nammatumakuru

    Subscribe to Updates

    Get the latest creative news from FooBar about art, design and business.

    What's Hot

    ದಕ್ಷಿಣ ಕರ್ನಾಟಕದ ಏಕೈಕ ಚಿತ್ರಕಲಾ ಕಾಲೇಜನ್ನು ಉಳಿಸಿ ಬೆಳೆಸಿದವರು ಸಿ.ಸಿ.ಬಾರಕೇರ:  ಡಾ.ಕರಿಯಣ್ಣ ಬಿ.

    July 1, 2025

    ಎಷ್ಟು ಹಣ ಕೊಟ್ಟರೂ ಆ ಒಂದು ಕೆಲಸ ಮಾಡುವುದಿಲ್ಲ ಎಂದ ರಶ್ಮಿಕಾ ಮಂದಣ್ಣ!

    July 1, 2025

    ಬೀದರ್ | ಭ್ರಷ್ಟಾಚಾರ ಆರೋಪ; ದ್ವಿತೀಯ ದರ್ಜೆ ಸಹಾಯಕ ಅಮಾನತು

    July 1, 2025
    Facebook Twitter Instagram
    ಟ್ರೆಂಡಿಂಗ್
    • ದಕ್ಷಿಣ ಕರ್ನಾಟಕದ ಏಕೈಕ ಚಿತ್ರಕಲಾ ಕಾಲೇಜನ್ನು ಉಳಿಸಿ ಬೆಳೆಸಿದವರು ಸಿ.ಸಿ.ಬಾರಕೇರ:  ಡಾ.ಕರಿಯಣ್ಣ ಬಿ.
    • ಎಷ್ಟು ಹಣ ಕೊಟ್ಟರೂ ಆ ಒಂದು ಕೆಲಸ ಮಾಡುವುದಿಲ್ಲ ಎಂದ ರಶ್ಮಿಕಾ ಮಂದಣ್ಣ!
    • ಬೀದರ್ | ಭ್ರಷ್ಟಾಚಾರ ಆರೋಪ; ದ್ವಿತೀಯ ದರ್ಜೆ ಸಹಾಯಕ ಅಮಾನತು
    • ತುಮಕೂರು: ವಿವಿಧ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
    • ಜುಲೈ 1:  ರಾಷ್ಟ್ರೀಯ ಪತ್ರಿಕಾ ದಿನ: ಪತ್ರಿಕಾ ದಿನಾಚರಣೆಯ ಶುಭಾಶಯಗಳು
    • ಮನೆ ಮುಂದೆ ಕಸ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಕಂಬಕ್ಕೆ ಕಟ್ಟಿಹಾಕಿ ಮಹಿಳೆಗೆ ಹಲ್ಲೆ!
    • ಬಿಗ್ ಬಾಸ್ ಸೀಸನ್ 12ಕ್ಕೂ ಕಿಚ್ಚ ಸುದೀಪ್ ನಿರೂಪಣೆ ಫಿಕ್ಸ್!
    • ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 8 ಕಾರ್ಮಿಕರು ಸಾವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಈ ದಿನದ ಕಥೆಯ ಶೀರ್ಷಿಕೆ: ರಾಜನ ಪರೀಕ್ಷೆ
    Uncategorized August 18, 2024

    ಈ ದಿನದ ಕಥೆಯ ಶೀರ್ಷಿಕೆ: ರಾಜನ ಪರೀಕ್ಷೆ

    By adminAugust 18, 2024No Comments3 Mins Read
    venu gopal

    ಒಮ್ಮೆ ಸತ್ಯಪುರ ರಾಜ್ಯಕ್ಕೆ ಸೇರಿದ ಸಿರಿವನ ಎಂಬ ಅರಣ್ಯದಲ್ಲಿ ಪ್ರಖ್ಯಾತ ಗುರು ಪ್ರಭುಶಿಖಿರ ಎಂಬುವರ ಗುರುಕುಲದಲ್ಲಿ ಸರ್ವವಿದ್ಯಾ ಪರಂಗತರಾಗಿದ್ದ ಜ್ಞಾನದೇವ, ಸತ್ಯದೇವ ಮತ್ತು ಅಮರದೇವಗಳೆಂಬ ಮೂವರು ಪಂಡಿತರು ರಾಜ ವೀರಬಲ್ಲಾಳನ ಆಸ್ಥಾನಕ್ಕೆ ಬಂದರು.

    ಅವರ ಮುಖದ ವರ್ಚಸ್ಸನ್ನು ನೋಡಿ ಎದ್ದು ನಿಂತು ಗೌರವಿಸಿ ನಂತರ ರಾಜ ಪಂಡಿತರುಗಳೇ ನನ್ನಿಂದ ನಿಮಗೆ ಏನಾಗಬೇಕು ಎಂದಾಗ ಮೂವರೂ ತಮ್ಮ ತಮ್ಮ ಪರಿಚಯ ಮಾಡಿಕೊಂಡ ನಂತರ ಅಮರದೇವನು ರಾಜರೇ ನಮಗೆ ನಿಮ್ಮ ಆಸ್ಥಾನದಲ್ಲಿ ನಮಗೆ ರಾಜಗುರು ಸ್ಥಾನಬೇಕು ನೀಡುವಿರಾ ಎಂದಾಗ ಹರ್ಷಿತನಾದ ರಾಜನು ಆಗಬಹುದು, ಆದರೆ ರಾಜಗುರು ಸ್ಥಾನ ಕೇವಲ ಒಬ್ಬರಿಗೆ ಮಾತ್ರ ದೊರಕುವುದು ಎಂದಾಗ ಸತ್ಯದೇವನು ಮುಂದೆ ಬಂದು ಇವರಿಬ್ಬರಿಗಿಂತ ನನಗೆ ಹೆಚ್ಚು ಜ್ಞಾನ ನನಗೆ ನೀಡಬೇಕು ಎಂದಾಗ ಅವರಿಬ್ಬರಲ್ಲಿ ಮಾತಿನ ವೈಮನಸ್ಯ ಉಂಟಾಯಿತು.


    Provided by

    ನಂತರ ಸುಮ್ಮನೆ ನಿಂತಿದ್ದ ಜ್ಞಾನದೇವನನ್ನು ಕುರಿತು ರಾಜ ನೀವು ಏನು ಹೇಳುವಿರಿ ಎಂದಾಗ ಜ್ಞಾನದೇವನು ಮಹಾರಾಜರೇ ತಮ್ಮ ತೀರ್ಮಾನವೇ ಅಂತಿಮ ನಾನು ಹೇಳುವುದು ಏನೂ ಇಲ್ಲ ಎಂದಾಗ ರಾಜನು ಯೋಚಿಸಿ ಆಯಿತು. ಈಗ ನಿಮ್ಮ ಮೂವರಿಗೂ ಒಂದು ಪರೀಕ್ಷೆ ನೀಡುವೆ ಅದರಲ್ಲಿ ವಿಜಯಿಶಾಲಿಯಾದ ಒಬ್ಬರಿಗೆ ರಾಜಗುರು ಪದವಿ ನೀಡುವೆ ಒಪ್ಪಿಗೆಯೇ ಎಂದಾಗ ಪಂಡಿತರುಗಳು ಒಪ್ಪಿದರು.

    ನಂತರ ರಾಜ ಮೂವರಿಗೂ ಒಂದೊಂದು ಅತ್ಯಂತ ಬೆಲೆಬಾಳುವ ವಜ್ರಗಳನ್ನು ನೀಡಿ ನಂತರ ಮೂವರನ್ನು ಕುರಿತು ನೋಡಿ ಇನ್ನು ಒಂದು ವರುಷದ ಅವಧಿಯಲ್ಲಿ ಈ ವಜ್ರವನ್ನು ಹೇಗೆ ಬಳಸುತ್ತೀರೊ ಗೊತ್ತಿಲ್ಲ ಆದರೆ ಈ ಒಂದು ವಜ್ರದಿಂದ ಅತಿಹೆಚ್ಚು ಸಂಪಾದನೆ ಮಾಡಿ ತೋರಿಸಿಸುತ್ತಾರೋ ಅವರಿಗೆ ರಾಜಗುರು ಪದವಿ ನೀಡಲಾಗುವುದು ಎಂದಾಗ ಸರಿ ಎಂದು ಹೇಳಿ ಮೂವರೂ ಮೂರುದಿಕ್ಕುಗಳನ್ನು ಹಿಡಿದು ಹೊರಟುಹೋದರು.

    ಒಂದು ವರುಷವಾಯಿತು ನಂತರ ಮೂವರೂ ಸತ್ಯಪುರ ರಾಜ ಮಹಲಿಗೆ ಬಂದರು ರಾಜನು ಅವರಿಗೆ ಸ್ವಾಗತಕೋರಿ ಈಗ ಹೇಳಿ ಯಾರು ಏನೇನು ಮಾಡಿ ಸಂಪಾದಿಸಿದಿರಿ ಎಂದಾಗ ಮೊದಲು ಅಮರದೇವನು ಮುಂದೆ ಬಂದು ರಾಜರೇ ನಾನು ಪಕ್ಕದ ರಾಜ್ಯದ ನಗರವೊಂದಕ್ಕೆ ಹೋಗಿ ತಾವು ನೀಡಿದ ವಜ್ರವನ್ನು ಅಧಿಕ ಬೆಲೆಗೆ ಮಾರಿ ಬಂದ ಹಣದಿಂದ ಲೇವಾದೇವಿ ವ್ಯವಹಾರ ಮಾಡಲು ಶುರು ಮಾಡಿದೆ. ಅದು ದಿನದಿಂದ ದಿನಕ್ಕೆ ಅತ್ಯಧಿಕ ಲಾಭ ತಂದು ಕೊಟ್ಟಿತು. ಆದ್ದರಿಂದ ಇಂದು ನನ್ನಬಳಿ ಒಂದು ಸಾವಿರಕ್ಕೂ ಅಧಿಕ ಅಂತಹ ವಜ್ರಗಳಿವೆ ಎಂದಾಗ ರಾಜನಾದಿಯಾಗಿ ಎಲ್ಲರೂ ಚಪ್ಪಾಳೆ ತಟ್ಟಿ ಶಹಬಾಷ್ ಎಂದರು.
    ನಂತರ ಸತ್ಯದೇವನು ಮುಂದೆ ಬಂದು ರಾಜರೇ ನಾನು ತಾವು ನೀಡದ ವಜ್ರವನ್ನು ಒಬ್ಬ ಜಮೀನು ದಾರನಿಗೆ ಕೊಟ್ಟು ಒಂದಿಷ್ಟು ಭೂಮಿಕೊಂಡು ಕೊಂಡೆ, ನಂತರ ಅದೇ ಭೂಮಿಯನ್ನು ಅಧಿಕ ಬಲೆಗೆ ಬೇರೆಯವರಿಗೆ ಮಾರಿದೆ, ಬಂದ ಅಧಿಕಹಣದಿಂದ ಬೇರೆಡೆ ಮತ್ತಷ್ಟು ಭೂಮಿ ಕೊಂಡುಕೊಂಡೆ, ಮತ್ತೆ ಅಧಿಕ ಬಲೆಗೆ ಮಾರಿದೆ ಹೀಗೆಯೇ ಮಾಡುತ್ತಾ ಮಾಡುತ್ತಾ ಇಂದು ನನ್ನ ಬಳಿ ಎರಡು ಸಾವಿರಕ್ಕೂ ಅಧಿಕ ಮಂಡಲ ಭೂಮಿ ಇದೆ ಎಂದಾಗ ಮತ್ತೆ ರಾಜನಾದಿಯಾಗಿ ಎಲ್ಲರೂ ಚಪ್ಪಾಳೆ ತಟ್ಟಿದರು.

    ನಂತರ ರಾಜನು ಜ್ಞಾನದೇವರೇ ತಾವು ಏನು ಮಾಡಿದಿರಿ ಎಂದಾಗ ಜ್ಞಾನದೇವನು ಕೈ ಮುಗಿದು ಮುಂದೆ ಬಂದು ವಿನಯದಿಂದ ಮಹಾರಾಜರೇ ನೀವು ಕೊಟ್ಟ ವಜ್ರವು ನನಗೆ ತಮ್ಮಿಂದ ದಾನಸ್ವರೂಪವಾಗಿ ಬಂದಿದ್ದರಿಂದ ಅದನ್ನು ನಾನು ಬಳಸಲು ಮನಸ್ಸು ಬಾರದೆ ಅದನ್ನು ಅರಮನೆಯ ಹೊರಗೆ ನಿಂತಿದ್ದ ಒಬ್ಬ ನಿರ್ಗತಿಕನಿಗೆ ಅಂದೇ ದಾನ ನೀಡಿದೆ ಎಂದಾಗ ಅಲ್ಲಿದ್ದ ಎಲ್ಲರೂ ಇನ್ನು ಇವರಿಗೆ ರಾಜಗುರು ಸ್ಥಾನ ಸಿಕ್ಕಂತೆ ಎಂದುಕೊಳ್ಳುವಾಗು ರಾಜನು ಹಾಗಾದರೆ ತಾವು ಏನು ಸಂಪಾದಿಸಿದಿರಿ ಎಂದು ಕೇಳಿದಾಗ ಜ್ಞಾನದೇವನು ನಾನು ಸೀದಾ ಅರಣ್ಯಕ್ಕೆ ಹೋಗಿ ಅಲ್ಲಿ ನನ್ನ ಸ್ವಪ್ರಯತ್ನದಿಂದ ಒಂದು ಸಣ್ಣ ಕುಟೀರ ಕಟ್ಟಿದೆ, ನಂತರ ಅಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾ ದಾನ ನೀಡುತ್ತಿರುವೆನು, ಇದರಿಂದ ಇಂದು ನೂರಾರು ಬಡವರು, ನಿರ್ಗತಿಕರು ವಿದ್ಯೆಕಲಿಯುತ್ತಿದ್ದಾರೆ. ಇದರಿಂದ ಮುಂದೊಂದು ದಿನ ತಮ್ಮ ರಾಜ್ಯ ಅಧಿಕ ವಿದ್ಯಾವಂತರಿಂದ ಕೂಡುವುದು ಮತ್ತು ಅವರೆಲ್ಲಾ ಸ್ವಾವಲಂಬಿಗಳಾಗಿ ಬದುಕುವರು ರಾಜರೇ ಇದೇ ನಾನು ಸಂಪಾದಿಸಿದ್ದು ಎಂದಾಗ ರಾಜನಾದಿಯಾಗಿ ಕುಳಿತಿದ್ದ ಎಲ್ಲರೂ ಎಂದು ನಿಂತು ಜೋರಾದ ಚಪ್ಪಾಳೆಯೊಂದಿಗೆ ಜೈಕಾರ ಹಾಕಿದರು.
    ನಂತರ ರಾಜನು ಅಮರದೇವ ಮತ್ತು ಸತ್ಯದೇವರನ್ನು ಕುರಿತು ನೋಡಿ ನಾನು ವಜ್ರ ನೀಡಿದ್ದು ನೀವು ಅದನ್ನು ಹೇಗೆ ಸದ್ಬಳಕೆ ಮಾಡುತ್ತೀರಿ ಎಂದು ಪರೀಕ್ಷಿಸಲು ಆದರೆ ನೀವು ನಿಮ್ಮ ಸ್ವಾರ್ಥಕ್ಕಾಗಿ ಸಂಪಾದಿಸಿದಿರಿ ಅದರಿಂದ ನೀವು ಸಿರಿವಂತರಾದಿರಿ, ಆದರೆ ಜ್ಞಾನದೇವರನು ಸಮಾಜಕ್ಕಾಗಿ, ದೇಶದ ಹಿತಕ್ಕಾಗಿ ಸೇವೆ ಸಲ್ಲಿಸಿದ್ದಾರೆ ಆದ್ದರಿಂದ ಅವರಿಗೇ ರಾಜಗುರು ಸ್ಥಾನ ಸಲ್ಲುವುದು ಎಂದಾಗ ರಾಜನಿಗೆ ಜೈಕಾರ ಹಾಕಿದರು.

    ನೀತಿ: ಸಾಂದರ್ಭಿಕ ಪರೀಕ್ಷೆಗಳ ಮೂಲ ಉದ್ದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಬಹು ಮುಖ್ಯ.

    ವಿಶೇಷ ಲೇಖನ
    ಉದಯೋನ್ಮುಖ ಬರಹಗಾರರು
    ರಚನೆ : ಶ್ರೀ ವೇಣುಗೋಪಾಲ್ ತುಮಕೂರು
    ಅನಿಸಿಕೆ ಅಭಿಪ್ರಾಯ ತಿಳಿಸಲು ದೂರವಾಣಿ ಸಂಖ್ಯೆ: 9449138522

    admin
    • Website

    Related Posts

    ನಿರುದ್ಯೋಗಿ ಯುವಕರಿಗೆ ಸಿಹಿ ಸುದ್ದಿ: ತುಮಕೂರಿನಲ್ಲಿದೆ ಉದ್ಯೋಗಾವಕಾಶ

    June 14, 2025

    ಬಸ್ ಫ್ರೀ ಅಂತ ಟಿಕೆಟ್ ಇಲ್ಲದೇ ಪ್ರಯಾಣಿಸುವಂತಿಲ್ಲ: ಕೆಎಸ್ ಆರ್ ಟಿಸಿ ವಿಧಿಸಿದ ದಂಡದ ಮೊತ್ತ ಎಷ್ಟು ಗೊತ್ತಾ?

    May 10, 2025

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೈತ್ರಾ ಕುಂದಾಪುರ: ಅಣ್ಣ ಸ್ಥಾನದಲ್ಲಿ ನಿಂತ ರಜತ್‌ ಬುಜ್ಜಿ

    May 9, 2025
    Our Picks

    ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 8 ಕಾರ್ಮಿಕರು ಸಾವು

    June 30, 2025

    ಇಸ್ರೇಲ್ ಪರ ಬೇಹುಗಾರಿಕೆ: ಮೂವರನ್ನು ಗಲ್ಲಿಗೇರಿಸಿದ ಇರಾನ್

    June 25, 2025

    ಕೆಲವರಿಗೆ ಮೋದಿಯೇ ಮೊದಲು: ಶಶಿ ತರೂರ್ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಟೀಕೆ

    June 25, 2025

    ಏಳು ಪ್ರಮುಖ ಮಸೂದೆಗಳಿಗೆ ಅನುಮೋದನೆ ನೀಡಲು ರಾಷ್ಟ್ರಪತಿಗೆ ಸಿಎಂ ಸಿದ್ದರಾಮಯ್ಯ ಮನವಿ

    June 24, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ದಕ್ಷಿಣ ಕರ್ನಾಟಕದ ಏಕೈಕ ಚಿತ್ರಕಲಾ ಕಾಲೇಜನ್ನು ಉಳಿಸಿ ಬೆಳೆಸಿದವರು ಸಿ.ಸಿ.ಬಾರಕೇರ:  ಡಾ.ಕರಿಯಣ್ಣ ಬಿ.

    July 1, 2025

    ತುಮಕೂರು :  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು ಮತ್ತು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ, ತುಮಕೂರು ಇವರ ಸಂಯುಕ್ತ ಆಶ್ರಯದಲ್ಲಿ…

    ಎಷ್ಟು ಹಣ ಕೊಟ್ಟರೂ ಆ ಒಂದು ಕೆಲಸ ಮಾಡುವುದಿಲ್ಲ ಎಂದ ರಶ್ಮಿಕಾ ಮಂದಣ್ಣ!

    July 1, 2025

    ಬೀದರ್ | ಭ್ರಷ್ಟಾಚಾರ ಆರೋಪ; ದ್ವಿತೀಯ ದರ್ಜೆ ಸಹಾಯಕ ಅಮಾನತು

    July 1, 2025

    ತುಮಕೂರು: ವಿವಿಧ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

    July 1, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.