ತುಮಕೂರು: ಕಳೆದ ನಾಲ್ಕು ತಿಂಗಳ ಅಪರಾಧ ಪ್ರಕರಣಗಳ ಯಶಸ್ವಿ ಕಾರ್ಯಚರಣೆ ವಿಚಾರವಾಗಿ ತುಮಕೂರು ಎಸ್ಪಿ ಅಶೋಕ್ ವಿ.ಕೆ. ಸುದ್ದಿಗೋಷ್ಟಿ ನಡೆಸಿದರು.
ತುಮಕೂರಿನ ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತುಮಕೂರಿನ ಐದು ವಿಭಾಗಗಳಲ್ಲಿ ಕೊಲೆ, ಮನೆಗಳ್ಳತನ, ಸರಗಳ್ಳತನ, ರಾಬರಿ, ಡಕಾಯಿತಿ ಸೇರಿದಂತೆ 130 ಪ್ರಕರಣಗಳು ದಾಖಲಾಗಿತ್ತು.
130 ಪ್ರಕರಣಗಳ ಸಂಬಂಧ ಯಶಸ್ವಿ ಕಾರ್ಯಾಚರಣೆಯಲ್ಲಿ 170 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಹಲವು ಪ್ರಕರಣಗಳಲ್ಲಿ ಕೋಟಿ ಕೋಟಿ ಮೌಲ್ಯದ ವಸ್ತುಗಳ ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.
4 ಕೋಟಿ ಮೌಲ್ಯದ 4.31 ಕೆಜಿ ಚಿನ್ನ, 7.20 ಲಕ್ಷ ರೂಪಾಯಿ ಮೌಲ್ಯದ 7ಕೆಜಿ 207 ಗ್ರಾಂ ಬೆಳ್ಳಿ, 1.11 ಕೋಟಿ ಮೌಲ್ಯದ 99 ಬೈಕ್, 4 ಕಾರ್, ಒಂದು ಆಟೋ ಮತ್ತು 3 ಲಕ್ಷ ಮೌಲ್ಯದ ಜಾನುವಾರು ಹಾಗೂ 36.73 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು.
ತುಮಕೂರಿನ ವಿವಿಧ ಪ್ರಕರಣಗಳ ಒಟ್ಟಾರೆ ವಶಕ್ಕೆ ಪಡೆದ ವಸ್ತುಗಳ ಮೌಲ್ಯ 6.61 ಕೋಟಿ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW