ತುಮಕೂರು: ಹನಿ ನಿಧಿ ಸಾಹಿತ್ಯ ಸಾಂಸ್ಕೃತಿಕ ಕಲಾ ಟ್ರಸ್ಟ್ (ರಿ) ಗುಬ್ಬಿ , ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ತುಮಕೂರು ಮತ್ತು ತಾಲ್ಲೂಕು ಘಟಕ ಗುಬ್ಬಿ ಹಾಗೂ ಶ್ರೀಗಂಧ ಸಾಹಿತ್ಯ ಸಾಂಸ್ಕೃತಿಕ ಕಲಾ ಬಳಗ ತುಮಕೂರು ಇವರ ಸಹಯೋಗದಲ್ಲಿ 3ನೇ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಭಾನುವಾರ ಕನ್ನಡ ಭವನ ತುಮಕೂರಿನಲ್ಲಿ ನಡೆಯಿತು.
ಸಮ್ಮೇಳನಾಧ್ಯಕ್ಷರಾದ ಗೀತಾ ಲೋಕೇಶ್ ಹಾಗೂ ಹೆಚ್.ಹೆಚ್.ವೆಂಕಟೇಶ್ ಅವರು ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾಟಕ ಭಾರ್ಗವ ಕೆಂಪರಾಜು ಮೈಸೂರು ಅವರು ವಹಿಸಿದ್ದರು.
ಆಶಯ ನುಡಿಯನ್ನು ಸಂಸ್ಥಾಪಕ ಅಧ್ಯಕ್ಷರು ಮತ್ತು ಸಾಹಿತ್ಯ ನಿಧಿ ಸಾಹಿತ್ಯ ಮಾಸ ಪತ್ರಿಕೆಯ ಸಂಪಾದಕರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕವಿಗೋಷ್ಠಿ ನಡೆಯಿತು. ಕಾಲ್ಗೆಜ್ಜೆ, ನಸುಕಿಗೊಂದು ಚುಟುಕು, ಅಂತರಾಳದ ಅಭಿವ್ಯಕ್ತಿ, ಹೃದಯ ಗದ್ದುಗೆ ಎಂಬ 4 ಪುಸ್ತಕಗಳ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಯತೀಶ್ ಹೆಚ್.ಸಿ ಗುಬ್ಬಿ ಕ.ಸಾ.ಪ ಅಧ್ಯಕ್ಷರು, ಲಕ್ಷ್ಮಿನಾರಾಯಣ, ಶ್ವೇತಾ ಆಲೂರು, ಕಾಂತರಾಜು ಗುಪ್ಪಟ್ನ, ಬಿದಲೊಟಿ ರಂಗನಾಥ್ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ಮುನಿಂದ್ರ ಕುಮಾರ್ , ಅಬ್ಬಿನೊಳೆ ಸುರೇಶ್ , ತ್ರಿಮೂರ್ತಿ ಕೆ , ರಾಮಕೃಷ್ಣಯ್ಯ ಹಾಗೂ ಪುಸ್ತಕದ ಕವಿಗಳಾದ ಮಲ್ಲೇಕಾವು ಮುಕುಂದರಾಜ್ , ಮಧುಸೂದನ್ ಮುಳುಕುಂಟೆ, ಭವ್ಯ ಸುಧಾಕರ ಜಗಮನೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರ್ವಹಣೆಯನ್ನು ರಾಜ್ಯಾಧ್ಯಕ್ಷರಾದ ಭರತ್ ಕೆ.ಆರ್. ಹಾಗೂ ಅಜಯ್ ಕುಮಾರ್ , ನಾಗಭೂಷಣ್ ನಿರ್ವಹಿಸಿದರು. ನೇತ್ರ ಎಸ್ ಹಾಗೂ ಪೂಜಾ ಸಿ.ಐ. ಕಾರ್ಯಕ್ರಮ ನಿರೂಪಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW