ಪಾವಗಡ: ಕೊವಿಡ್ ನಿಂದ ಸಂಕಷ್ಟಕ್ಕೊಳಗಾಗಿರುವ ಬಡ ಕುಟುಂಬಗಳಿಗೆ ತಮಟೆ ಸಂಸ್ಥೆ ವತಿಯಿಂದ ಆಹಾರದ ಕಿಟ್ ವಿತರಣೆ ಕಾರ್ಯಕ್ರಮವನ್ನು ಪಾವಗಡ ನಗರದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಡಾ.ಕೆ.ಬಿ. ಓಬಳೇಶ್, ಪಾವಗಡ ತಾಲ್ಲೂಕು ಗಡಿ ತಾಲ್ಲೂಕಾಗಿದ್ದು, ಈ ತಾಲ್ಲೂಕಿನ ಗ್ರಾಮೀಣ ಭಾಗದ ಬಡಜನರು ಕೋವಿಡ್ ನಿಂದಾಗಿ ಬಹಳಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ನಮ್ಮ ತಮಟೆ ಸಂಸ್ಥೆ ವತಿಯಿಂದ ಸುಮಾರು 200 ಜನರಿಗೆ ರೇಷನ್ ಹಂಚುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಪಾವಗಡ ಅಭಿವೃದ್ದಿಗೆ ನಮ್ಮ ಸರ್ಕಾರ ಇದ್ದಾಗ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೆವು. ದೇಶಕ್ಕೆ ಕೋವಿಡ್ ಬಂದು ಎರಡು ವರ್ಷಗಳು ಕಳೆಯುತ್ತಾ ಬಂತು. ಇಂತಹ ಸಂದರ್ಭದಲ್ಲಿ ಕೊವಿಡ್ ನಿಂದ ಸಂಕಷ್ಟಕ್ಕೊಳಗಾಗಿರುವ ಕುಟುಂಬಗಳಿಗೆ ತಮಟೆ ಸಂಸ್ಥೆ ಆಹಾರ ಕಿಟ್ ವಿತರಣೆ ಮಾಡುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕಲಾವಿದರಾದ ಸಿ.ಕೆ. ಪುರ ಹನುಮಂತರಾಯಪ್ಪ ನವರು ಅಂಬೇಡ್ಕರ್ ಕುರಿತು ಹೋರಾಟದ ಹಾಡನ್ನು ಹಾಡಿದರು. ಸಿದ್ದಾರ್ಥ ಟ್ರಸ್ಟ್ ನ ಕಾರ್ಯದರ್ಶಿಗಳಾದ ವಿ.ಎಸ್.ನಾಗೇಶ್ ಹಾಗೂ ಕೋಟಗುಡ್ಡ ಗೋವಿಂದಪ್ಪಅತಿಥಿಗಳಾಗಿ ಭಾಗವಹಿಸಿದ್ದರು.
ಸಿಬ್ಬಂದಿ ಲತಾ, ರಾಮಕೃಷ್ಣ, ಪುಷ್ಪಾ, ರವಿಕುಮಾರ, ಮನೋಜ್, ಇಂದುಶ್ರೀ ಹಾಗೂ ಶ್ರೀನಿವಾಸ್ ಉಪಸ್ಥಿತರಿದ್ದರು. ತಮಟೆ ಸಂಸ್ಥೆಯ ಶಿಕ್ಷಣ ಸಂಯೋಜಕರಾದ ಗಂಗರಾಜು ಕಾರ್ಯಕ್ರಮ ನಿರೂಪಿಸಿದರು. ವೆಂಕಟೇಶ್ ವಂದಿಸಿದರು.
ವರದಿ: ಹನುಮಂತರಾಯಪ್ಪ ಸಿ.ಕೆ.ಪುರ., ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB