ಪಾವಗಡ: ರಾಯದುರ್ಗ–ತುಮಕೂರು ಮಾರ್ಗದ ನೂತನ ರೈಲ್ವೇ ಕಾಮಗಾರಿಯನ್ನು ಕೇಂದ್ರ ರೈಲ್ವೇ ಖಾತೆ ಸಚಿವ ವಿ.ಸೋಮಣ್ಣ ಶನಿವಾರ ರೊಪ್ಪ ಗ್ರಾಮದ ಬಳಿ ಅಧಿಕಾರಿ ಗಳೊಂದಿಗೆ ಪರಿಶೀಲನೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, 2026 ಡಿಸೆಂಬರ್ 30 ರೊಳಗೆ ರಾಯದುರ್ಗ -ತುಮಕೂರು ಮಾರ್ಗದ ರೈಲ್ವೇ ಕಾಮಗಾರಿ ಮುಕ್ತಾಯಗೊಂಡು ಸಾರ್ವಜನಿಕರ ಉಪಯೋಗಕ್ಕೆ ಸಿದ್ದವಾಗಲಿದೆ ಎಂದು ಭರವಸೆ ನೀಡಿದರು.
ರಾಯದುರ್ಗ–ತುಮಕೂರು ರೈಲ್ವೇ ಯೋಜನೆಗೆ 700 ಕೋಟಿ ಹಾಗೂ ಚಿತ್ರದುರ್ಗ ತುಮಕೂರು ರೈಲ್ವೆ ಕಾಮಗಾರಿಗೆ 300 ಕೋಟಿ ರೂಪಾಯಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಕಾಮಗಾರಿ ಚುರುಕುಗೊಂಡಿವೆ ಎಂದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಶಾಸಕ ಎಚ್.ವಿ.ವೆಂಕಟೇಶ್, ಮಾಜಿ ಸಚಿವ ವೆಂಕಟರಮಣಪ್ಪ, ಮಾಜಿ ಶಾಸಕ ಕೆ.ಎಂ ತಿಮ್ಮರಾಯಪ್ಪ, ರಾಜ್ಯ ರೈತ ಮೋರ್ಚಾದ ಶಿವಪ್ರಸಾದ್, ಬಿಜೆಪಿಯರಂಗಣ್ಣ, ಅಶೋಕ್, ಡಾ.ವೆಂಕಟರಾಮಯ್ಯ, ಅಲಕುಂದರಾಜ್, ಜೆಡಿಎಸ್ನ ಅಂಜಿನಪ್ಪ, ಎನ್.ಎ.ಈರಣ್ಣ, ಶಂಕರರೆಡ್ಡಿ, ಬತ್ತಿನೇನಿ ನಾನಿ, ನಲ್ದಾನಿ ಸುರೇಂದ್ರ, ಸೊಗಡು ವೆಂಕಟೇಶ್ ಇದ್ದರು.
ವರದಿ : ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA