ಚಾಣಕ್ಯನ ನೀತಿಗಳು(Chanakyana niti )ಬಹಳ ಖ್ಯಾತಿ ಪಡೆದದ್ದಾಗಿವೆ. ಚಾಣಕ್ಯನ ಕೆಲವೊಂದು ನೀತಿಗಳು ಮಹಿಳೆಯರ ವಿರುದ್ಧ ಇರುವಂತೆ ಕಂಡರೂ ಸಾಕಷ್ಟು ನೀತಿಗಳು ಸಮಾಜದಲ್ಲಿ ಜನಪ್ರಿಯವಾಗಿದೆ.
ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ 3 ವ್ಯಕ್ತಿಗಳಿಂದ ದೂರವಿರಬೇಕು ಎಂದು ಚಾಣಕ್ಯ ಹೇಳುತ್ತಾನೆ. ಆ ವ್ಯಕ್ತಿಗಳಿಂದ ದೂರವಿದ್ದರೆ ಸಂಬಂಧ ಉತ್ತಮವಾಗಿರುತ್ತದೆಯಂತೆ.
ಸ್ವಾರ್ಥಿ ಬಂಧು, ಸ್ನೇಹಿತರಿಂದ ದೂರವಿರಿ:
ನಿಮ್ಮ ಸ್ನೇಹಿತರು, ಸಂಬಂಧಿಕರು ಸ್ವಾರ್ಥಿಗಳಾಗಿದ್ದರೆ, ಅವರಿಂದ ದೂರವಿರಿ ಎಂದು ಚಾಣಕ್ಯ ಹೇಳುತ್ತಾನೆ. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರು ನಿಮಗೆ ಸಲಹೆ ನೀಡುವವರು, ಮಾರ್ಗದರ್ಶನ ನೀಡುವವರಾಗಿರಬೇಕು. ಆದರೆ ಸ್ನೇಹಿತರು, ಸಂಬಂಧಿಕರು ನಿಮ್ಮ ಬೆಳವಣಿಗೆ ಸಹಿಸದವರು, ನಿಮ್ಮನ್ನು ದಾರಿ ತಪ್ಪಿಸಲು ಯತ್ನಿಸುತ್ತಾರೆ ಎಂದಾದರೆ, ಅವರಿಂದ ದೂರವಿರಿ ಎಂದು ಚಾಣಕ್ಯ ಹೇಳುತ್ತಾರೆ.
ಜಗಳವಾಡುವ ಪತ್ನಿಯೊಂದಿಗೆ ಹೀಗೆ ಇರಿ:
ಜಗಳವಾಡುವ ಹೆಂಡತಿಯಿಂದ ನೀವು ದೂರವಿರಬೇಕು ಎಂದು ಚಾಣಕ್ಯ ಹೇಳುತ್ತಾನೆ. ಚಾಣಕ್ಯನ ಪ್ರಕಾರ ಜಗಳವಾಡುವ ಹೆಂಡತಿ ನಿಮ್ಮನ್ನು ಸಂತೋಷದಿಂದ ಇಡಲಾರಳು. ಆಕೆ ನಿಮ್ಮ ಜೀವನದಲ್ಲಿ ಅಡೆತಡೆ ಮಾತ್ರ ತರಬಹುದು. ಆಕೆಯನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು ಎಂದು ಪುರುಷರಿಗೆ ಚಾಣಕ್ಯ ಹೇಳುತ್ತಾನೆ. ಅವಳಿಗೆ ಒಂದಿಷ್ಟು ಅವಕಾಶಗಳನ್ನು ನೀಡಬೇಕು. ನಂತರವೂ ಸರಿಯಾಗದೇ ಇದ್ದರೆ, ಆಕೆಯಿಂದ ದೂರವಿರಿ ಎಂದು ಚಾಣಕ್ಯ ಹೇಳುತ್ತಾನೆ.
ಗುರುವನ್ನು ಆರಿಸುವಾಗ ಎಚ್ಚರಿಕೆ:
ಜೀವನದಲ್ಲಿ ಯಶಸ್ವಿಯಾಗಬೇಕು ಎಂದರೆ, ಗುರುವನ್ನು ಬಹಳ ಎಚ್ಚರಿಕೆಯಿಂದ ಆರಿಸಬೇಕು ಎಂದು ಚಾಣಕ್ಯ ಹೇಳುತ್ತಾನೆ. ನಿಮ್ಮ ಗುರುವಿಗೆ ಜ್ಞಾನ ಅಥವಾ ಶಿಕ್ಷಣದ ಕೊರತೆಯಿದ್ದರೆ, ಅವರಿಂದ ನಿಮಗೆ ಯಾವುದೇ ಪ್ರಯೋಜನವಿಲ್ಲ. ಅವರು ನಿಮ್ಮ ಜೀವನದಲ್ಲಿ ಕತ್ತಲೆಯನ್ನು ಮಾತ್ರ ತರಬಹುದು. ನಿಮ್ಮನ್ನು ಬೆಳಕಿನ ದಾರಿಯಲ್ಲಿ ಅಥವಾ ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗುವ ಗುರುವನ್ನು ಆಯ್ಕೆ ಮಾಡಿ ಎಂದು ಚಾಣಕ್ಯ ಹೇಳುತ್ತಾನೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx