ ನೀಡ್ತಾರೇ ಎಂದು ಭರವಸೆ ನೀಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ, ಜೆಡಿಎಸ್ ಪಕ್ಷ ಮುಸ್ಲಿಂ ಸಮಾಜಕ್ಕೆ ಸಾಕಷ್ಟು ಅನುಕೂಲ ಕಲ್ಪಿಸಿದೆ. ಯಾವುದೇ ಪಕ್ಷ ರಾಜ್ಯಾಧ್ಯಕ್ಷನ ಪಟ್ಟ ನೀಡಿಲ್ಲ ಆದರೆ ಜೆಡಿಎಸ್ ನನಗೇ ನೀಡಿದೆ. ಮುಸ್ಲಿಂ ಸಮಾಜ ಜೆಡಿಎಸ್ ಪಕ್ಷದ ಪರವಾಗಿ ಇರಬೇಕಿದೆ. ದೇವೇಗೌಡರು ಮತ್ತು ಕುಮಾರಸ್ವಾಮಿಗೆ ರೈತರ ಚಿಂತೆ ಆದರೇ ಪರಮೇಶ್ವರ್ಗೆ ಜೀರೋ ಟ್ರಾಫಿಕ್ ಚಿಂತೆ. ಮುಸ್ಲಿಂ ಮೀಸಲಾತಿ ರದ್ದತಿಯ ಬಗ್ಗೆ ಪರಮೇಶ್ವರ್ ಮಾತನಾಡಿದ್ರಾ ನೀವೇ ಹೇಳಿ. ಚುನಾವಣೆ ಭಾಷಣ ಮತ್ತು 1ಸಾವಿರ ಹಣಕ್ಕೆ ನಾವು ಯಾಮಾರಬಾದ್ರು ಎಂದು ಮನವಿ ಮಾಡಿದರು.
ಜೆಡಿಎಸ್ ಹಿಂದುಳಿದ ವರ್ಗಗಳ ಕಾರ್ಯಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ, ನಿಮ್ಮ ಮನೆ ಬಾಗಿಲಿಗೆ ಮತಯಾಚನೆಗೆ ಬರುವ ಜನಸೇವಕ ಮತ್ತೇ ನಿಮ್ಮ ಬಳಿಯ ಇರ್ತಾರೇ. ಚುನಾವಣೆ ವೇಳೆಯಲ್ಲೇ ಕೊರಟಗೆರೆ–ತುಮಕೂರು ನಗರಕ್ಕೆ ಮುಖಂಡರನ್ನ ಕರೆಸಿಕೊಂಡು ರಾಜಕೀಯ ಮಾಡುವ ಕಾಂಗ್ರೆಸ್ ನಾಯಕ ಮುಂದೆ ನಿಮ್ಮ ಕೈಗೆ ಸಿಗ್ತಾರೆ. 2023ಕ್ಕೆ ಅಭಿವೃದ್ದಿಯ ಚಿಂತನೆಯುಳ್ಳ ಜನನಾಯಕ ಸುಧಾಕರಲಾಲ್ ಗೆಲುವು ಖಚಿತ ಎಂದು ತಿಳಿಸಿದರು.
ಸಮಾವೇಶದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರೋಶನ್ ಬೇಗ್, ಎಸ್ ಸಿ ಘಟಕದ ಕಾರ್ಯಾಧ್ಯಕ್ಷ ಶ್ರೀರಾಮ್, ಜಿಲ್ಲಾಧ್ಯಕ್ಷ ಅಂಜಿನಪ್ಪ, ಮಹಿಳಾಧ್ಯಕ್ಷೆ ಕುಸುಮಾ, ಹಿರಿಯ ಮುಖಂಡ ಅಂದಾನಪ್ಪ, ಕೊರಟಗೆರೆ ಕಾರ್ಯಧ್ಯಕ್ಷ ನರಸಿಂಹರಾಜು, ಕಾರ್ಯದರ್ಶಿ ಲಕ್ಷ್ಮಣ್, ವಕ್ತಾರ ಲಕ್ಷ್ಮೀಶ್, ಉಪಾಧ್ಯಕ್ಷ ಮಂಜುನಾಥ, ಮುಖಂಡರಾದ ಸಿದ್ದಮಲ್ಲಪ್ಪ, ಪ್ರಕಾಶ್, ಪಾರುಕ್, ಲಕ್ಷ್ಮೀನರಸಪ್ಪ, ವೆಂಕಟೇಶ್, ರಮೇಶ್, ಲಕ್ಷ್ಮೀಕಾಂತ, ಸಂತೋಷಗೌಡ, ಕಿಶೋರ್, ನಯಾಜ್, ರವಿಕುಮಾರ್, ಮರುಡಪ್ಪ, ರೇಣುಕಾ ಸೇರಿದಂತೆ ಇತರರು ಇದ್ದರು.
ಪರಮೇಶ್ವರ್ ಮಾಜಿ ಪ್ರಧಾನಿ ದೇವೇಗೌಡರನ್ನ ಕರೆದುಕೊಂಡು ಬಂದು ಸೋಲಿಸಿದ್ರು. ಅವರಿಗೆ ದೇವರು ಒಳ್ಳೆದು ಮಾಡ್ತಾನಾ. ತುಮಕೂರು ನಗರಕ್ಕೆ ಕಾಂಗ್ರೆಸ್ ಪಕ್ಷದಿಂದ ವೀಕ್ ಅಭ್ಯರ್ಥಿ ಹಾಕಿ ಬಿಜೆಪಿ ಜೊತೆ ಟೈಹಪ್ ಮಾಡಿಕೊಂಡ್ರು. ಕೊರಟಗೆರೆ ಕ್ಷೇತ್ರಕ್ಕೆ ಜೀರೋ ಟ್ರಾಫಿಕ್ ಬೇಕಾ ಅಥವಾ ನಿಮ್ಮ ಮನೆಮಗ ಸುಧಾಕರಲಾಲ್ ಬೇಕಾ ಯೋಚಿಸಿ ಮತನೀಡಿ. ಮುಸ್ಲಿಂ ಸಮಾಜಕ್ಕೆ ಶೇ.4ರಷ್ಟು ಮೀಸಲಾತಿ ಮತ್ತು ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಿದವ್ರು ದೇವೇಗೌಡರು.
-ಸಿಎಂ ಇಬ್ರಾಹಿಂ, ಜೆಡಿಎಸ್ ರಾಜ್ಯಾಧ್ಯಕ್ಷ.
25 ವರ್ಷ ಕೊರಟಗೆರೆ ಕ್ಷೇತ್ರದಲ್ಲಿ ಜನಸೇವೆ ಮಾಡಿದ್ದೇನೆ. ನೀರಾವರಿ, ಸಾಗುವಳಿ ಚೀಟಿ ಮತ್ತು ಗಂಗಾಕಲ್ಯಾಣಕೆಕ ಆಧ್ಯತೆ ಹಾಗೂ 35 ಸಾವಿರಕ್ಕೂ ಅಧಿಕ ಜನರಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಿದ್ದೇನೆ. ಇನ್ನೂ 15 ದಿನ ನನ್ನ ಜೊತೆ ಇರಿ ಮುಂದಿನ 5 ವರ್ಷ ನಿಮ್ಮ ಮನೆಮಗನಂತೆ ಕೆಲಸ ಮಾಡ್ತೀನಿ. ನನ್ನ ಹತ್ತಿರ ಹಣ ಬಲವಿಲ್ಲ ಆದರೇ ಜನಬಲ ಇದೆ. ಜೆಡಿಎಸ್ ಕಾರ್ಯಕರ್ತರೇ ನನ್ನ ಗೆಲುವಿನ ಶಕ್ತಿ ಆಗ್ತಾರೇ.
-ಪಿ.ಆರ್.ಸುಧಾಕರಲಾಲ್, ಮಾಜಿ ಶಾಸಕ, ಕೊರಟಗೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy