ತುರುವೇಕೆರೆ: ತಾಲೂಕಿನ ತುರುವೇಕೆರೆ ಪಟ್ಟಣ ಪಂಚಾಯಿತಿ ನೂತನ ಪಟ್ಟಣದ ಪ್ರಥಮ ಪ್ರಜೆಯಾಗಿ ಚಾಲೆಂಜಿಂಗ್ ಚಿದಾನಂದ್ ಆಯ್ಕೆಯಾಗಿದ್ದಾರೆ.
ತುರುವೇಕೆರೆ ಪಟ್ಟಣಪಂಚಾಯ್ತಿ ನಿಕಟ ಪೂರ್ವ ಅಧ್ಯಕ್ಷರಾಗಿದ್ದ ,ಅಂಜನ್ ಕುಮಾರ್ ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು, ಈ ಸ್ಥಾನಕ್ಕೆ ಯಾವೊಬ್ಬ ಅಭ್ಯರ್ಥಿಯು ನಾಮಪತ್ರ ಸಲ್ಲಿಕೆ ಮಾಡಲಿಲ್ಲ ಏಕೈಕ ಅಭ್ಯರ್ಥಿ ಚಿದಾನಂದ್ ಅರ್ಜಿಸಲ್ಲಿಸಿದ್ದು, ಅಂತಿಮವಾಗಿ ಚಿದಾನಂದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುತ್ತಿದ್ದಂತೆಯೇ ಚಿದಾನಂದ್ ರವರಿಗೆ ಬೆಂಬಲಿಗರು ಹಾರ ಹಾಕಿ ಅಭಿನಂದಿಸಿದರು. ಇದೇ ವೇಳೆ ಪಟಾಕಿ ಸಿಡಿಸಿ, ಜೈಕಾರ ಹಾಕಿ ಸಂಭ್ರಮಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ಚಿದಾನಂದ್ ಮಾತನಾಡಿ, ನನ್ನ ಅವಿರೋಧ ಆಯ್ಕೆಗೆ ಶ್ರಮಿಸಿದ ಲೋಕಸಭಾ ಸದಸ್ಯರಿಗೂ, ಶಾಸಕರಿಗೆ ಪಟ್ಟಣ ಪಂಚಾಯಿತಿ, ಉಪಾಧ್ಯಕ್ಷ ರಿಗೂ , ಸರ್ವಸದಸ್ಯರಿಗೂ ಬೆಂಬಲಿಗರಿಗೂ ಅಭಿನಂದನೆ ಸಲ್ಲಿಸಿದರು .
ನಂತರ ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ನಡೆಸಲಾಯಿತು. ನೂತನ ಅಧ್ಯಕ್ಷರ ಮೇಲೆ ಹಾಲಿನ ಅಭಿಷೇಕ ಮಾಡಲಾಯಿತು. ರಸ್ತೆ ಮದ್ಯೆ ಜೆ.ಸಿ.ಬಿ.ಯಂತ್ರದ ಮೇಲಿಂದ ಹೂ ಮಳೆ ಸುರಿಸಿ ಅಭಿನಂದಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಅಂಜನ್ ಕುಮಾರ್, ಸದಸ್ಯರಾದ ಮಧು, ಸುರೇಶ್, ಯಜಮಾನ ಮಹೇಶ್, ಟೌನ್ ಬ್ಯಾಂಕ್ ನಿರ್ದೇಶಕರಾದ ಟಿ, ಹೆಚ್. ಗುರುದತ್ ಡಿ.ಎಸ್.ಎಸ್. ತಾಲೂಕು ಸಂಘಟನಾ ಸಂಚಾಲಕ ದಂಡಿನ ಶಿವರ ಕುಮಾರ್ , ಸುನಿಲ್ ಮತ್ತಿತರ ಸದಸ್ಯರು ಹಾಜರಿದ್ದರು.
ವರದಿ :ಸುರೇಶ್ ಬಾಬು, ಎಂ.ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy