ಅಣ್ಣೋ… ಶಿವಣ್ಣೋ ಅನ್ನೋ ಅಭಿಮಾನಿಗಳ ಕೂಗು, ವಾಹನದ ಮೇಲೆ ನಿಂತು ಅಭಿಮಾನಿಗಳ ಕೈ ಸ್ಪರ್ಶಿಸಿ ಅಭಿಮಾನಿಗಳನ್ನು ಸಂತೈಸುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಈ ದೃಶ್ಯ ಕಂಡು ಬಂದಿದ್ದು, ಸರಗೂರಿನ ಶಂಕರ ಚಿತ್ರದ ಮಂದಿರದ ಆವರಣದಲ್ಲಿ.
ಇಂದು ಸರಗೂರಿನ ಶಂಕರ ಚಿತ್ರದ ಮಂದಿರದ ಆವರಣಕ್ಕೆ ಭೇಟಿ ನೀಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿ ದೇವ್ರುಗಳೊಂದಿಗೆ ಶಿವರಾಜ್ ಕುಮಾರ್ ಮನಸ್ಸು ಬಿಚ್ಚಿ ಬೆರೆತರು.
ಶಿವರಾಜ್ ಕುಮಾರ್ ಅವರ ವೇದ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ವೇಳೆ ಚಿತ್ರದ ಪ್ರಚಾರಕ್ಕೆ ಆಗಮಿಸಿದ ಶಿವರಾಜ್ ಕುಮಾರ್ ಅವರಿಗೆ ಸರಗೂರಿನಲ್ಲಿ ಅಭಿಮಾನಿಗಳು ಅದ್ದೂರಿಯ ಸ್ವಾಗತ ನೀಡಿದರು. ತಮ್ಮ ನೆಚ್ಚಿನ ನಟನನ್ನು ಕಂಡು ಸಂತಸದಿಂದ ಜೈಕಾರ ಹಾಕಿದ್ರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz