ಮಣಿಪುರದಲ್ಲಿ ಉರುವಲು ಸಂಗ್ರಹಿಸುತ್ತಿದ್ದಾಗ ನಾಪತ್ತೆಯಾಗಿದ್ದ ಮೂವರ ಮೃತದೇಹಗಳು ಕಾಡಿನಲ್ಲಿ ಪತ್ತೆಯಾಗಿವೆ. ಬಿಷ್ಣುಪುರ್ ಮತ್ತು ಚುರಾಚಂದಪುರ ಜಿಲ್ಲೆಗಳ ಗಡಿಯಲ್ಲಿರುವ ಹ್ಯೋತಕ್ ಫೈಲನ್ ಪ್ರದೇಶದಿಂದ ಬುಧವಾರ ಮಧ್ಯಾಹ್ನ ನಾಲ್ವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಮತ್ತೋರ್ವ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಬಿಷ್ಣುಪುರ ಜಿಲ್ಲೆಯ ತೆರಖೋಂಗ್ ಅಕಾಸೋಯಿ ಪ್ರದೇಶದ ನಿವಾಸಿಗಳಾದ ಥಾವ್ಧಮ್ ಇಬೊಮ್ಚಾ (53), ಅವರ ಪುತ್ರ ಥಾವ್ಧಮ್ ಆನಂದ್ (27) ಮತ್ತು ಓನಮ್ ರೋಮೆನ್ (45) ಅವರ ಮೃತದೇಹಗಳು ಹ್ಯೋಟಾಕ್ ಫೈಲ್ ಬಳಿ ಪತ್ತೆಯಾಗಿವೆ. ಕುಕಿ ಪಂಥದವರು ಮೂವರನ್ನು ಅಪಹರಿಸಿ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.
ಇದಕ್ಕೂ ಮೊದಲು, ಕುಕಿ ಸಂಸ್ಥೆಯ ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕ ಮೃತ ದೇಹಗಳ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಬಿಷ್ಣುಪುರ ಜಿಲ್ಲೆಯಲ್ಲಿ ಬುಧವಾರ ಮತ್ತೆ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ. ಬಿಷ್ಣುಪುರದ ಕುಂಬಿ ಮತ್ತು ತೌಬಲ್ ನ ವಾಂಗೂ ನಡುವೆ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.


