nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೀದಿ ನಾಯಿಗಳ ಮಾಹಿತಿ ನೀಡಲು ಸೂಚನೆ

    December 7, 2025

    ರಾಗಿ ಖರೀದಿ: ನೋಂದಣಿಗೆ ಡಿ.15 ಕೊನೆಯ ದಿನ

    December 7, 2025

    ತಾಯಿ ಚಿಕ್ಕದೇವಮ್ಮನ ಬೆಟ್ಟ–ಇಟ್ನ ಗ್ರಾಮ ಸಂಪರ್ಕ ರಸ್ತೆ ಅಭಿವೃದ್ಧಿಗೆ ಸಹಕಾರ: ಶಾಸಕ ಅನಿಲ್ ಚಿಕ್ಕಮಾದು

    December 7, 2025
    Facebook Twitter Instagram
    ಟ್ರೆಂಡಿಂಗ್
    • ಬೀದಿ ನಾಯಿಗಳ ಮಾಹಿತಿ ನೀಡಲು ಸೂಚನೆ
    • ರಾಗಿ ಖರೀದಿ: ನೋಂದಣಿಗೆ ಡಿ.15 ಕೊನೆಯ ದಿನ
    • ತಾಯಿ ಚಿಕ್ಕದೇವಮ್ಮನ ಬೆಟ್ಟ–ಇಟ್ನ ಗ್ರಾಮ ಸಂಪರ್ಕ ರಸ್ತೆ ಅಭಿವೃದ್ಧಿಗೆ ಸಹಕಾರ: ಶಾಸಕ ಅನಿಲ್ ಚಿಕ್ಕಮಾದು
    • ಅರಸೀಕೆರೆಯ ವಿದ್ಯಾರ್ಥಿಗಳು ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
    • ಧರ್ಮದ ಹೆಸರಿನಲ್ಲಿ ಬುಡಕಟ್ಟು ಆಚರಣೆ, ಪದ್ಧತಿ, ದೈವಾರಾಧನೆ ನಶಿಸುತ್ತಿದೆ: ಸಿ.ಜಿ.ಲಕ್ಷ್ಮೀಪತಿ
    • ಡಿಕೆಶಿ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ: ಸಚಿವ ಕೆ.ಎನ್.ರಾಜಣ್ಣ
    • ವಿವಿಧ ಯೋಜನೆಯಡಿ ಮಹಿಳೆಯರಿಗೆ ಆರ್ಥಿಕ ನೆರವು: ಅರ್ಜಿ ಆಹ್ವಾನ
    • ಡಿಸೆಂಬರ್ 8ರಿಂದ ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಆಹಾರ ಅದಾಲತ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶರಣರು ಎಂದಿಗೂ ಪರರ ಆಶ್ರಯದಲ್ಲಿ ಬೇಡಿ ಬದುಕಿದವರಲ್ಲ: ರುದ್ರಮೂರ್ತಿ ಎಲೆರಾಂಪುರ
    ತುಮಕೂರು August 21, 2024

    ಶರಣರು ಎಂದಿಗೂ ಪರರ ಆಶ್ರಯದಲ್ಲಿ ಬೇಡಿ ಬದುಕಿದವರಲ್ಲ: ರುದ್ರಮೂರ್ತಿ ಎಲೆರಾಂಪುರ

    By adminAugust 21, 2024No Comments1 Min Read
    Rudramurthy Elerampura

    ತುಮಕೂರು: ಕನ್ನಡ ಸಾಹಿತ್ಯದಲ್ಲಿ ಬಸವಾದಿ ಶರಣ ಶರಣೆಯರು ಸ್ವತಂತ್ರ ಧೀರರು ಅಲ್ಲದೆ ಸ್ವತಂತ್ರ ವಿಚಾರವಾದಿಗಳಾಗಿದ್ದರು” ಎಂದು ಆಧುನಿಕ ವಚನಕಾರರಾದ ರುದ್ರಮೂರ್ತಿ ಎಲೆರಾಂಪುರರವರು ಅಭಿಪ್ರಾಯಪಟ್ಟರು.
    ಅವರು ತುಮಕೂರಿನ ಬಸವೇಶ್ವರ ವಿದ್ಯಾರ್ಥಿನಿಲಯದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯಂದು ತುಮಕೂರು ಜಿಲ್ಲಾ ಮತ್ತು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಸಹಕಾರದಲ್ಲಿ ಲಿಂ.ಸಿದ್ಧವೀರಮ್ಮ ನಂಜಣ್ಣ ಬಸವರಾಜಪ್ಪ ದತ್ತಿಯಲ್ಲಿ “ಶರಣರು ಸ್ವತಂತ್ರ ಧೀರರು” ಎಂಬ ವಿಷಯವಾಗಿ ಮಾತನಾಡುತ್ತಿದ್ದರು.

    ಶರಣರು ಎಂದಿಗೂ ಪರರ ಆಶ್ರಯದಲ್ಲಿ ಬೇಡಿ ಬದುಕಿದವರಲ್ಲ. ರಾಜರನ್ನ ಹೊಗಳಿ ಸಾಹಿತ್ಯ ರಚಿಸಲಿಲ್ಲ, ಸ್ವತಂತ್ರವಾಗಿ ಕಾಯಕ ನಂಬಿ ಬದುಕಿದ ವಿಚಾರವಂತರು ಎಂದರು.


    Provided by
    Provided by

    ಜೇಡರದಾಸಿಮಯ್ಯ ಅಲ್ಲದೆ ಅನೇಕ ಶರಣ ಶರಣೆಯರ ಹಲವು ವಚನಗಳ ದೃಷ್ಟಾಂತ ನೀಡಿ ವಿವರಿಸಿ, ತಮ್ಮ ಸ್ವರಚಿತ ವಚನಗಳನ್ನು ಹಾಡಿ ರಂಜಿಸಿದರು.

    ದತ್ತಿದಾನಿಗಳಾದ ಜಿ.ಎನ್.ಬಸವರಾಜಪ್ಪನವರು ಉದ್ಘಾಟಿಸಿ ಮಾತನಾಡುತ್ತಾ, ತಾವು ಬಾಲ್ಯದಲ್ಲಿ ಶಿಕ್ಷಣದಿಂದ ವಂಚಿತರಾದಾಗ ತಮ್ಮ ತಂದೆ ತಾಯಿಯವರ ಪೂರ್ಣ ಜವಾಬ್ದಾರಿಯಿಂದ ವಿದ್ಯಾವಂತರಾಗಿ ಇಂದು ಈ ಮಟ್ಟದಲ್ಲಿ ಬೆಳೆಯಲು ವಿದ್ಯೆಯೇ ಸರ್ವಸ್ವ ಎಂದರು. ಸಿದ್ಧಾರ್ಥ ಸಂಸ್ಥೆಯ ಡಿ.ಎಂ.ಗಂಗಾಧರಯ್ಯನವರ ಸಲಹೆ ಸಹಕಾರ ಸ್ಮರಿಸಿದರು. ಯುವ ಜನಾಂಗಕ್ಕೆ ಆದರ್ಶ ಬೇಕೆಂದರು.

    ಅಧ್ಯಕ್ಷತೆ ವಹಿಸಿದ್ದ ಎಂ.ಜಿ.ಸಿದ್ಧರಾಮಯ್ಯನವರು ಮಾತನಾಡಿ, ಇತ್ತೀಚೆಗೆ ಶಿಕ್ಷಣ ಇಲಾಖೆ ಪದವಿ ಪೂರ್ವ ಕಾಲೇಜುಗಳಲ್ಲಿ ವಿ.ವಿ.ಗಳಲ್ಲಿ, ಕಾಲೇಜುಗಳಲ್ಲಿ ಶರಣರ ವಿಚಾರಧಾರೆಗಳನ್ನು ಸಂಘ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕವಾಗಿ ಯುವಜನತೆಗೆ ಅರಿವು ಮೂಡಿಸಲು ಸಹಕಾರ ನೀಡುವುದರ ಬಗ್ಗೆ ತಿಳಿಸಿದರು. ಸರ್ಕಾರದ ನೂತನ ಆದೇಶವನ್ನು ಸಭೆಗೆ ತಿಳಿಸಿದರು.

    ನಿಲಯದ ಕಾರ್ಯದರ್ಶಿಗಳಾದ ಜಿ.ಮಲ್ಲಿಕಾರ್ಜುನಯ್ಯ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಬಿ.ರಾಜಶೇಖರಯ್ಯ ಪರಿಷತ್ತಿನ ಉದ್ದೇಶ ತಿಳಿಸಿದರು. ಬಸವೇಶ್ವರ ವಿದ್ಯಾರ್ಥಿನಿಲಯದ ವಿದ್ಯಾರ್ಥಿ ಶಿವರಾಜ ಪಾಟೀಲ್ ಬಸವಣ್ಣನವರ ವಚನಗಳ ಬಗ್ಗೆ ಅನಿಸಿಕೆ ನೀಡಿದರು.

    ಭವಾನಮ್ಮ ಗುರುಮಲ್ಲಪ್ಪ, ಹಂ.ಸಿ.ಕುಮಾರಸ್ವಾಮಿ, ಮಿಮಿಕ್ರಿ ಈಶ್ವರಯ್ಯ, ವಚನ ಗಾಯನ ಮಾಡಿದರು. ವಿಶ್ವನಾಥಸ್ವಾಮಿ ವಂದಿಸಿದರು. ಸಿಹಿ ವಿತರಣೆ ಆಯ್ತು. ರಾಜಶೇಖರಯ್ಯ ಈಚನೂರು ನಿರೂಪಿಸಿದರು. ವಚನ ಮಂಗಳದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ರಾಗಿ ಖರೀದಿ: ನೋಂದಣಿಗೆ ಡಿ.15 ಕೊನೆಯ ದಿನ

    December 7, 2025

    ಧರ್ಮದ ಹೆಸರಿನಲ್ಲಿ ಬುಡಕಟ್ಟು ಆಚರಣೆ, ಪದ್ಧತಿ, ದೈವಾರಾಧನೆ ನಶಿಸುತ್ತಿದೆ: ಸಿ.ಜಿ.ಲಕ್ಷ್ಮೀಪತಿ

    December 7, 2025

    ಡಿಕೆಶಿ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ: ಸಚಿವ ಕೆ.ಎನ್.ರಾಜಣ್ಣ

    December 6, 2025

    Comments are closed.

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಬೀದಿ ನಾಯಿಗಳ ಮಾಹಿತಿ ನೀಡಲು ಸೂಚನೆ

    December 7, 2025

    ತುಮಕೂರು: ಕೊರಟಗೆರೆ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿರುವ ಖಾಸಗಿ/ ಸರ್ಕಾರಿ ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಕ್ರೀಡಾ ಸಂಕೀರ್ಣ, ಬಸ್ / ರೈಲ್ವೆ…

    ರಾಗಿ ಖರೀದಿ: ನೋಂದಣಿಗೆ ಡಿ.15 ಕೊನೆಯ ದಿನ

    December 7, 2025

    ತಾಯಿ ಚಿಕ್ಕದೇವಮ್ಮನ ಬೆಟ್ಟ–ಇಟ್ನ ಗ್ರಾಮ ಸಂಪರ್ಕ ರಸ್ತೆ ಅಭಿವೃದ್ಧಿಗೆ ಸಹಕಾರ: ಶಾಸಕ ಅನಿಲ್ ಚಿಕ್ಕಮಾದು

    December 7, 2025

    ಅರಸೀಕೆರೆಯ ವಿದ್ಯಾರ್ಥಿಗಳು ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

    December 7, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.