ಪಾವಗಡ: ಪಾವಗಡ ಪಟ್ಟಣದ ಸರಿಹದ್ದುಗಳಲ್ಲಿ ಶ್ರೀ ಶನಿಮಹಾತ್ಮಾ ಶ್ರೀ ಕ್ಷೇತ್ರ ಸುಸ್ವಾಗತ ಎಂಬ ಸ್ವಾಗತ ಕಮಾನುಗಳನ್ನು ನಿರ್ಮಿಸುವಂತೆ ಎಸ್.ಎಸ್. ಕೆ. ಆಡಳಿತ ಮಂಡಳಿ ಅಧ್ಯಕ್ಷರಾದ ಕೆ.ವಿ. ಶ್ರೀನಿವಾಸ್ ಹಾಗೂ ಕಾರ್ಯದರ್ಶಿ ಸುಬ್ಬ ನರಸಿಂಹ ರವರಿಗೆ ಹೆಲ್ಪ್ ಸೊಸೈಟಿ ಮನವಿ ಪತ್ರ ವನ್ನು ಸಲ್ಲಿಸಿತು.
ಕಲ್ಪತರು ನಾಡು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಸುಪ್ರಸಿದ್ದ ಶ್ರೀ ಶನಿಮಹಾತ್ಮಾ ಶ್ರೀ ಕ್ಷೇತ್ರಕ್ಕೆ ಪ್ರತಿನಿತ್ಯ ಹಾಗೂ ಶ್ರಾವಣ ಮಾಸಗಳಲ್ಲಿ ಲಕ್ಷಾಂತರ ಭಕ್ತಾ ದಿಗಳು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದೂ ಪುಣ್ಯ ಕ್ಷೇತ್ರವಾಗಿ ಪ್ರಸಿದ್ದಿ ಹೊಂದಲಾಗಿದ್ದು, ಶನಿಮಹಾತ್ಮಾ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳನ್ನು ಸ್ವಾಗತಿಸುವ ಕೆಲಸ ತಾಲ್ಲೂಕಿನ ಸಮಸ್ತ ಜನತೆಯ ಒತ್ತಾಸೆ ಹಾಗೂ ಶಿಷ್ಯಚಾರ ಆಗಿರುವುದರಿಂದ ಪಟ್ಟಣದ ಸರಹದ್ದಿನ ಹೊರವಲಯದ ನಾಲ್ಕು ದಿಕ್ಕುಗಳಲ್ಲಿ ಶನಿಮಹಾತ್ಮಾ ಶ್ರೀ ಕ್ಷೇತ್ರ ಪಾವಗಡ ಸುಸ್ವಾಗತ ಎಂಬ ಕಮಾನುಗಳನ್ನು ನಿರ್ಮಿಸುವಂತೆ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ನೇತೃತ್ವದಲ್ಲಿ ಮನವಿ ಮಾಡಲಾಯಿತು
ಮನವಿ ಪತ್ರ ಸ್ವೀಕರಿಸಿದ ಎಸ್ ಎಸ್. ಕೆ ಆಡಳಿತ ಮಂಡಳಿ ಅಧ್ಯಕ್ಷರಾದ ಕೆ ವಿ ಶ್ರೀನಿವಾಸ್ ಹಾಗೂ ಕಾರ್ಯದರ್ಶಿಗಳಾದ ಸುಬ್ಬನರಸಿಂಹ ರವರು ಸಾಕಾರಾತ್ಮವಾಗಿ ಸ್ಪಂದಿಸಿ ಅತಿ ಶೀಘ್ರದಲ್ಲಿ ಆಡಳಿತ ಮಂಡಳಿ ಜೊತೆ ಚರ್ಚಿಸಿ ತೀರ್ಮಾನ ಮಾಡಿ ತಾಲ್ಲೂಕಿನ ಜನತೆಯ ಒತ್ತಾಸೆಯಂತೆ ಸ್ವಾಗತ ಕಮಾನುಗಳನ್ನು ನಿರ್ಮಿಸುವ ಬರವಸೆಯಿತ್ತರು.
ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಬೇಕರಿ ನಾಗರಾಜ, ಜಯಕರ್ನಾಟಕ ಸಂಘಟನೆಯ ನಗರ ಘಟಕ ಅಧ್ಯಕ್ಷರಾದ ಅಂಜಿ, ಹೆಲ್ಪ್ ಸೊಸೈಟಿ ಪದಾಧಿಕಾರಿಗಳಾದ ಗೌತಮ್, ರಾಕೇಶ್, ಅನಿಲ್ ಕುಮಾರ್, ಮಂಜುನಾಥ ಸಾಯಿ ಕುಮಾರ್, ಸಾಗರ್ ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy