ಬೇಸಿಗೆ ಬಂದಂತರೆ ಎಷ್ಟೇ ಹುಷಾರಾಗಿದ್ದರು ಅಗ್ನಿ ಅವಘಡಗಳು ಸಂಭವಿಸುತ್ತಿರುತ್ತವೆ. ಅದೇ ರೀತಿ ತಿಪಟೂರಿನ ಗಡಿ ಗ್ರಾಮವಾದ ಹೆಗ್ಗಟ್ಟ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ.
ಇಲ್ಲಿನ ನಿವಾಸಿ ನಟರಾಜ್ ಎಂಬವರ ಮನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಪೂರ್ಣ ಸುಟ್ಟುಹೋಗಿದೆ. ಒಂದು ವರ್ಷದ ಹಿಂದೆ 8 ಲಕ್ಷ ರೂಪಾಯಿಗೆ ಈ ಮನೆಯನ್ನು ಖರೀದಿ ಮಾಡಿದ್ದರು. ಅವರಿವರ ಬಳಿ ಸಾಲ ಮಾಡಿ, ಜಮೀನು ಮಾರಿ ಹಣ ಹೊಂದಿಸಿ ಮನೆ ಮಾಡಿದ್ದರು. ಆದರೆ ಇವೆಲ್ಲವೂ ಕೆಲವೇ ಕ್ಷಣಗಳಲ್ಲಿ ಸುಟ್ಟು ಹೋಗಿದೆ.
ಅಗ್ನಿ ಅನಾಹುತ ಹಿನ್ನೆಲೆಯಲ್ಲಿ ಮನೆಯಲ್ಲಿ ಸಾಕಿದ್ದ 15 ನಾಟಿ ಕೋಳಿ, ಏಳು ಕುರಿಗಳು, 11 ಸಾವಿರ ಕೊಬ್ಬರಿ 150 ಗ್ರಾಂ ಚಿನ್ನ ಹಾಗೂ ಬೆಳ್ಳಿ, ಎಲ್ಇಡಿ ಟಿವಿ ಮನೆಯಲ್ಲಿ ಬೆಲೆ ಬಾಳುವ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.
ಕೂಲಿ ನಾಲಿ ಮಾಡಿ ಜೀವನ ಸಾಗಿಸುವುದಕ್ಕೆ ಇದ್ದ ಒಂದು ಮನೆಯು ಸುಟ್ಟು ಹೋಗಿರುವುದರಿಂದ ಈ ಕೂಡಲೇ ಸರ್ಕಾರ ನಮ್ಮ ನೆರವಿಗೆ ಬರಬೇಕೆಂದು ನಟರಾಜು ಹಾಗೂ ಗ್ರಾಮಸ್ಥರು ಕೇಳಿಕೊಂಡರು.
ಸಮಯಕ್ಕೆ ಸರಿಯಾಗಿ ಊರಿನ ಗ್ರಾಮಸ್ಥರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ನಮ್ಮ ಗ್ರಾಮದ ಇನ್ನು ಹಲವು ಮನೆಗಳು ಬೆಂಕಿಗಾಹುತಿಯಾಗುವ ಹಾಗೂ ದೊಡ್ಡ ಮಟ್ಟಕ್ಕೆ ಆಗುತ್ತಿದ್ದ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ಮನೆಯ ಮಾಲೀಕ ನಟರಾಜ್ ತಿಳಿಸಿದರು
ವರದಿ: ಆನಂದ್, ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA