ಕೊರಟಗೆರೆ: ತಾಲೂಕಿನ ಕಾಲೋನಿ, ನಾಗೇನಹಳ್ಳಿ ಸೇರಿದಂತೆ ಭೈರೇನಹಳ್ಳಿ ಕ್ರಾಸ್ ಬಳಿ ಸರಣಿ ಕಳ್ಳತನ ನಡೆದಿದ್ದು, ರಸ್ತೆ ಬದಿಯ ಅಂಗಡಿಗಳಲ್ಲಿ ಕಳ್ಳರು ಕಳ್ಳತನ ನಡೆಸಿರುವುದಲ್ಲದೇ ಬೆಳಗ್ಗಿನ ವೇಳೆ ವೃದ್ದೆಯ ಕೊರಳಲ್ಲಿದ್ದ ಚೈನ್ ಕಸಿದು ಪರಾರಿಯಾದ ಘಟನೆ ಕೂಡ ನಡೆದಿದೆ.
ಕಾಲೋನಿಯಿಂದ ಕೊರಟಗೆರೆಗೆ ಬರುವ ಮಾರ್ಗ ಮಧ್ಯದ ರಸ್ತೆ ಬದಿಯ ಐದು ಅಂಗಡಿಗಳಲ್ಲಿ ತಡ ರಾತ್ರಿ ಕಳ್ಳತನ ನಡೆಸಲಾಗಿದ್ದು, ಸಿಲಿಂಡರ್,ಗುಟ್ಕಾ, ಸಿಗರೇಟ್, ನಗದು ಕಳವು ಮಾಡಿ ಕಳ್ಳರು ಪರಾರಿಯಾಗಿದ್ದಾರೆ.
ಕಳ್ಳತನ ಮಾಡಿರುವ ಪ್ರತಿಯೊಂದು ಅಂಗಡಿಗಳಲ್ಲಿ ಬೆಲೆ ಬಾಳುವ ವಸ್ತುಗಳಾದ 4 ಸಿಲಿಂಡರ್, ಸಿಗರೇಟ್, ಗುಟ್ಕಾ, 40 ಸಾವಿರ ಹೆಚ್ಚು ನಗದು ಕಳವು ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಕೋಳಾಲ ಹಾಗೂ ಕೊರಟಗೆರೆ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವೃದ್ಧೆಯ ಸರಗಳ್ಳತನ:
ಜಮೀನಿಗೆ ತೆರಳುತ್ತಿದ್ದ ಒಂಟಿ ವೃದ್ದೆಯ ಕೊರಳಿನಲ್ಲಿದ್ದ 2 ಲಕ್ಷ ಮೌಲ್ಯದ 30 ಗ್ರಾಂ ಮಾಂಗಲ್ಯ ಸರವನ್ನು ಸರಗಳ್ಳರು ದೋಚಿ ಪರಾರಿಯಾದ ಘಟನೆ ನಡೆದಿದೆ.
ಕೊರಟಗೆರೆ ತಾಲೂಕಿನ ಬೈರೇನಹಳ್ಳಿಯ ವೃದ್ಧೆ ಶಾಂತಮ್ಮನವರ ಜಮೀನಿನ ಬಳಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ವೆಂಕಟೇಶ ನಾಯ್ಡು, ಕೊರಟಗೆರೆ ಸಿಪಿಐ ಸುರೇಶ್ ಮತ್ತು ಪಿಎಸೈ ಚೇತನ್ ಭೇಟಿ ಪರಿಶೀಲನೆ ನಡೆಸಿದ್ದಾರೆ.
ವರದಿ: ಮಂಜುಸ್ವಾಮಿ, ಎಂ.ಎನ್.ಕೊರಟಗೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy